35 ವರ್ಷದ ನಂತರ ಕುಬೇರನಿಗೆ ಪ್ರಿಯವಾದ ಈ 4 ರಾಶಿಯವರಿಗೆ ಹಣ ಗಳಿಸುವ ಅವಕಾಶ: ನಿಮ್ಮ ರಾಶಿಯೂ ಇದೆಯಾ ನೋಡಿ

ತಾಯಿ ಲಕ್ಷ್ಮಿದೇವಿಯು ಸಂಪತ್ತಿನ ದೇವತೆಯಾಗಿರುವಂತೆ, ಕುಬೇರನನ್ನು ಸಹ ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಗೆ ಕುಬೇರನ ಆಶೀರ್ವಾದವಿದ್ದರೆ, ಆ ವ್ಯಕ್ತಿಯು ಅಪಾರ ಸುಖ-ಸಂಪತ್ತನ್ನು ಆನಂದಿಸುತ್ತಾನೆಂದು ನಂಬಲಾಗಿದೆ.

Written by - Puttaraj K Alur | Last Updated : Jul 29, 2025, 05:20 PM IST
  • ಕುಬೇರನಿಂದ ವಿಶೇಷ ಆಶೀರ್ವಾದದಿಂದ ವೃಷಭ ರಾಶಿಯವರು ಐಷಾರಾಮಿ ಜೀವನ ನಡೆಸುತ್ತಾರೆ
  • ತುಲಾ ರಾಶಿಯವರಿಗೆ ತಾಯಿ ಲಕ್ಷ್ಮಿದೇವತೆ ಮತ್ತು ಕುಬೇರ ದೇವರು ವಿಶೇಷ ಆಶೀರ್ವಾದ ನೀಡುತ್ತಾರೆ
  • ಕರ್ಕಾಟಕ ರಾಶಿಯವರು ಅದೃಷ್ಟದ ಬೆಂಬಲದಿಂದ ಈ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ
35 ವರ್ಷದ ನಂತರ ಕುಬೇರನಿಗೆ ಪ್ರಿಯವಾದ ಈ 4 ರಾಶಿಯವರಿಗೆ ಹಣ ಗಳಿಸುವ ಅವಕಾಶ: ನಿಮ್ಮ ರಾಶಿಯೂ ಇದೆಯಾ ನೋಡಿ

Add Zee News as a Preferred Source

Kubera Favourite Zodiac Signs

: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನಗಳು ಮತ್ತು ಅವುಗಳ ಸಂಚಾರವು ವ್ಯಕ್ತಿಯ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಕೆಲವು ಗ್ರಹಗಳ ಶುಭ ಸ್ಥಾನಗಳು ಮತ್ತು ಅವುಗಳ ಅನುಕೂಲಕರ ಸಂಚಾರವು ಧನ ಯೋಗವನ್ನು ಉಂಟುಮಾಡುತ್ತದೆ. ವಿಶೇಷವಾಗಿ 35 ವರ್ಷಗಳ ನಂತರ ಕೆಲವು ರಾಶಿಗಳು ಹಣವನ್ನು ಗಳಿಸುವ ಮತ್ತು ಅಪಾರ ಸಂಪತ್ತನ್ನು ಸಂಗ್ರಹಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.

ತಾಯಿ ಲಕ್ಷ್ಮಿದೇವಿಯು ಸಂಪತ್ತಿನ ದೇವತೆಯಾಗಿರುವಂತೆ, ಕುಬೇರನನ್ನು ಸಹ ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಗೆ ಕುಬೇರನ ಆಶೀರ್ವಾದವಿದ್ದರೆ, ಆ ವ್ಯಕ್ತಿಯು ಅಪಾರ ಸುಖ-ಸಂಪತ್ತನ್ನು ಆನಂದಿಸುತ್ತಾನೆ. ಕುಬೇರನಿಗೆ ಪ್ರಿಯವಾದ ಕೆಲವು ರಾಶಿಗಳಿವೆ. ಇಂತಹ ರಾಶಿಗಳಿಗೆ ಸೇರಿದ ಜನರು 35 ವರ್ಷಗಳ ನಂತರ ಇದ್ದಕ್ಕಿದ್ದಂತೆಯೇ ಹಣ ಮತ್ತು ಆಸ್ತಿಯನ್ನು ಪಡೆಯುತ್ತಾರೆಂದು ಹೇಳಲಾಗುತ್ತದೆ. ನೀವು ಈ ರಾಶಿಯಲ್ಲಿ ಇದ್ದೀರಾ ಎಂಬುದರ ಬಗ್ಗೆ ತಿಳಿಯಿರಿ....

