ಅಕ್ಷಯ ತೃತೀಯದ ದಿನ ಐದು ರೂಪಾಯಿ ಬಳಸಿ ಇದೊಂದು ಕೆಲಸ ಮಾಡಿದರೆ ಜೀವನ ಪೂರ್ತಿ ಇರುವುದು ಮಹಾಲಕ್ಷ್ಮೀ ಕೃಪೆ !ಒಂದೇ ಒಂದು ರೂಪಾಯಿ ಸಾಲ ಉಳಿಯುವುದಿಲ್ಲ !

Akshaya Tritiya 2025 : ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾತ್ರವಲ್ಲ ತುಂಬಾ ಅಗ್ಗದ ವಸ್ತುವನ್ನು ಖರೀದಿಸುವುದರಿಂದ ಕೂಡಾ ಮನೆಯ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವ ಸತ್ಯ ನಿಮಗೆ ತಿಳಿದಿದೆಯೇ?

Written by - Ranjitha R K | Last Updated : Apr 23, 2025, 04:25 PM IST
  • ಈ ಬಾರಿ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ.
  • ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನ ಅಕ್ಷಯ ತೃತೀಯ
  • ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ತುಂಬಾ ಶುಭ
ಅಕ್ಷಯ ತೃತೀಯದ ದಿನ ಐದು ರೂಪಾಯಿ ಬಳಸಿ ಇದೊಂದು ಕೆಲಸ ಮಾಡಿದರೆ ಜೀವನ ಪೂರ್ತಿ ಇರುವುದು ಮಹಾಲಕ್ಷ್ಮೀ ಕೃಪೆ !ಒಂದೇ ಒಂದು ರೂಪಾಯಿ ಸಾಲ ಉಳಿಯುವುದಿಲ್ಲ !

Akshaya Tritiya 2025 : ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ತುಂಬಾ ಶುಭ ಎಂದು ನಂಬಲಾಗಿದೆ. ಇದಲ್ಲದೆ, ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ. ಆದರೆ, ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾತ್ರವಲ್ಲ ತುಂಬಾ ಅಗ್ಗದ ವಸ್ತುವನ್ನು ಖರೀದಿಸುವುದರಿಂದ ಕೂಡಾ ಮನೆಯ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವ ಸತ್ಯ ನಿಮಗೆ ತಿಳಿದಿದೆಯೇ? ಅಕ್ಷಯ ತೃತೀಯ ದಿನದಂದು 5 ರೂ.ಯ ಈ ವಸ್ತುವನ್ನು ಖರೀದಿಸಿದರೆ, ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ. 

ಅಕ್ಷಯ ತೃತೀಯದಂದು ಕೊತ್ತಂಬರಿ ಖರೀದಿಸಿ : 
ಅಕ್ಷಯ ತೃತೀಯ ದಿನದಂದು ಕೊತ್ತಂಬರಿ ಬೀಜವನ್ನು  ಖರೀದಿಸಿ ತರುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಕೇವಲ 5 ರೂಪಾಯಿ ಮೌಲ್ಯದ ಕೊತ್ತಂಬರಿ ಬೀಜಗಳನ್ನು ಖರೀದಿಸಿ ತರುವ ಮೂಲಕ  ಹಣದ ಸಮಸ್ಯೆಗಳನ್ನು ಬಗೆಹರಿಸಬಹುದು. ಅಕ್ಷಯ ತೃತೀಯ ದಿನದಂದು ಕೊತ್ತಂಬರಿ ಬೀಜಗಳನ್ನು ಖರೀದಿಸಿ ಪೂಜಾ ಕೋಣೆಯಲ್ಲಿ ಇರಿಸಬೇಕು. ಪೂಜೆಯ ನಂತರ, ಕೊತ್ತಂಬರಿ ಬೀಜಗಳನ್ನು ಲಕ್ಷ್ಮಿ ದೇವಿಯ ಪಾದಗಳಿಗೆ ಅರ್ಪಿಸಬೇಕು. ಅಕ್ಷಯ ತೃತೀಯದ ಮರುದಿನ, ಈ ಕೊತ್ತಂಬರಿ ಬೀಜಗಳನ್ನು ಮನೆಯ ಮುಂದೆ ಮಣ್ಣಿನಲ್ಲಿ ಅಥವಾ ಕುಂಡದಲ್ಲಿ ಹಾಕಿ. 

ಇದನ್ನೂ ಓದಿ : ರೇವತಿ ನಕ್ಷತ್ರಕ್ಕೆ ಬುಧನ ಪ್ರವೇಶ; ಈ ಮೂರು ರಾಶಿಗಳಿಗೆ ಅಪಾರ ಸುಖ-ಸಂಪತ್ತು, ಸ್ಥಾನಮಾನದ ಲಾಭ!!

ಆರ್ಥಿಕ ಬಿಕ್ಕಟ್ಟು ದೂರವಾಗುವುದು :
ಅಕ್ಷಯ ತೃತೀಯದಂದು ಕೊತ್ತಂಬರಿ ಬೀಜಗಳ ಈ ಪರಿಹಾರದಿಂದ, ಮನೆಯ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವೂ ಉಳಿಯುತ್ತದೆ. ಕೊತ್ತಂಬರಿ ಬೀಜದ ಹೊರತಾಗಿ, ಹಳದಿ ಸಾಸಿವೆ ಅಥವಾ ಯಾವುದೇ ಮಣ್ಣಿನ ಪಾತ್ರೆಯನ್ನು ಸಹ ಖರೀದಿಸಬಹುದು. 

ಅಕ್ಷಯ ತೃತೀಯ 2025 ಶುಭ ಸಮಯ : 
ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಶುಕ್ಲ ಪಕ್ಷದ ತೃತೀಯ ತಿಥಿಯು ಏಪ್ರಿಲ್ 29 ರಂದು ಸಂಜೆ 5:31 ಕ್ಕೆ ಪ್ರಾರಂಭವಾಗಿ, ಏಪ್ರಿಲ್ 30 ರಂದು ಮಧ್ಯಾಹ್ನ 2:12 ಕ್ಕೆ ಕೊನೆಗೊಳ್ಳುತ್ತದೆ. ಇದಲ್ಲದೆ, ಅಕ್ಷಯ ತೃತೀಯ ದಿನದಂದು ಪೂಜೆಗೆ ಶುಭ ಸಮಯ ಬೆಳಿಗ್ಗೆ 5:41 ರಿಂದ ಮಧ್ಯಾಹ್ನ 12:18 ರವರೆಗೆ ಇರುತ್ತದೆ. 

ಇದನ್ನೂ ಓದಿ : ರಾಹು-ಕೇತುವಿನ ಹಿಮ್ಮುಖ ಚಲನೆ: ಈ ನಾಲ್ಕು ರಾಶಿಗಳ ಆರ್ಥಿಕ ಸ್ಥಿತಿ ಹದಗೆಡಲಿದೆ, ಆರೋಗ್ಯದಲ್ಲಿ ಏರುಪೇರು!!

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News