)
Ganesh Chaturthi 2025 : ವರ್ಷದಲ್ಲಿ ಗಣೇಶನನ್ನು ಮೆಚ್ಚಿಸಲು ಉತ್ತಮ ಸಮಯವೆಂದರೆ ಗಣೇಶ ಚತುರ್ಥಿ. ಅದಕ್ಕಾಗಿಯೇ ದೇಶದಾದ್ಯಂತ ಗಣೇಶ ಚತುರ್ಥಿಯಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿಯನ್ನು ಪ್ರತಿಷ್ಠಾಪಿಸಿ, ಹತ್ತು ದಿನ ಭಕ್ತಿಯಿಂದ ಪೂಜಿಸಿ ಅನಂತ ಚೌಡಶದಂದು ವಿಸರ್ಜನೆ ಮಾಡುತ್ತಾರೆ.
ಗಣೇಶ ಹಬ್ಬದಂದು ಪಾಲಿಸಬೇಕಾದ ಬಹು ಮುಖ್ಯ ನಿಯಮಗಳಿವೆ.: ಶಾಸ್ತ್ರಗಳ ಪ್ರಕಾರ, ನಿಜವಾದ ಮಹಿಮೆ ಎಂದರೆ ಮಣ್ಣಿನ ಗಣೇಶನನ್ನು ತಯಾರಿ ಮತ್ತು ಪ್ರತಿಷ್ಠಾಪಿಸಿ ಪೂಜಿಸುವುದು. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇದಕ್ಕೆ ಮೂರು ಪ್ರಮುಖ ಕಾರಣಗಳೂ ಸಹ ಇವೆ.
ಈ ಹಿಂದೆ, ತಾಯಿ ಉಮಾ ತನ್ನ ದೇಹದ ಕೊಳೆ ಮತ್ತು ಹಸಿ ಜೇಡಿಮಣ್ಣಿನಿಂದ ಒಂದೇ ದಿನ ಗಣೇಶನನ್ನು ಸೃಷ್ಟಿಸಿದಳು. ಶಿವನು ಈ ದಿನದಂದು ಗಣೇಶನಿಗೆ ಆನೆಯ ತಲೆಯನ್ನು ಇಡುವ ಮೂಲಕ ಮರು ಜೀವ ನೀಡಿದನು. ಅಷ್ಟೇ ಅಲ್ಲ, ಮೂಷಕ, ಪತ್ನಿಯರಾದ ರಿದ್ಧಿ ಸಿದ್ಧಿ ಮತ್ತು ಮೋದಕ ಗಣಪತಿಯ ಪ್ರಮುಖ ಆಯುಧಗಳಾದ ಪಾಶ, ಅಂಕುಶ ಮತ್ತು ಪರಶು, ಗಣೇಶನ ಇತರ ಆಭರಣಗಳಲ್ಲಿ ಶಂಖ, ಕಮಲ, ಹೂವು, ಚಕ್ರ, ಗದೆ, ಪರಶು ಮತ್ತು ಸರ್ಪ ಸೇರಿವೆ ಮೂರ್ತಿಯಲ್ಲಿ ಇರುತವಂತೆ ನೋಡಿಕೊಳ್ಳಿ..
ಈ ವರ್ಷ ಆಗಸ್ಟ್ 27, 2025 ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸುವ ಮೂಲಕ ಆಚರಿಸಲಾಗುತ್ತದೆ. ಶನಿವಾರ, ಸೆಪ್ಟೆಂಬರ್ 6 ರಂದು ಅನಂತ ಚೌದಾಸ್ ರಂದು ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ, ಈ ಹತ್ತು ದಿನಗಳವರೆಗೆ ಗಣೇಶ ಆರಾಧನೆಯನ್ನು ಭಕ್ತಪೂರ್ವಕವಾಗಿ ಮಾಡಲಾಗುತ್ತದೆ.
ಮುಖ್ಯವಾಗಿ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನದಂದು ಚಂದ್ರನನ್ನು ನೋಡುವುದು ಒಂದು ರೀತಿಯ ದೋಷವನ್ನು ತರುತ್ತದೆ. ಅಷ್ಟೇ ಅಲ್ಲದೆ, ಗಣೇಶನನ್ನು ಮೆಚ್ಚಿಸಲು "ಓಂ ಗಣಪತಯೇ ನಮಃ ಅಂತ ಹೇಳಿ ಇಲ್ಲವೆ, ಓಂ ಏಕ ದಂತಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್ ಮಂತ್ರ ಪಠಿಸಿ.