ಶರದ್ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ವರ್ಷವಿಡೀ ಶ್ರೀಮಂತರಾಗಿರುತ್ತೀರಿ: ತಾಯಿ ಲಕ್ಷ್ಮಿದೇವಿ ನಿಮ್ಮ ಕೈಬಿಡಲ್ಲ!!

ಶರದ್ ಪೂರ್ಣಿಮೆಯಂದು ಉಪವಾಸ ಮಾಡುವುದು ವಿಶೇಷ ಮಹತ್ವದ್ದಾಗಿದೆ. ಈ ಹುಣ್ಣಿಮೆಯಂದು ಉಪವಾಸ ಆಚರಿಸುವ ಮತ್ತು ತಾಯಿ ಲಕ್ಷ್ಮಿದೇವಿಯನ್ನ ಧ್ಯಾನಿಸುವ ಭಕ್ತರು ತಮ್ಮ ಜೀವನದಲ್ಲಿ ಎಂದಿಗೂ ಸಂತೋಷ-ಸಮೃದ್ಧಿಯ ಕೊರತೆ ಅನುಭವಿಸುವುದಿಲ್ಲವೆಂದು ಹೇಳಲಾಗುತ್ತದೆ.

Written by - Puttaraj K Alur | Last Updated : Oct 6, 2025, 10:09 AM IST
  • ಸಂಜೆ ತಾಯಿ ಲಕ್ಷ್ಮಿದೇವಿಯನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಬೇಕು
  • ಈ ದಿನದಂದು ಜನರು ರಾತ್ರಿಯಲ್ಲಿ ಖೀರ್ ತಯಾರಿಸಿ ಚಂದ್ರನ ಬೆಳಕಿನಲ್ಲಿಡುತ್ತಾರೆ
  • ಶರದ್ ಪೂರ್ಣಿಮೆಯಂದು ಉಪವಾಸ ಮಾಡುವುದು ವಿಶೇಷ ಮಹತ್ವದ್ದಾಗಿದೆ
ಶರದ್ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ವರ್ಷವಿಡೀ ಶ್ರೀಮಂತರಾಗಿರುತ್ತೀರಿ: ತಾಯಿ ಲಕ್ಷ್ಮಿದೇವಿ ನಿಮ್ಮ ಕೈಬಿಡಲ್ಲ!!

Sharad Purnima: ಸೋಮವಾರ ಅಂದರೆ ಇಂದು (ಅಕ್ಟೋಬರ್ 6) ಶರದ್ ಪೂರ್ಣಿಮೆಯ ಶುಭ ಸಂದರ್ಭವಾಗಿದೆ. ಈ ಹುಣ್ಣಿಮೆಯನ್ನ ವರ್ಷದ ಎಲ್ಲಾ ಹುಣ್ಣಿಮೆಗಳಲ್ಲಿ ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿದೆ. ಈ ಹುಣ್ಣಿಮೆಯ ದಿನದಂದು ಕೈಗೊಳ್ಳಬೇಕಾದ ಅಗತ್ಯ ಕೆಲಸಗಳೇನು ಅನ್ನೋದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಶರದ್ ಪೂರ್ಣಿಮೆಯಂದು ಕೆಲವು ಕೆಲಸಗಳನ್ನ ಮಾಡಿದ್ರೆ ನೀವು ವರ್ಷವಿಡೀ ಶ್ರೀಮಂತರಾಗಿರುತ್ತೀರಿ. ತಾಯಿ ಲಕ್ಷ್ಮಿದೇವಿ ನಿಮಗೆ ಆಶೀರ್ವಾದ ನೀಡಲಿದ್ದು, ಎಂದಿಗೂ ಕೈಬಿಡುವುದಿಲ್ಲ...

Add Zee News as a Preferred Source

ಲಕ್ಷ್ಮಿದೇವಿ ಪೂಜಿಸಿ: ಸಂಜೆ ಲಕ್ಷ್ಮಿದೇವಿಯನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಿ. ಭಕ್ತಿಯಿಂದ ತಾಯಿಗೆ ಆರತಿಯನ್ನ ಮಾಡಿ. "ಓಂ ಶ್ರೀಂ ಹ್ರೀಂ ಕ್ಲೀಂ ಮಹಾಲಕ್ಷ್ಮಿಯೈ ನಮಃ" ಎಂಬ ಮಂತ್ರವನ್ನ ಪಠಿಸಿರಿ. ದೇವಿಗೆ ಖೀರ್ (ಅಕ್ಕಿ ಕಡುಬು) ಅರ್ಪಿಸಿ. ನಂತರ, ಈ ಖೀರ್ ಅನ್ನ ಚಂದ್ರನ ಬೆಳಕಿನಲ್ಲಿ ಇರಿಸಿ.

