ಜ್ಯೋತಿಷಿಗಳು ಹೇಳುವಂತೆ ಶನಿಯ ಸ್ಥಾನದಲ್ಲಿನ ಈ ಬದಲಾವಣೆಯು ಗಮನಾರ್ಹ ಸಂಪತ್ತನ್ನು ತರುತ್ತದೆ. ಗಣನೀಯ ಪ್ರಮಾಣದಲ್ಲಿ ಸಂಪತ್ತಿನ ಹರಿವಿಗೆ ಕಾರಣವಾಗುತ್ತದೆ. ಬಡ್ತಿ, ವೇತನದಲ್ಲಿ ಹೆಚ್ಚಳ, ಬಡ್ತಿಗೆ ಅವಕಾಶಗಳು ಮತ್ತು ಆರ್ಥಿಕ ಅಭಿವೃದ್ದಿ ಸೇರಿದಂತೆ ಪ್ರತಿ ಹಂತದಲ್ಲಿಯೂ ಯಶಸ್ಸು ಸಿಗುತ್ತದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ, ಒಂಭತ್ತು ಗ್ರಹಗಳಲ್ಲಿ, ಶನಿಗ್ರಹವು ಅತ್ಯಂತ ಮಹತ್ವದ್ದಾಗಿದೆ.ಶನಿದೇವನ ಸಂಚಾರ ಮಾತ್ರವಲ್ಲ, ಸ್ಥಾನಗಳಲ್ಲಿನ ಬದಲಾವಣೆಗಳು ಸಹ ಮಹತ್ವದ್ದಾಗಿವೆ. ಆ ಅರ್ಥದಲ್ಲಿ, ಶನಿಯ ಸಂಚಾರ, ಶನಿಯ ಹಿಮ್ಮುಖ ಸಂಚಾರ, ಶನಿಯ ಉದಯ ಮತ್ತು ಶನಿಯ ಅಸ್ತ ಸೇರಿದಂತೆ ಶನಿಯ ಸ್ಥಾನಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುವ ಶನಿ ದೇವರು ಕುಂಭ ರಾಶಿಯಿಂದ ಮೀನ ರಾಶಿಗೆ ಸ್ಥಳಾಂತರ ಮಾಡಿಯಾಗಿದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸಂಚಾರ ಮಾಡುವ ಶನಿ ದೇವರು ತನ್ನ ಚಿನ್ನದ ಪಾದದ ಮೇಲೆ ಮೀನ ರಾಶಿಯನ್ನು ಪ್ರವೇಶಿಸಿದ್ದು ಗಮನಾರ್ಹ.
ಶನಿದೇವನಿಗೆ ನಾಲ್ಕು ಪಾದಗಳಿವೆ ಎಂದು ಹೇಳಲಾಗುತ್ತದೆ.ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣ. ಶನಿಯು ಸಂಚಾರ ಮಾಡುತ್ತಿರುವ ಮನೆಗಳನ್ನು ಅವಲಂಬಿಸಿ ಈ ಪಾದಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಜ್ಯೋತಿಷಿಗಳು ಹೇಳುವಂತೆ ಶನಿಯ ಸ್ಥಾನದಲ್ಲಿನ ಈ ಬದಲಾವಣೆಯು ಗಮನಾರ್ಹ ಸಂಪತ್ತನ್ನು ತರುತ್ತದೆ. ಗಣನೀಯ ಪ್ರಮಾಣದಲ್ಲಿ ಸಂಪತ್ತಿನ ಹರಿವಿಗೆ ಕಾರಣವಾಗುತ್ತದೆ. ಬಡ್ತಿ, ವೇತನದಲ್ಲಿ ಹೆಚ್ಚಳ, ಬಡ್ತಿಗೆ ಅವಕಾಶಗಳು ಮತ್ತು ಆರ್ಥಿಕ ಅಭಿವೃದ್ದಿ ಸೇರಿದಂತೆ ಪ್ರತಿ ಹಂತದಲ್ಲಿಯೂ ಯಶಸ್ಸು ಸಿಗುತ್ತದೆ.
ಶನೀಶ್ವರನ ಅನುಗ್ರಹದ ಕಾರಣದಿಂದ ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಶನಿ ದೇವನ ಕಾರಣದಿಂದಲೇ ಕೆಲವು ರಾಶಿಯವರ ಜೀವನದಲ್ಲಿ ರಾಜಯೋಗ ಆರಂಭವಾಗಿದೆ. ಚಿನ್ನದ ಪಾದದ ಮೂಲಕ ನಡೆಯುವ ಶನಿದೇವ ಈ ರಾಶಿಯವರ ಜೀವನವನ್ನೂ ಬಂಗಾರವಾಗಿಸುತ್ತಾನೆ.
ವೃಷಭ ರಾಶಿ : ಅಪಾರ ಪ್ರಮಾಣದ ಸಂಪತ್ತು ಹರಿದು ಬರುವುದು. ಶತ್ರುಗಳ ಪಿತೂರಿ ವಿಫಲವಾಗುವುದು. ಹಣ, ಸ್ಥಾನಮಾನ ಮತ್ತು ಗೌರವ ಎಲ್ಲವೂ ಪ್ರಾಪ್ತಿಯಾಗುವುದು. ಸವಾಲುಗಳು ಎದುರಾದರೂ ಶನಿದೇವನ ಕೃಪೆಯಿಂದ ಆ ಸವಾಲನ್ನು ಎದುರಿಸಿ ಗೆಲ್ಲುವಿರಿ.
ಮಿಥುನ ರಾಶಿ : ಶನೀಶ್ವರನ ಕೃಪೆಯಿಂದ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರ್ಥಿಕ ಲಾಭದಿಂದ ಮನಸ್ಸಿಗೆ ಸಂತೋಷ ಸಿಗುವುದು. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ, ಶಾಂತಿ ನೆಲೆಸುತ್ತದೆ.
ತುಲಾ ರಾಶಿ : ತುಲಾ ರಾಶಿಯವರಿಗೆ ಚಿನ್ನದ ಪಾದಗಳ ಮೇಲೆ ನಡೆಯುವ ಶನಿ ದೇವರು ಶುಭ ಫಲಗಳನ್ನು ನೀಡುತ್ತಾನೆ. ಕೆಲಸ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಮತ್ತು ಲಾಭ ಸಿಗುವುದು. ಜೀವನದಲ್ಲಿ ಮುಂದಿನ ಹಂತಕ್ಕೆ ಮುನ್ನಡೆಯಲು ಅವಕಾಶಗಳು ಲಭಿಸುವುದು.
ಮೀನ ರಾಶಿ : ಪ್ರಸ್ತುತ ಶನಿದೆಸೆ ನಡೆಯುತ್ತಿದ್ದರೂ, ಇವರ ಮೇಲೆ ಶನಿದೇವರ ವಿಶೇಷ ಕೃಪೆ ಇರುವುದು. ಆರ್ಥಿಕ ಲಾಭ ಗಳಿಸುವ ಅವಕಾಶ ಸಿಗುತ್ತದೆ.ಕಷ್ಟಗಳಿಗೆ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯ ಸಿಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಅವಧಿಯಾಗಿರಲಿದೆ. ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಾರೆ.
ಸೂಚನೆ :ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ZEE NEWS KANNADA ಇದನ್ನು ಅನುಮೋದಿಸುವುದಿಲ್ಲ.