Heart Attack First Aid: ಹೃದಯ ಸಂಬಂಧಿ ಕಾಯಿಲೆಗಳು ಈಗ ವೃದ್ಧರಲ್ಲಿ ಮಾತ್ರವಲ್ಲದೆ ಯುವ ಪೀಳಿಗೆಯಲ್ಲೂ ವೇಗವಾಗಿ ಹೆಚ್ಚುತ್ತಿವೆ. ಅಸಮತೋಲಿತ ಆಹಾರ ಪದ್ಧತಿ, ಒತ್ತಡದ ಜೀವನಶೈಲಿ ಮತ್ತು ಧೂಮಪಾನದಿಂದಾಗಿ, ಹೃದಯಾಘಾತ, ಹೃದಯ ವೈಫಲ್ಯ ಮತ್ತು ಹೃದಯ ಸ್ತಂಭನದಂತಹ ಸಮಸ್ಯೆಗಳು ಯುವಜನರಲ್ಲಿಯೂ ಕಂಡುಬರುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5 ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಹೃದಯಾಘಾತ ಎಂಬ ಮಾತು ಕೇಳಿದ ಕೂಡಲೇ ಜನರು ಭಯಭೀತರಾಗುತ್ತಾರೆ. ಆದರೆ ಒಬ್ಬ ವ್ಯಕ್ತಿಗೆ ಹೃದಯಾಘಾತವಾದರೆ, ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದರಿಂದ ಅವರ ಜೀವ ಉಳಿಸಬಹುದು. ಸಮಯಕ್ಕೆ ಸರಿಯಾಗಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ, ರೋಗಿಯ ಹೃದಯವನ್ನು ಹಾನಿಯಿಂದ ರಕ್ಷಿಸಬಹುದು. ರೋಗಿಯ ಸಾವಿನ ಅಪಾಯವನ್ನು ಕೂಡ ಕಡಿಮೆ ಮಾಡಬಹುದು.
ಹೃದಯಾಘಾತಕ್ಕೊಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡುವುದು ಉಪಯುಕ್ತವಾದರೂ, ಅದನ್ನು ಸರಿಯಾಗಿ ಕಲಿಯಬೇಕು. ಅದೇ ರೀತಿ, ಹೃದಯಾಘಾತವಾದಾಗ, ತಕ್ಷಣ ಆಸ್ಪತ್ರೆಗೆ ಹೋಗಿ ನಂತರ ಪ್ರಥಮ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಬಹುದು.
ಹೃದಯಾಘಾತವಾದಾಗ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ ಎಂದು ನೋಡೋಣ.
ಹೃದಯಾಘಾತವಾದಾಗ, ಮೊದಲು ರೋಗಿಯನ್ನು ತಂಪಾದ ಸ್ಥಳದಲ್ಲಿ ಇರಿಸಿ. ನಂತರ ಆಂಬ್ಯುಲೆನ್ಸ್ಗೆ ಕರೆ ಮಾಡಿ.
ರೋಗಿಯ ಬಟ್ಟೆ ಬಿಗಿಯಾಗಿದ್ದರೆ ಅಥವಾ ಕಾಲರ್ ಮುಚ್ಚಿದ್ದರೆ, ಅದನ್ನು ಸಡಿಲಗೊಳಿಸಲು ಪ್ರಯತ್ನಿಸಿ. ಸ್ವಲ್ಪ ಗಾಳಿಯಾಡುವಂತೆ ನೋಡಿಕೊಳ್ಳಿ.
ರೋಗಿಯು ಪ್ರಜ್ಞಾಹೀನನಾಗಿದ್ದರೆ, ಅವರ ಹೃದಯ ಬಡಿತವನ್ನು ಹೆಚ್ಚಿಸಲು CPR ನೀಡಿ. ಸಿಪಿಆರ್ ಎನ್ನುವುದು ಎದೆಯ ಸಂಕೋಚನ ಮತ್ತು ಬಾಯಿಯಿಂದ ಬಾಯಿಗೆ ರಕ್ಷಣಾ ಉಸಿರಾಟವನ್ನು ನೀಡುವ ಒಂದು ವಿಧಾನವಾಗಿದೆ. ಇದಕ್ಕಾಗಿ ಎಲ್ಲರೂ ಸೂಕ್ತ ತರಬೇತಿ ತೆಗೆದುಕೊಳ್ಳುವುದು ಒಳ್ಳೆಯದು.
ರೋಗಿಯ ಹೃದಯ ಬಡಿತವನ್ನು ಪರಿಶೀಲಿಸಿದ ನಂತರ, ಅಥವಾ ಹೃದಯಾಘಾತವಾದ ೩೦ ನಿಮಿಷದೊಳಗೆ ಆಸ್ಪಿರಿನ್ ಮಾತ್ರೆ ನೀಡಿ. ಇಲ್ಲವೇ ಅದನ್ನು ಹೃದಯಾಘಾತವಾದ ವ್ಯಕ್ತಿಯ ನಾಲಿಗೆಯಡಿಯಲ್ಲಿ ಇಡಿ. ಇಷ್ಟೆಲ್ಲಾ ಮಾಡಿದ ಬಳಿಕ ರೋಗಿಯನ್ನು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಿರಿ.
ಹೃದಯಕ್ಕೆ ಸರಿಯಾದ ಪ್ರಮಾಣದ ಆಮ್ಲಜನಕ ಪೂರೈಕೆಯಾಗದಿದ್ದರೆ, ಅದು ಹೃದಯ ಅಂಗಾಂಶದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದರಿಂದಾಗಿ ರೋಗಿಗೆ ಹೃದಯಾಘಾತವಾಗುತ್ತದೆ. ಹೃದಯಾಘಾತ ಸಂಭವಿಸುವ ಮೊದಲು, ರೋಗಿಯು ಅನೇಕ ಲಕ್ಷಣಗಳನ್ನು ಅನುಭವಿಸುತ್ತಾನೆ. ಉದಾಹರಣೆಗೆ, ಎದೆಯಲ್ಲಿ ಭಾರ, ತೀವ್ರ ಎದೆ ನೋವು, ಉಸಿರಾಟದ ತೊಂದರೆ, ಹಠಾತ್ ಬೆವರುವುದು, ಆತಂಕ ಮತ್ತು ಚಡಪಡಿಕೆ, ವಾಕರಿಕೆ ಮತ್ತು ವಾಂತಿ ಸಮಸ್ಯೆ ಹೀಗೆ ಕೆಲವೊಂದಿಷ್ಟು...
ಹೃದಯಾಘಾತವಾದಾಗ, ಮೊದಲ 15 ನಿಮಿಷಗಳಲ್ಲಿ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವುದರಿಂದ ಅವರ ಜೀವ ಉಳಿಸಬಹುದು. ಹೃದಯಾಘಾತವಾದ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವಾಗ ಯಾವುದೇ ಆತುರ ಇರಬಾರದು. ರೋಗಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸುವುದು ಉತ್ತಮ.