ಜಪಾನ್‌ನಲ್ಲಿ ಈ ಹೆಸರಿನಿಂದ ಪ್ರಸಿದ್ಧ ಗಣಪ, ವಿದೇಶಗಳಲ್ಲೂ ಗಣಪತಿ ಪೂಜೆ!

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಗಣೇಶ ಚತುರ್ಥಿಯ ಹೆಸರಿನಲ್ಲಿ ದೇಶಾದ್ಯಂತ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಗಣೇಶ ಚತುರ್ಥಿಯ ಹೆಸರಿನಲ್ಲಿ ದೇಶಾದ್ಯಂತ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಗಣಪತಿಯ ಭಕ್ತರು ಇದ್ದಾರೆ. ಜಪಾನಿಯರು ಅವನನ್ನು ಕಂಗಿಟೆನ್ ಎಂದು ಕರೆದರೆ, ಥೈಲ್ಯಾಂಡ್, ಕಾಂಬೋಡಿಯಾ, ಇಂಡೋನೇಷಿಯಾ, ಅಫಘಾನಿಸ್ತಾನ್, ನೇಪಾಳ ಮತ್ತು ಚೀನಾದಲ್ಲಿ ವಿವಿಧ ರೂಪಗಳಲ್ಲಿ ಗಣೇಶನನ್ನು ಪೂಜಿಸುತ್ತಾರೆ.

1 /7

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 13 ರಂದು ಆಚರಿಸಲಾಗುತ್ತಿದೆ. ಈ ದಿನದ ಆರಾಧನೆಯು ಸರಿಯಾದ ಸಮಯದಲ್ಲಿ ಮತ್ತು ಮುಹೂರ್ತದಲ್ಲಿ ನಡೆದರೆ, ಭಕ್ತರ ಪ್ರತಿ ಆಶಯವೂ ಪೂರ್ಣಗೊಳ್ಳುತ್ತದೆ ಎಂಬುದು ನಂಬಿಕೆ.  

2 /7

ಹತ್ತು ದಿನಗಳ ಕಾಲ ನಡೆಯುವ ಗಣೇಶ ಚತುರ್ಥಿ ಉತ್ಸವವನ್ನು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೂಷಿಕ ಮೇಲೆ ಸವಾರಿ ಮಾಡುವ ಬುದ್ಧಿವಂತಿಕೆಯ ಮತ್ತು ಸಮೃದ್ಧಿಯ ದೇವತೆಗೆ ಲಡ್ಡು ಇಷ್ಟವಾದ ಆಹಾರ. ಶಿವ ಶಂಭು ಮತ್ತು ತಾಯಿ ಪಾರ್ವತಿಯ ಪುತ್ರ ಗಣೇಶ, ಭಕ್ತರ ಆಶಯಗಳನ್ನು, ವಿನಂತಿಯನ್ನು ನೆರವೇರಿಸುತ್ತಾನೆ. ಗಣೇಶನ ಜೀವನದ ಈ ವಿಷಯಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತವೆ. ಆದರೆ ವಿಘ್ನ ವಿನಾಶಕನಿಗೆ ಸಂಬಂಧಿಸಿದ ಅನೇಕ ವಿಷಯಗಳಿವೆ.

3 /7

ದೇಶಾದ್ಯಂತ ಆಚರಿಸಲ್ಪಡುವ ಈ ಹಬ್ಬವನ್ನು ಮಹಾರಾಷ್ಟ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 1893ರಲ್ಲಿ ಲೋಕಮಾನ್ಯ ತಿಲಕರು ಈ ಹಬ್ಬವನ್ನು ಖಾಸಗಿಯಾಗಿ ಸಾಮೂಹಿಕ ಸಂಘಟನೆಯಾಗಿ ಪರಿವರ್ತಿಸಿದರು. ಅವರ ಉದ್ದೇಶ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಮತ್ತು ಬ್ರಿಟಿಷರ ವಿರುದ್ಧ ಚಳವಳಿಯನ್ನು ಉತ್ತೇಜಿಸಲು ಇದು ಉತ್ತಮ ಪ್ರೋತ್ಸಾಹದ ವಿಷಯವಾಗಿತ್ತು.

4 /7

ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತವೆಂದು ತಿಳಿಯಲಾಗಿದೆ. ಒಂದು ವಿವರಣೆಯ ಪ್ರಕಾರ,ಗಣೇಶನ ದೈವಿಕ ವಾಹನ,ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. 

