)
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವು ಕೇವಲ ಸಸ್ಯವಲ್ಲ, ಲಕ್ಷ್ಮೀ ದೇವಿಯ ಅವತಾರವೆಂದು ಪೂಜಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಪವಿತ್ರ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಮನೆಗೆ ಸಮೃದ್ಧಿ, ಸಕಾರಾತ್ಮಕ ಶಕ್ತಿ ಮತ್ತು ಆರೋಗ್ಯವನ್ನು ತರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪೂರ್ವ ದಿಕ್ಕು ಆದ್ಯತೆ, ಉತ್ತರ-ಈಶಾನ್ಯ ಪರ್ಯಾಯ ವಾಸ್ತು ನಿಯಮಗಳ ಪ್ರಕಾರ ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿ ನೆಡುವುದು ಶ್ರೇಷ್ಠ. ಇದರಿಂದ ಸೂರ್ಯನ ಮೊದಲ ಕಿರಣಗಳು ನೇರವಾಗಿ ಗಿಡದ ಮೇಲೆ ಬೀಳುತ್ತವೆ ಮತ್ತು ಲಕ್ಷ್ಮೀ ಕಟಾಕ್ಷ ಯಾವಾಗಲೂ ಮನೆಯಲ್ಲಿರುತ್ತದೆ. ಪೂರ್ವದಲ್ಲಿ ಜಾಗವಿಲ್ಲದಿದ್ದರೆ ಉತ್ತರ ಅಥವಾ ಈಶಾನ್ಯ (ಉತ್ತರ-ಪೂರ್ವ) ದಿಕ್ಕುಗಳನ್ನು ಆಯ್ಕೆ ಮಾಡಬಹುದು. ಈ ದಿಕ್ಕುಗಳಲ್ಲಿ ಬೆಳೆಸಿದ ತುಳಸಿ ಮನೆಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಖಾತ್ರಿಪಡಿಸುತ್ತದೆ.
ದಕ್ಷಿಣ ದಿಕ್ಕು: ಕಟ್ಟುನಿಟ್ಟಾಗಿ ನಿಷಿದ್ಧವಾಸ್ತು ತಜ್ಞರು ದಕ್ಷಿಣ ದಿಕ್ಕನ್ನು ಪಿತೃದೇವತೆಗಳ ದಿಕ್ಕು ಎಂದು ಕರೆಯುತ್ತಾರೆ. ಇಲ್ಲಿ ತುಳಸಿ ನೆಡುವುದು ಭಾರೀ ಆರ್ಥಿಕ ನಷ್ಟ, ಕುಟುಂಬದಲ್ಲಿ ಜಗಳ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ.ಪೂಜೆಗೆ ಪ್ರತ್ಯೇಕ ಗಿಡ, ಪ್ರತ್ಯೇಕ ಕುಂಡದೇವರ ಪೂಜೆಗೆ ಬಳಸುವ ಎಲೆಗಳನ್ನು ತುಳಸಿ ಕೋಟದ ಗಿಡದಿಂದ ಎಂದಿಗೂ ಕಿತ್ತುಕೊಳ್ಳಬಾರದು. ಇದರಿಂದ ಬಡತನ ಬರುತ್ತದೆ ಎಂಬ ನಂಬಿಕೆಯಿದೆ.ಬದಲಿಗೆ ಪೂಜೆಗೆ ಮಾತ್ರ ಪ್ರತ್ಯೇಕ ಕುಂಡದಲ್ಲಿ ತುಳಸಿ ಬೆಳೆಸಿ.ಆ ಗಿಡದ ಎಲೆಗಳನ್ನು ಮಾತ್ರ ಪೂಜೆಗೆ ಬಳಸಿ.
ನಿಯಮಿತ ಪೂಜೆ: ಸಂಜೆ ತುಪ್ಪದ ದೀಪಪ್ರತಿದಿನ ಸಂಜೆ ತುಪ್ಪದ ದೀಪ ಹಚ್ಚಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗಿ ಸಮೃದ್ಧಿ ನೀಡುತ್ತಾಳೆ. ಗಿಡದ ಮೇಲಿನ ಬೀಜಕೋಶಗಳನ್ನು ತೆಗೆದು ಸ್ವಚ್ಛಗೊಳಿಸಿದರೆ ಗಿಡ ನೇರವಾಗಿ, ಆರೋಗ್ಯವಾಗಿ ಬೆಳೆಯುತ್ತದೆ.
ಮಂಗಳ-ಶುಕ್ರವಾರ ನಿಷಿದ್ಧ: ಮಂಗಳವಾರ ಮತ್ತು ಶುಕ್ರವಾರ ತುಳಸಿ ಕೊಯ್ಲು ಮಾಡಬಾರದು. ಉಳಿದ ದಿನಗಳಲ್ಲಿ ಬೆಳಗ್ಗೆ ಕೊಯ್ದು ಪೂಜೆಗೆ ಅರ್ಪಿಸಿ.
ತುಳಸಿ ವನ: ಖಾಲಿ ಜಾಗವಿದ್ದರೆ ತುಳಸಿ ಬೀಜ ಸಿಂಪಡಿಸಿ. ಕೆಲವೇ ತಿಂಗಳಲ್ಲಿ ತುಳಸಿ ವನ ರೂಪುಗೊಳ್ಳುತ್ತದೆ. ಈ ವನದ ಗಾಳಿಯೇ ಔಷಧ: ತಲೆನೋವು, ಗಂಟಲು ನೋವು, ಶೀತಕ್ಕೆ ತುಳಸಿ ಎಲೆ ಕಷಾಯ ಉತ್ತಮ ಪರಿಹಾರ.ದಿನನಿತ್ಯ ೪-೫ ಎಲೆ ಚಹಾದಲ್ಲಿ ಹಾಕಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ತುಳಸಿ ಗಿಡವನ್ನು ಕೇವಲ ಗಿಡವೆಂದು ಕಾಣದೆ, ದೇವತೆಯ ರೂಪದಲ್ಲಿ ಪೂಜಿಸಿ. ಸರಿಯಾದ ದಿಕ್ಕು, ಸರಿಯಾದ ನಿಯಮ – ಇವೇ ನಿಮ್ಮ ಮನೆಯ ಸಮೃದ್ಧಿಗೆ ಗ್ಯಾರಂಟಿ” ಎಂದು ವಾಸ್ತು ತಜ್ಞ ಡಾ. ರಮೇಶ್ ಕುಲಕರ್ಣಿ ಹೇಳುತ್ತಾರೆ.ತುಳಸಿ ಗಿಡವನ್ನು ಇಂದೇ ಸರಿಯಾದ ದಿಕ್ಕಿನಲ್ಲಿ ನೆಡಿ, ಲಕ್ಷ್ಮೀ ಕೃಪೆಗೆ ಪಾತ್ರರಾಗಿ.
ಸೂಚನೆ: ಈ ಮಾಹಿತಿಯನ್ನು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ ನೀಡಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.