Unheard Love Story: ಎಲ್ಐಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನೇ ಪ್ರೀತಿಸಿ ಮದುವೆಯಾದ ಉದ್ದವ್ ಠಾಕ್ರೆ..!

Uddav Thackeray love story: ಆ ಯುವಕನದು ಮಹಾರಾಷ್ಟ್ರ ರಾಜಕೀಯದಲ್ಲಿಯೇ ಪ್ರಭಾವಶಾಲಿ ಕುಟುಂಬ, ಸದಾ ಶಾಂತ ಚಿತ್ತದ ವ್ಯಕ್ತಿ, ಅಚ್ಚರಿ ಎಂದರೆ ಸುಮಾರು 60 ವರ್ಷಕಾಲ ರಾಜಕೀಯದಲ್ಲಿ ಸಕ್ರೀಯರಾಗಿದ್ದರೂ ಅವರ ತಂದೆಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿರಲಿಲ್ಲ, ಆದರೆ ತನ್ನ ಜೆಂಟಲ್ ಮ್ಯಾನ್ ನಡವಳಿಕೆಯಿಂದಲೇ ಮುಖ್ಯಮಂತ್ರಿಯಾಗುವ ಅವಕಾಶ ಗಿಟ್ಟಿಸಿಕೊಂಡವರು ಈ ವ್ಯಕ್ತಿ. ಹೌದು, ನಾವು ಈಗ ಹೇಳುತ್ತಿರುವ ವ್ಯಕ್ತಿ ಯಾರು? ಎನ್ನುವುದರ ಬಗ್ಗೆ ತಿಳಿದಿರಬೇಕು..! ಆ ವ್ಯಕ್ತಿ ಬೇರೆ ಯಾರೂ ಅಲ್ಲ ಉದ್ದವ ಬಾಳಾ ಸಾಹೇಬ್ ಠಾಕ್ರೆ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಉದ್ದವ ಬಾಳಾಸಾಹೇಬ್ ಠಾಕ್ರೆ ಜುಲೈ 27, 1960 ರಂದು ಬಾಳಾಸಾಹೇಬ್ ಠಾಕ್ರೆ ಮತ್ತು ಮೀನಾ ಠಾಕ್ರೆ ದಂಪತಿಗಳಿಗೆ ಜನಿಸಿದರು.ಮುಂಬೈನ ಬಾಲ್ಮೋಹನ್ ವಿದ್ಯಾಮಂದಿರದಿಂದ ಶಾಲಾ ಶಿಕ್ಷಣವನ್ನು ಪೂರೈಸಿದ ಅವರು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಸರ್ ಜೆ.ಜೆ. ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್‌ನಲ್ಲಿ ಫೋಟೋಗ್ರಾಫಿಯಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡರು.ಪೂರ್ಣಾವಧಿ ರಾಜಕಾರಣಿಯಾಗುವ ಮೊದಲು ಕೆಲ ಸಮಯದವರೆಗೆ ಅವರು ವೃತ್ತಿಪರ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದರು.

2 /7

ಉದ್ಧವ್ ಠಾಕ್ರೆ ಅವರು ಮೊದಲ ಬಾರಿಗೆ 2002 ರಲ್ಲಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಮಯದಲ್ಲಿ ಶಿವಸೇನೆಯ ಪ್ರಚಾರ ಉಸ್ತುವಾರಿಯಾಗಿ ಕೆಲಸ ಮಾಡುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. 2006 ರಲ್ಲಿ, ಉದ್ಧವ್ ಅವರನ್ನು ಶಿವಸೇನೆಯ ಮುಖವಾಣಿ ಸಾಮ್ನಾ (ಮರಾಠಿ ಭಾಷೆಯ ಪತ್ರಿಕೆ) ದ ಮುಖ್ಯ ಸಂಪಾದಕರಾಗಿ ನೇಮಿಸಲಾಯಿತು.2006 ರಲ್ಲಿ ತಮ್ಮ ಸೋದರಸಂಬಂಧಿ ರಾಜ್ ಠಾಕ್ರೆ ತಮ್ಮದೇ ಆದ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪಿಸಲು ನಿರ್ಧರಿಸಿದ ನಂತರ ಅವರು ಅವರೊಂದಿಗೆ ಅಂತರ ಕಾಯ್ದುಕೊಂಡರು.ತಂದೆ ಬಾಳಾಸಾಹೇಬ್ ಠಾಕ್ರೆ ನಿಧನದ ನಂತರ ಉದ್ಧವ್ 2013 ರಲ್ಲಿ ಶಿವಸೇನೆಯ ನಾಯಕರನ್ನಾಗಿ ನೇಮಕ ಮಾಡಲಾಯಿತು. ಇದೇ ವೇಳೆ 2019 ರಲ್ಲಿ ಎನ್ಡಿಎ ಮೈತ್ರಿಕೂಟದ ಸಖ್ಯವನ್ನು ತೊರೆದು ಅವರು ಯುಪಿಎ ಜೊತೆಗೆ ಮೈತ್ರಿ ಮಾಡಿಕೊಂಡರು. ಮುಂದೆ ಅವರು ಯುಪಿಎ ಬೆಂಬಲದಿಂದ 2019 ರಿಂದ 2022 ರ ವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು.