ಇದನ್ನೂ ಓದಿ: ತುಲಾ ರಾಶಿಯಲ್ಲಿ ಬುಧನ ಸಂಚಾರ: ಈ ನಾಲ್ಕು ರಾಶಿಯವರಿಗೆ ಹೊಡೆಯಲಿದೆ ಜಾಕ್‌ಪಾಟ್‌, ಅದೃಷ್ಟವೋ ಅದೃಷ್ಟ

ಖೀರ್ ತಯಾರಿಸಿ: ಇದು ಶರದ್ ಪೂರ್ಣಿಮೆಯ ಪ್ರಮುಖ ಆಚರಣೆಯಾಗಿದೆ. ಈ ದಿನದಂದು ಜನರು ರಾತ್ರಿಯಲ್ಲಿ ಖೀರ್ ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಡುತ್ತಾರೆ. ನಂತರ ಈ ಖೀರ್ ಅನ್ನ ಬೆಳಗ್ಗೆ ತಿನ್ನಲಾಗುತ್ತದೆ. ಈ ರಾತ್ರಿ ಚಂದ್ರನು ಅಮೃತ ಸುರಿಸುತ್ತಾನೆ ಮತ್ತು ಚಂದ್ರನ ಬೆಳಕಿನಲ್ಲಿ ಇಟ್ಟ ಖೀರ್ ಅಮೃತದಂತೆ ಆಗುತ್ತದೆ ಎಂದು ನಂಬಲಾಗಿದೆ. ಇದನ್ನ ಸೇವಿಸುವುದರಿಂದ ದೇಹಕ್ಕೆ ಅನೇಕ ಅದ್ಭುತ ಪ್ರಯೋಜನಗಳು ದೊರೆಯುತ್ತವೆ.

ಉಪವಾಸ ಮತ್ತು ಧ್ಯಾನ: ಶರದ್ ಪೂರ್ಣಿಮೆಯಂದು ಉಪವಾಸ ಮಾಡುವುದು ವಿಶೇಷ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಈ ಹುಣ್ಣಿಮೆಯಂದು ಉಪವಾಸ ಆಚರಿಸುವ ಮತ್ತು ತಾಯಿ ಲಕ್ಷ್ಮಿದೇವಿಯನ್ನ ಧ್ಯಾನಿಸುವ ಭಕ್ತರು ತಮ್ಮ ಜೀವನದಲ್ಲಿ ಎಂದಿಗೂ ಸಂತೋಷ ಮತ್ತು ಸಮೃದ್ಧಿಯ ಕೊರತೆಯನ್ನ ಅನುಭವಿಸುವುದಿಲ್ಲವೆಂದು ಹೇಳಲಾಗುತ್ತದೆ.

ಇದನ್ನೂ ಓದಿ:  ಗುರು ವಕ್ರಿ: ನವೆಂಬರ್‌ನಲ್ಲಿ ಈ ರಾಶಿಯವರಿಗೆ ಬೃಹಸ್ಪತಿ ವಿಶೇಷ ಆಶೀರ್ವಾದ, ಮಣ್ಣೂ ಹೊನ್ನಾಗುವ ಪರ್ವಕಾಲ

ಚಂದ್ರ ದರ್ಶನ ಮತ್ತು ಧ್ಯಾನ: ಶರದ್ ಪೂರ್ಣಿಮೆಯ ರಾತ್ರಿ ಖಂಡಿತ ಸ್ವಲ್ಪ ಹೊತ್ತು ಚಂದ್ರನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು. ಈ ದಿನ ಮಾನಸಿಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಅಭ್ಯಾಸಕ್ಕೂ ಸೂಕ್ತವಾಗಿದೆ. ಅಲ್ಲದೇ ಶರದ್ ಪೂರ್ಣಿಮೆಯಂದು ನಿರ್ಗತಿಕರಿಗೆ ಆಹಾರ, ಬಟ್ಟೆ ಅಥವಾ ಹಣವನ್ನ ದಾನ ಮಾಡಿ. ಇದು ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದವನ್ನ ತರುತ್ತದೆ.

ಮನೆಯಲ್ಲಿ ದೀಪ ಬೆಳಗಿಸಿ: ಶರದ್ ಪೂರ್ಣಿಮೆಯಂದು ನಿಮ್ಮ ಮನೆಯ ಮುಖ್ಯ ದ್ವಾರ ಸೇರಿದಂತೆ ಪ್ರತಿಯೊಂದು ಮೂಲೆಯಲ್ಲಿ ಮತ್ತು ತುಳಸಿ ಗಿಡದ ಬಳಿ ದೀಪಗಳನ್ನ ಬೆಳಗಿಸಿ. ಇದು ಲಕ್ಷ್ಮಿದೇವಿಯನ್ನು ಮೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News