5 /7

ಹಿಂದಿನ ಕಾಲದಲ್ಲಿ ಭಾರತೀಯ ವ್ಯಾಪಾರಿಗಳು ಪ್ರವಾಸ ಕೈಗೊಳ್ಳುವಾಗ ತಮ್ಮೊಂದಿಗೆ ಗಣೇಶನ ವಿಗ್ರಹವನ್ನೂ ತೆಗೆದುಕೊಂಡು ಹೋಗುತ್ತಿದ್ದರು ಎಂದು ಹೇಳಲಾಗುತ್ತದೆ. ಹೀಗಾಗಿ ಗಣಪ ವಿದೇಶಗಳಲ್ಲೂ ಪ್ರಸಿದ್ದನಾಗಿದ್ದಾನೆ. ಜಪಾನ್‌ನಲ್ಲಿ ಗಣಪತಿ 'ಕಂಗಿಟೆನ್' ಎಂಬ ಹೆಸರಿನಿಂದ ಪ್ರಸಿದ್ಧ. ಥೈಲ್ಯಾಂಡ್, ಕಾಂಬೋಡಿಯಾ, ಇಂಡೋನೇಷಿಯಾ, ಅಫಘಾನಿಸ್ತಾನ್, ನೇಪಾಳ ಮತ್ತು ಚೀನಾದಲ್ಲಿ ವಿವಿಧ ರೂಪಗಳಲ್ಲಿ ಗಣೇಶನನ್ನು ಪೂಜಿಸುತ್ತಾರೆ.

6 /7

ಉತ್ತರ ಭಾರತದಲ್ಲಿ ಮಹಾಭಾರತವನ್ನು ವೇದ ವ್ಯಾಸರು ದೇವರಿಗೆ(ಗಣೇಶನಿಗೆ) ಹೇಳಿದ್ದು, ಗಣೇಶನು ಅದನ್ನು ಪುಟಗಳಲ್ಲಿ ಬರೆದಿದ್ದಾನೆ ಎಂದು ಹೇಳಲಾಗುತ್ತದೆ. ಗಣೇಶನನ್ನು "ಓಂಕಾರ" ಎಂದು ಕರೆಯಲಾಗುತ್ತದೆ. ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತಿದೆ. ಈ ಕಾರಣದಿಂದ ಗಣೇಶನನ್ನು ಇಡೀ ವಿಶ್ವದದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. 

7 /7

ಗಣಪತಿ ಜಾಗತಿಕ ವಾಗಿ ಪೂಜಿಸಲ್ಪಡುವ ದೇವತೆ. ಹೀಗಾಗಿಯೇ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಗಣೇಶನಿಗೊಂದು ಸ್ಥಾನವಿದೆ. ಭಾರತದ ಪಕ್ಕದ ದೇಶ ಶ್ರೀಲಂಕಾದಲ್ಲಿ 14 ಪುರಾತನ ಗಣೇಶ ದೇವಾಲಯಗಳಿವೆ. ಕೊಲಂಬೊಗೆ ಹತ್ತಿರದಲ್ಲರುವ ಕೆಲನಿಯಾ ಬೌದ್ಧ ದೇವಾಲಯದದಲ್ಲಿ ಗಣೇಶನ ಶಿಲ್ಪ ಕಲಲಾಕೃತಿಗಳನ್ನು ನೋಡಬಹುದು. ಅದೇರೀತಿ ನೇಪಾಳ, ಬಾಂಗ್ಲಾ ದೇಶದಲ್ಲಿಯೂ ಗಣೇಶ ದೇವಾಲಯವಿದೆ. ಮಧ್ಯಯುಗದ ಸಮಯದಲ್ಲಿ ದೂರದ ದೇಶಗಳಾದ ದಕ್ಷಿಣ ಮತ್ತು ಮಧ್ಯ  ಅಮೆರಿಕ, ಮ್ಯಾಕ್ಸಿಕೊ, ಕಾಂಬೊಡಿಯಾ,   ಜಪಾನ್ ಮತ್ತು ಇರಾನ್ಗಳಲ್ಲಿ ಗಣೇಶ ದೇವಾಲಯಗಳನ್ನು ನಿರ್ಮಾಣಮಾಡಲಾಗಿತ್ತು. ಅಲ್ಲದೇ ಹಿಂದೂ ಧರ್ಮದ ಪ್ರಭಾವ ಉತ್ತುಂಗದಲ್ಲಿದ್ದ ಕಾಲದಲ್ಲಿ ಶ್ರೀಲಂಕಾ, ತೈಲ್ಯಾಂಡ್, ಇಂಡೋನೇಶಿಯಾ, ಚೀನಾದಲ್ಲಿಯೂ ಹಲವಾರು ಗಣೇಶ ದೇವಾಲಯಗಳು ಸ್ಥಾಪನೆಯಾಗಿದ್ದವು. ಆಧುನಿಕ 21ನೇ ಶತಮಾನದಲ್ಲಿ ಬ್ರಿಟನ್, ಕೆನಡಾ ಆಸ್ಟ್ರೇಲಿಯಾ, ಪ್ರಾನ್ಸ್, ಜರ್ಮನಿ ಮತ್ತು ಅಮೆರಿಕದಲ್ಲಿ ಬ್ರಹದಾಕಾರದ ಗಣೇಶ ದೇವಾಲಯಗಳು ನಿರ್ಮಾಣ ಗೊಂಡಿವೆ.