3 /7

ರಶ್ಮಿ ಠಾಕ್ರೆ ಉದ್ಧವ್ ಠಾಕ್ರೆ ಅವರ ಸೋದರಸಂಬಂಧಿ, ರಾಜ್ ಠಾಕ್ರೆ ಅವರ ಸಹೋದರಿ, ಜಯವಂತಿ ದೇಶಪಾಂಡೆ ಅವರ ಪ್ರೇಮಕಥೆಯಲ್ಲಿ  ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ರಶ್ಮಿ ಜೀವ ವಿಮಾ ನಿಗಮದಲ್ಲಿ ಕೆಲಸ ಮಾಡುತ್ತಿದ್ದಾಗ ಜಯವಂತಿಯವರ ಪರಿಚಯವಾಯಿತು. ಇದಾದ ನಂತರ ಇಬ್ಬರೂ ಪರಸ್ಪರ ಸ್ನೇಹಿತೆಯರಾದರು.

4 /7

ರಶ್ಮಿ ಮತ್ತು ಜಯವಂತಿ ಆತ್ಮೀಯ ಸ್ನೇಹಿತರಾದ ನಂತರ, ರಶ್ಮಿ ಅವರನ್ನು ತನ್ನ ಸೋದರಸಂಬಂಧಿ-ಸಹೋದರ ಉದ್ಧವ್‌ಗೆ ಪರಿಚಯಿಸಿದರು. ಅವರಿಬ್ಬರೂ ಮೊದಲ ಭೇಟಿಯಲ್ಲಿಯಲ್ಲಿಯೇ ಇಷ್ಟಪಟ್ಟರು. ಸ್ವಲ್ಪ ಸಮಯಗಳ ವರೆಗೆ ಪರಸ್ಪರ ಡೇಟಿಂಗ್ ಮಾಡಿದ ನಂತರ, ಉದ್ಧವ್ ಮತ್ತು ರಶ್ಮಿ 1989 ರಲ್ಲಿ ವಿವಾಹವಾದರು.

5 /7

ರಶ್ಮಿ ಠಾಕ್ರೆ ಅವರು ಮಹಾರಾಷ್ಟ್ರದ ಪ್ರತಿಷ್ಠಿತ ಶಾಲೆಯಲ್ಲಿ ಔಪಚಾರಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ವಿಜಿ ವಾಝೆ ಕಾಲೇಜಿಗೆ ಪ್ರವೇಶ ಪಡೆದು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ರಶ್ಮಿ 1987 ರಲ್ಲಿ ಭಾರತೀಯ ಜೀವ ವಿಮಾ ನಿಗಮದಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡಿದರು.

6 /7

ಉದ್ಧವ್ ಅವರನ್ನು ಮದುವೆಯಾದ ನಂತರ, ಅವರು ಸಾಮ್ನಾ ಮತ್ತು ಮಾರ್ಮಿಕ್ ಪತ್ರಿಕೆಗಳ ಪ್ರಧಾನ ಸಂಪಾದಕರಾದರು. ರಾಜಕೀಯ ತಜ್ಞರ ಪ್ರಕಾರ, ಉದ್ಧವ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ಮತ್ತು ಯುಪಿಎ ಜೊತೆ ಮೈತ್ರಿ ಮಾಡಿಕೊಳ್ಳುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.

7 /7

ರಶ್ಮಿ ಸಾಮಾನ್ಯ ಕುಟುಂಬದಿಂದ ಬಂದರು ಸಹ ರಾಜಕೀಯ ತಂತ್ರಜ್ಞರಾಗಿ ರೂಪಾಂತರಗೊಂಡ ರೀತಿ ನಿಜಕ್ಕೂ ಆಶ್ಚರ್ಯಕರವಾಗಿದೆ. ತಮ್ಮ ಪತಿ ಉದ್ಧವ್ ಠಾಕ್ರೆ ಅವರು ಅಲ್ಪಾವಧಿಯಲ್ಲಿಯೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಕನಸನ್ನು ನನಸಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಉದ್ಧವ್ ಮತ್ತು ರಶ್ಮಿ ಅವರಿಗೆ ಆದಿತ್ಯ ಠಾಕ್ರೆ ಮತ್ತು ತೇಜಸ್ ಠಾಕ್ರೆ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.