Blood Sugar Control Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಕೆಲವು ಹಣ್ಣುಗಳ ಸೇವನೆ ತುಂಬಾ ಪ್ರಯೋಜನಕಾರಿ.. ಅದರಂತೆ ಕೆಲವೊಂದಿಷ್ಟು ಹಣ್ಣಿನ ಬೀಜಗಳು ಸಹ ಬ್ಲಡ್ ಶುಗರ್ನ್ನು ಇಡೀ ದಿನ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತವೆ..
ಕರಬೂಜ ಹಣ್ಣು ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟ ಪಟ್ಟು ತಿನ್ನುವ ರಸಭರಿತ ಹಣ್ಣಾಗಿದೆ.. ಇದನ್ನು ಸೇವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ..
ಕರಬೂಜ ಹಣ್ಣು ಮಾತ್ರ ಆರೋಗ್ಯಕ್ಕೆ ಉಪಯುಕ್ತವಲ್ಲ.. ಅದರ ಬೀಜವೂ ಮಾನವನ ದೇಹಕ್ಕೆ ಅವಶ್ಯವಾಗಿದೆ ಎನ್ನುವುದು ನಿಮಗೆ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯಿರಿ..
ಹೌದು ಈ ಬೇಸಿಗೆಯಲ್ಲಿ ಬ್ಲಡ್ ಶುಗರ್ ಹೆಚ್ಚಾಗುವುದು ಸಾಮಾನ್ಯ ಆದರೆ ಅದನ್ನು ಹಾಗೇ ಬಿಡುವುದು ಅಪಾಯಕಾರಿ.. ಇದಕ್ಕೆ ಪರಿಹಾರವಾಗಿ ಈ ಕರಬೂಜ ಹಣ್ಣಿನ ಒಂದು ಬೀಜ ಸಾಕು..
ಕರಬೂಜ ಹಣ್ಣಿನ ಬೀಜವನ್ನು ದಿನಕ್ಕೆ ಒಂದರಂತೆ ಸೇವಿಸುತ್ತಾ ಇದ್ದರೆ ಬ್ಲಡ್ ಶುಗರ್ ಇಡೀ ದಿನ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ..
ಬರೀ ಬ್ಲಡ್ ಶುಗರ್ ನಿಯಂತ್ರಣ ಮಾತ್ರವಲ್ಲದೇ ತೂಕ ಇಳಿಕೆಗೂ ಈ ಬೀಜ ಸಹಾಯ ಮಾಡುತ್ತದೆ.. ನಿಯಮಿತವಾಗಿ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು..
ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.