Auspicious Direction to eat food: ಜೀವನದಲ್ಲಿ ಪ್ರಗತಿ ನಿಂತುಹೋಗಿದೆ ಎಂದು ನಿಮಗೆ ಅನಿಸುತ್ತಿದೆಯೇ? ಅಥವಾ ಮನೆಯಲ್ಲಿ ಶಾಂತಿಯ ಕೊರತೆಯನ್ನು ಅನುಭವಿಸುತ್ತಿದ್ದೀರಾ? ಹೌದು ಎಂದಾದರೆ, ವಾಸ್ತು ದೋಷವು ಇದರ ಹಿಂದಿನ ದೊಡ್ಡ ಕಾರಣವಾಗಿರಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಜೀವನದಲ್ಲಿ ಪ್ರಗತಿ ನಿಂತುಹೋಗಿದೆ ಎಂದು ನಿಮಗೆ ಅನಿಸುತ್ತಿದೆಯೇ? ಅಥವಾ ಮನೆಯಲ್ಲಿ ಶಾಂತಿಯ ಕೊರತೆಯನ್ನು ಅನುಭವಿಸುತ್ತಿದ್ದೀರಾ? ಹೌದು ಎಂದಾದರೆ, ವಾಸ್ತು ದೋಷವು ಇದರ ಹಿಂದಿನ ದೊಡ್ಡ ಕಾರಣವಾಗಿರಬಹುದು. ಸರಿಯಾದ ದಿಕ್ಕಿನಲ್ಲಿ ಊಟ ಮಾಡುವುದು, ಮಲಗಲು ಸರಿಯಾದ ದಿಕ್ಕನ್ನು ಆರಿಸಿಕೊಳ್ಳುವುದು, ಪೂಜಾ ಸ್ಥಳಕ್ಕೆ ಸರಿಯಾದ ಸ್ಥಳವನ್ನು ನಿರ್ಧರಿಸುವುದು. ಈ ಸಣ್ಣ ಬದಲಾವಣೆಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು.
ವಾಸ್ತು ಶಾಸ್ತ್ರದಲ್ಲಿ ಕೆಲವು ಸರಳ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ನೀಡಲಾಗಿದೆ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳುವುದಲ್ಲದೆ, ವೃತ್ತಿ ಮತ್ತು ವ್ಯವಹಾರದಲ್ಲಿ ಅಗಾಧ ಪ್ರಗತಿಗೆ ಕಾರಣವಾಗುತ್ತದೆ.
ಇನ್ನು ನಾಳೆಯೇ ಯುಗಾದಿ ಹಬ್ಬ ಬರುತ್ತಿದೆ. ಹಿಂದೂಗಳ ಹೊಸ ವರ್ಷ ಇದಾಗಿದ್ದು, ಈ ಸಂದರ್ಭದಲ್ಲಿ ಮಾಡುವ ಪ್ರತಿಯೊಂದು ವಿಶೇಷ ಕೆಲಸಗಳೂ ಸಹ ಇಡೀ ವರ್ಷ ಉತ್ತಮ ಫಲವನ್ನು ನೀಡುತ್ತದೆ ಎಂದೇ ಹೇಳಬಹುದು. ಅದರಲ್ಲಿ ಒಂದು ಹಬ್ಬದೂಟ ಮಾಡುವ ದಿಕ್ಕು.
ಯುಗಾದಿ ಹಬ್ಬವೆಂದರೆ ಹಿಂದೂಗಳ ಪಾಲಿಗೆ ಪವಿತ್ರ ಹಬ್ಬ. ಈ ದಿನದಂದು ಹಬ್ಬದೂಟ ಮಾಡಿ ಸಂಭ್ರಮದಿಂದ ಬೇವು ಬೆಲ್ಲವನ್ನು ತಿಂದು ಹಬ್ಬ ಆಚರಣೆ ಮಾಡಲಾಗುತ್ತದೆ. ಹೀಗಿರುವಾಗ ಕೆಲವೊಂದು ವಾಸ್ತು ಸಲಹೆಗಳನ್ನು ಈ ಸಮಯದಲ್ಲಿ ಪಾಲಿಸಿದರೆ ಅದೃಷ್ಟವೇ ಒಲಿದಂತಾಗುತ್ತದೆ. ಆ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
ಯುಗಾದಿ ದಿನದಂದು ನೀರು ಕುಡಿಯುವಾಗ ನಿಮ್ಮ ಮುಖವನ್ನು ಈಶಾನ್ಯಕ್ಕೆ ಇರಿಸಿ. ಇನ್ನು ಊಟ ಮಾಡುವಾಗ ತಟ್ಟೆಯನ್ನು ಆಗ್ನೇಯಕ್ಕೆ ಇರಿಸಿ ಪೂರ್ವ ದಿಕ್ಕಿನಲ್ಲಿ ಕುಳಿತು ಊಟ ಮಾಡಿ. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ವಿಶೇಷವಾಗಿ ಸಾಕ್ಷಾತ್ ಪಾರ್ವತಿಯೇ ಅನ್ನ ತಿನ್ನಿಸಿದ ಸಮವಾಗುತ್ತದೆ ಎಂದು ನಂಬಿಕೆ ಇದೆ.
ಯುಗಾದಿ ದಿನದಂದು ಮನೆಯ ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ, ಓಂ, ಕಲಶದಂತಹ ಶುಭ ಚಿಹ್ನೆಗಳನ್ನು ಬರೆಯಿರಿ. ಇದು ಅದೃಷ್ಟವನ್ನೇ ನಿಮ್ಮ ಬಳಿಗೆ ತಂದು ನಿಲ್ಲಿಸುತ್ತದೆ. ಸಂಪತ್ತಿನ ಸುಧೆ ಇಲ್ಲಿಂದಲೇ ಹರಿದುಬರುತ್ತದೆ.
ಇನ್ನು ಅಂಗಡಿಗಳನ್ನು ಹೊಂದಿರುವವರು ಹೊಸ ವರ್ಷ ಯುಗಾದಿ ದಿನದಂದು ಪೂರ್ವ ಮತ್ತು ಉತ್ತರ ಭಾಗಗಳ ನಡುವೆ ಗಣೇಶ ಲಕ್ಷ್ಮಿಯ ಮಣ್ಣಿನ ವಿಗ್ರಹ ಅಥವಾ ಚಿತ್ರವನ್ನು ಇಡಿ. ಇದು ವ್ಯವಹಾರವನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ದೀಪ ಹಚ್ಚಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಕನ್ನಡ NEWS ಇದನ್ನು ದೃಢೀಕರಿಸುವುದಿಲ್ಲ.