ತುಟ್ಟಿಭತ್ಯೆಯ ಈ ಹೆಚ್ಚಳವು ಜೀವನ ವೆಚ್ಚ ಹೊಂದಾಣಿಕೆಯಾಗಿದ್ದು, ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದನ್ನು ಕಾರ್ಮಿಕ ಬ್ಯೂರೋ ಮಾಸಿಕವಾಗಿ ಬಿಡುಗಡೆ ಮಾಡುವ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಆಧರಿಸಿ ಲೆಕ್ಕಹಾಕಲಾಗುತ್ತದೆ.
1/6ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯ ನೌಕರರು, ಪಿಂಚಣಿದಾರರು ಮತ್ತು ಅಖಿಲ ಭಾರತ ಸೇವೆಗಳ (ಎಐಎಸ್) ಅಧಿಕಾರಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್)ಯನ್ನು ಶೇ. 55 ರಿಂದ ಶೇ. 58 ಕ್ಕೆ ಶೇ. 3 ರಷ್ಟು ಹೆಚ್ಚಿಸಿದೆ.
2/6ಈ ಆದೇಶವು ಜುಲೈ 1, 2025 ರಿಂದ ಜಾರಿಗೆ ಬಂದಿದ್ದು, ರಾಜ್ಯದ ಸಾವಿರಾರು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಪೆಮಾ ಖಂಡು ಘೋಷಿಸಿದ್ದಾರೆ
3/6ಈ ವರ್ಷದ ಆರಂಭದಲ್ಲಿ ಮೇ ತಿಂಗ್ಳಲ್ಲಿ ಶೇ. 2 ರಷ್ಟು ಡಿಎ/ಡಿಆರ್ ಹೆಚ್ಚಳವನ್ನು ಶೇ. 53 ರಿಂದ ಶೇ. 55 ಕ್ಕೆ ಮಾಡಿದ ನಂತರ, ಇದು 2025 ರಲ್ಲಿ ರಾಜ್ಯದ ಎರಡನೇ ತುಟ್ಟಿಭತ್ಯೆ ಹೆಚ್ಚಳವಾಗಿದೆ.
4/6ಈ ಘೋಷಣೆಯನ್ನು ಅರುಣಾಚಲ ಪ್ರದೇಶದ ಸೇವಾ ಸಂಘಗಳ ಒಕ್ಕೂಟ (ಕೋಸಾಪ್) ಸ್ವಾಗತಿಸಿದ್ದು, "ಈ ಹೆಚ್ಚಳದಿಂದ 75,000 ಕ್ಕೂ ಹೆಚ್ಚು ನಿಯಮಿತ ರಾಜ್ಯ ನೌಕರರು, ಪಿಂಚಣಿದಾರರು ಮತ್ತು ಎಐಎಸ್ ಅಧಿಕಾರಿಗಳು ಪ್ರಯೋಜನ ಪಡೆಯಲಿದ್ದಾರೆ. ಇದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಮರ್ಪಿತ ಸೇವೆಯನ್ನು ಪ್ರೋತ್ಸಾಹಿಸಲಿದೆ" ಎಂದು ಸಂಘ ತಿಳಿಸಿದೆ
5/6ಈ ಕ್ರಮವು ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಅನುಸರಿಸಿದೆ.
6/6