Kendra Trikona Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು 12 ವರ್ಷಗಳ ಬಳಿಕ ಅತ್ಯಂತ ಶಕ್ತಿಶಾಲಿ ರಾಜಯೋಗದೊಂದಿಗೆ ದೀಪಾವಳಿಯ ಆಗಮನವಾಗಲಿದೆ. ಇದರಿಂದ ಕೆಲವು ರಾಶಿಯವರು ದೈವಾನುಗ್ರಹಕ್ಕೆ ಪಾತ್ರರಾಗಲಿದ್ದಾರೆ. ಗುರು ಮಹಾದಶ ಪ್ರಭಾವದಿಂದಾಗಿ ಅವರ ಜೀವನದಲ್ಲಿ ಕತ್ತಲೆ ಸರಿದು ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆಯನ್ನು ಅನುಭವಿಸುತ್ತಾರೆ ಎನ್ನಲಾಗುತ್ತಿದೆ.
1/6ವೈದಿಕ ಜ್ಯೋತಿಷ್ಯದ ಪ್ರಕಾರ, ದೀಪಾವಳಿ ಹಬ್ಬಕ್ಕೂ ಮೊದಲು ದೇವಗುರು ಬೃಹಸ್ಪತಿ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಅಕ್ಟೋಬರ್ 18ರಂದು ಗುರು ಮಿಥುನ ರಾಶಿಯನ್ನು ಬಿಟ್ಟು ಕಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರೊಂದಿಗೆ ಅತ್ಯಂತ ಶಕ್ತಿಶಾಲಿ ಯೋಗಗಳಲ್ಲಿ ಒಂದಾದ ಕೇಂದ್ರ ತ್ರಿಕೋನ ರಾಜಯೋಗ ಸೃಷ್ಟಿಯಾಗಲಿದೆ.
2/6ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸುಮಾರು 12 ವರ್ಷಗಳ ಬಳಿಕ ಗುರು ಗೋಚಾರದಿಂದಾಗಿ ದೀಪಾವಳಿ ಸಂದರ್ಭದಲ್ಲಿ ಪ್ರಬಲ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತಿದೆ.
3/6ದೀಪಾವಳಿ ಹೊತ್ತಲ್ಲಿ ಕೇಂದ್ರ ತ್ರಿಕೋನ ರಾಜಯೋಗ, ಗುರು ಮಹಾದಶ ಪ್ರಭಾವದಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಂಪತ್ತಿನ ಸುರಿಮಳೆಯೇ ಆಗಲಿದೆ. ಅವರ ಅದೃಷ್ಟ ರಾತ್ರೋರಾತ್ರಿ ಕ್ಹುಲಾಯಿಸಲಿದ್ದು ಜೀವನದಲ್ಲಿ ಕಷ್ಟದ ಸಮಯ ಕಳೆದು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಸಾಗಿಸುವರು ಎನ್ನಲಾಗುತ್ತಿದೆ.
4/6ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರ ಲಗ್ನದ ಮನೆಯಲ್ಲಿ ಸೃಷ್ಟಿಯಾಗುತ್ತಿರುವ್ದರಿಂದ ಈ ಅವಧಿಯ ಗುರು ಮಹಾದಶ ಪ್ರಭಾವವು ನಿಮ್ಮ ಬದುಕಿನಲ್ಲಿ ಶತ್ರುಗಳ ವಿರುದ್ಧ ಜಯ ನೀಡಲಿದೆ. ಹಿಂದಿನ ತಪ್ಪುಗಳಿಂದ ಪಾಠ ಕಲಿತಿರುವ ನೀವು ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು, ಉದ್ಯೋಗ ರಂಗದಲ್ಲಿ ಯಶಸ್ಸಿನ ಕೀರ್ತಿ ಪತಾಕೆಯನ್ನು ಹಾರಿಸುವಿರಿ.
5/6ದೀಪಾವಳಿ ಹೊತ್ತಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರಿಗೆ ಗುರು ಬಲವನ್ನು ನೀಡಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದ್ದು ಮನೆಯಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ದಂಪತಿಗಳಿಗೆ ಮಕ್ಕಳಿಂದ ಸಂತಸ ಇಮ್ಮಡಿಗೊಳ್ಳಲಿದೆ. ವಿದೇಶ ವ್ಯವಹಾರದಲ್ಲಿ ಭರ್ಜರಿ ಲಾಭಾಂಶದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.
6/6ದೀಪಾವಳಿಗೂ ಮೊದಲು ಈ ರಾಶಿಯವರಿಗೆ ಗುರು ಬಲ ದೊರೆಯಲಿದ್ದು ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರ ಸಂಕಷ್ಟಗಳನ್ನು ದೂರ ಮಾಡಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ನಿರುದ್ಯೋಗಿಗಳಿಗೆ ಕನಸಿನ ಉದ್ಯೋಗ ದೊರೆಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.