ವೃಷಭ ರಾಶಿಯ ಅಧಿಪತಿ ಶುಕ್ರ. ಇದು ಸಂಪತ್ತು, ಕೀರ್ತಿ, ಐಷಾರಾಮಿ ಮತ್ತು ಖ್ಯಾತಿಗೆ ಕಾರಣವಾಗಿದೆ. ಈ ರಾಶಿಯಯ ಜನರು ಭಗವಾನ್ ಕುಬೇರನಿಂದ ವಿಶೇಷ ಆಶೀರ್ವಾದವನ್ನು ಹೊಂದಿದ್ದಾರೆ. ಇದರಿಂದ ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಅವರಿಗೆ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತೀರಿ.

ಇದನ್ನೂ ಓದಿ: ಬಡವನನ್ನೂ ಕುಬೇರನಾಗಿಸುವ ಅತೀ ಲಾಭದಾಯಕ ಬಳ್ಳಿ! ಒಮ್ಮೆ ಬೆಳೆದರೆ ಪ್ರತಿ ತಿಂಗಳು 15 ಲಕ್ಷ ಆದಾಯ ನೀಡುತ್ತೆ... ಇದರ ಕೆಜಿ ಬೆಲೆ ಬರೊಬ್ಬರಿ 50 ಸಾವಿರ

ಶುಕ್ರನು ತುಲಾ ರಾಶಿಯ ಅಧಿಪತಿಯೂ ಆಗಿದ್ದಾನೆ. ತುಲಾ ರಾಶಿಯವರಿಗೆ ತಾಯಿ ಲಕ್ಷ್ಮಿದೇವತೆ ಮತ್ತು ಕುಬೇರ ದೇವರು ವಿಶೇಷ ಆಶೀರ್ವಾದ ನೀಡುತ್ತಾರೆ. ಅಲ್ಲದೆ ಈ ಜನರು ಕಠಿಣ ಪರಿಶ್ರಮಿಗಳು. ಅವರು ತುಂಬಾ ಒಳ್ಳೆಯ ನಡವಳಿಕೆಯನ್ನು ಹೊಂದಿರುತ್ತಾರೆ. ಅಲ್ಲದೆ ಅವರು ತುಂಬಾ ಬುದ್ಧಿವಂತರು. ಈ ಗುಣಗಳಿಂದ ಅವರು ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ಅಲ್ಲದೆ ಅಪಾರ ಸುಖ-ಸಂಪತ್ತಿನ ಜೊತೆಗೆ ಶ್ರೀಮಂತರಾಗಿ ಐಷಾರಾಮಿ ಜೀವನ ನಡೆಸುತ್ತಾರೆ. 

ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದ ಜನರು ತೀಕ್ಷ್ಣ ಮನಸ್ಸನ್ನು ಹೊಂದಿರುತ್ತಾರೆ. ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದೃಢವಾಗಿರುತ್ತಾರೆ. ಈ ರಾಶಿಯ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಈ ಜನರು ಹಣವನ್ನು ಸಂಗ್ರಹಿಸುವುದರಲ್ಲಿ ಮತ್ತು ಶ್ರೀಮಂತರಾಗುವುದರಲ್ಲಿ ಪರಿಣಿತರು. ಅದೃಷ್ಟದ ಬೆಂಬಲದಿಂದ ಈ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ. 

ಧನು ರಾಶಿಯ ಅಧಿಪತಿ ಗುರು. ಅವರು ಸಂತೋಷ, ಅದೃಷ್ಟ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾರೆ. ಈ ಜನರು ಹುಟ್ಟಿನಿಂದಲೇ ಅದೃಷ್ಟವಂತರು. ಅವರು ಕುಬೇರನ ಆಶೀರ್ವಾದವನ್ನೂ ಪಡೆಯುತ್ತಾರೆ. ಅದೃಷ್ಟದ ಬೆಂಬಲದಿಂದ ಈ ಜನರು ಸುಲಭವಾಗಿ ಹಣ ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುವ ಈ ರಾಶಿಯವರು ದೊಡ್ಡಮಟ್ಟದ ಯಶಸ್ಸು ಪಡೆಯುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಸಾಧಿಸುವ ಇವರಿಗೆ ಕುಬೇರ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ. 

ಇದನ್ನೂ ಓದಿ: ಶನಿಯ ಪುಷ್ಯ ನಕ್ಷತ್ರದಲ್ಲಿ ಬುಧ ಗ್ರಹದ ಸಂಚಾರ: ಈ 4 ರಾಶಿಯ ಜನರ ಅದೃಷ್ಟ ಹೆಚ್ಚಾಗುತ್ತದೆ..!

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News