)
Budhaditya Rajayoga: ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ, ಆತ್ಮದ ಅಂಶ ಎನ್ನಲಾಗುವ ಸೂರ್ಯ ಗ್ರಹ ಅಕ್ಟೋಬರ್ 17ರಂದು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಕನ್ಯಾ ರಾಶಿಯನ್ನು ತೊರೆದು ತುಲಾ ರಾಶಿ ಪ್ರವೇಶಿಸಲಿರುವ ಸೂರ್ಯ ಅಲ್ಲಿ ಬುಧನೊಂದಿಗೆ ಸಂಯೋಗ ಹೊಂದಲಿದ್ದಾನೆ. ಇದರಿಂದ ಅತ್ಯಂತ ಮಂಗಳಕರ ರಾಜಯೋಗ ಸೃಷ್ಟಿಯಾಗುತ್ತಿದೆ.
ಅಕ್ಟೋಬರ್ 20ರಂದು ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಅದಕ್ಕೂ ಮೊದಲು ಬುಧ ಸೂರ್ಯರ ಯುತಿಯಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಬುಧಾದಿತ್ಯ ರಾಜಯೋಗವು ಎಲ್ಲಾ 12 ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ಅವರ ಜೀವನದಲ್ಲಿ ಸೋಲೆಂಬುದೇ ಇರುವುದಿಲ್ಲ. ಹೆಜ್ಜೆ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ ಹಿಂಬಾಲಿಸಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
ಬುಧಾದಿತ್ಯ ರಾಜಯೋಗದಿಂದ ಐದು ರಾಶಿಯವರಿಗೆ ಅದೃಷ್ಟ:
ಮೇಷ ರಾಶಿ:
ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಉದ್ಯೋಗ ರಂಗಕ್ಕೆ ಸಂಬಂಧಿಸಿದಂತೆ ಭರ್ಜರಿ ಸಿಹಿ ಸುದ್ದಿಯೊಂದು ನಿಮ್ಮ ಉತ್ಸಾಹವನ್ನು ಹಲವು ಪಟ್ಟು ಹೆಚ್ಚಿಸಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಂಭವವಿದೆ.
ಮಿಥುನ ರಾಶಿ:
ಸೂರ್ಯ ಗೋಚಾರ ಫಲವಾಗಿ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ದೀರ್ಘಕಾಲದಿಂದ ಬೇರೆಯವರ ಕೈಯಲ್ಲಿ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ವ್ಯವಹಾರ ವಿಸ್ತರಣೆ ಬಗ್ಗೆ ಯೋಚಿಸುತ್ತಿರುವವರಿಗೆ ಅತ್ಯಂತ ಮಂಗಳಕರ ಸಮಯ ಇದಾಗಿದೆ.
ಸಿಂಹ ರಾಶಿ:
ದೀಪಾವಳಿಗೂ ಮೊದಲು ರಚನೆಯಾಗಲಿರುವ ಬುಧಾದಿತ್ಯ ರಾಜಯೋಗದ ಫಲವಾಗಿ ಈ ರಾಶಿಯವರ ಬದುಕಿನಲ್ಲಿ ಕೆಟ್ಟ ಸಮಯ ಕಳೆದು ಹೊಸ ಬೆಳಕು, ಉತ್ಸಾಹ ಚಿಗುರೊಡೆಯಲಿದೆ. ಆರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ. ವೃತ್ತಿಪರರಿಗೆ ಬಡ್ತಿ ಅವಕಾಶಗಳಿವೆ. ಮದುವೆಯಲ್ಲಿ ಮೂಡಿದ್ದ ತೊಡಕು ನಿವಾರಣೆಯಾಗಿ ಹಸೆಮಣೆ ಏರುವ ಸಾಧ್ಯತೆ ದಟ್ಟವಾಗಿದೆ.
ವೃಶ್ಚಿಕ ರಾಶಿ:
2025ರ ದೀಪಾವಳಿಯು ಈ ರಾಶಿಯವರ ಬದುಕನ್ನು ಸೂರ್ಯನಂತೆ ಉಜ್ವಲಿಸಲಿದೆ. ಹಿಂದಿನ ನಿಮ್ಮೆಲ್ಲಾ ಪ್ರಯತ್ನಗಳಿಗೂ ಶುಭ ಫಲ ದೊರೆಯುವ ಸುವರ್ಣ ಸಮಯ ಇದಾಗಿದೆ. ಬುಧಾದಿತ್ಯ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಅಕ್ಷರಶಃ ರಾಜವೈಭೋಗವನ್ನು ಹೊತ್ತು ತರಲಿದೆ. ವೃತ್ತಿಯಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ಪಡೆಯುವಿರಿ. ಈ ದೀಪಾವಳಿಯಲ್ಲಿ, ನಿಮ್ಮ ಎದುರಾಳಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದವರ ವಿರುದ್ಧ ಜಯ ಸಾಧಿಸುವಿರಿ.
ಕುಂಭ ರಾಶಿ:
ಸೂರ್ಯ ಬುಧರ ಯುತಿಯಿಂದ ರೂಪುಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಕುಟುಂಬ ಕಲಹಗಳು ನಿರಾಯಾಸವಾಗಿ ಬಗೆಹರಿಯಲಿವೆ. ವೃತ್ತಿಪರರಿಗೆ ಉನ್ನತ ಹುದ್ದೆ ದೊರೆಯುವ ಅವಕಾಶಗಳಿವೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಹಣದ ಹರಿವು ಹೆಚ್ಚಾಗಿ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.