ದಿನಭವಿಷ್ಯ 24-07-2025: ಭೀಮನ ಅಮಾವಾಸ್ಯೆಯಂದು ಹರ್ಷಣ ಯೋಗ: ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

Today Horoscope 24th July 2025: ಭೀಮನ ಅಮಾವಾಸ್ಯೆಯಂದು ಪುನರ್ವಸು ನಕ್ಷತ್ರದಲ್ಲಿ ಹರ್ಷಣ ಯೋಗ ಇರಲಿದೆ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 24, 2025, 08:24 AM IST
  • ಆಷಾಢ ಅಮಾವಾಸ್ಯೆಯ ಈ ದಿನ ಭೀಮನ ಅಮಾವಾಸ್ಯೆಯಾಗಿ ಆಚರಿಸಲಾಗುತ್ತದೆ.
  • ಗುರುವಾರದಂದು ಪುನರ್ವಸು ನಕ್ಷತ್ರದಲ್ಲಿ ಹರ್ಷಣ ಯೋಗ ಇರಲಿದೆ.
  • ಇಂದು ಯಾವೆಲ್ಲಾ ರಾಶಿಯವರಿಗೆ ಅದೃಷ್ಟ, ಯಾರು ಎಚ್ಚರಿಕೆಯಿಂದ ಇರಬೇಕು ತಿಳಿಯಿರಿ
ದಿನಭವಿಷ್ಯ 24-07-2025: ಭೀಮನ ಅಮಾವಾಸ್ಯೆಯಂದು ಹರ್ಷಣ ಯೋಗ: ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಆಷಾಢ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ ಹರ್ಷಣ ಯೋಗ, ಚತುಷ್ಪಾದ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ವೈಯಕ್ತಿಕ ಗುರಿಗಳ ಮೇಲೆ ಹೆಚ್ಚು ಗಮನಹರಿಸುವುದು ಲಾಭದಾಯಕವಾಗಿದ್ದು, ನಿಮ್ಮ ಕೆಲಸದಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುವಿರಿ. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃತ್ತಿ ಮತ್ತು ವ್ಯವಹಾರದಲ್ಲಿ ಸ್ಥಿರವಾದ ಪ್ರಗತಿಯನ್ನು ಕಾಣುವಿರಿ. ಸಹೋದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವಿರಿ. ನಿಮ್ಮ ಪ್ರಯತ್ನಗಳು ಉತ್ತಮ ಆರ್ಥಿಕ ಪ್ರಯೋಜನವನ್ನು ನೀಡಲಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ದಿನ ಕೌಟುಂಬಿಕ ಬಾಂಧವ್ಯ ಮತ್ತು ವೈಯಕ್ತಿಕ ವಿಚಾರಗಳ ಮೇಲೆ ಹೆಚ್ಚು ಗಮನಹರಿಸುವುದು ಸೂಕ್ತವಾಗಿದೆ. ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಕಂಡು ಬರಲಿದೆ. ತಾಳ್ಮೆಯಿಂದ ಮಾಡಿದ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಶ್ಬುಹ ಫಲಗಳನ್ನು ನಿರೀಕ್ಷಿಸಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರಲಿದೆ. ನಿಮ್ಮ ಗುರಿಗಳ ಮೇಲೆ ಗಮನಹರಿಸುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ. ವಿಶೇಷವಾಗಿ ಯೋಜಿತ ಕೆಲಸಗಳಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುತ್ತದೆ. ಭಾವನಾತ್ಮಕವಾಗಿ ತೃಪ್ತಿಕರವಾದ ದಿನ. 

ಇದನ್ನೂ ಓದಿ- ಇನ್ನೂ 127ದಿನಗಳ ಕಾಲ ಶನಿ ಹಿಮ್ಮುಖ ಚಲನೆ: ಈ ರಾಶಿಯವರಿಗೆ ಕುಬೇರನ ಸಂಪತ್ತೇ ಕೈಸೇರುವ ಸುವರ್ಣ ಸಮಯ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತವಾಗಿದೆ. ವಿಶೇಷವಾಗಿ ಹಣಕಾಸಿನ ವ್ಯವಹಾರಗಳಲ್ಲಿ ಕುರುಡು ನಂಬಿಕೆಯನ್ನು ತಪ್ಪಿಸಿ.  ದಾಖಲೆ ಸಂಬಂಧಿತ ವಿಚಾರಗಳಲ್ಲಿ ಮೈಯೆಲ್ಲಾ ಕಣ್ಣಾಗಿರುವುದು ಒಳ್ಳೆಯದು. ಭಾವನಾತ್ಮಕವಾಗಿ ತಾಳ್ಮೆ ಅತ್ಯಗತ್ಯ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಹಣಕಾಸು ನಿರ್ಧಾರಗಳನ್ನು ಬುದ್ದಿವಂತಿಕೆಯಿಂದ ತೆಗೆದುಕೊಳ್ಳಿ. ಸಹೋದ್ಯೋಗಿಗಳು ಮತ್ತು ಪ್ರೀತಿಪಾತ್ರರೊಂದಿಗಿನ ಸಮನ್ವಯ ಸುಧಾರಿಸುತ್ತದೆ. ಟೀಮ್ ವರ್ಕ್ ಉತ್ತಮ ಫಲ ನೀಡಲಿದೆ. ಸಂಬಂಧಗಳು ಭಾವನಾತ್ಮಕವಾಗಿ ತೃಪ್ತಿಕರವಾಗಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಅಧಿಕಾರ ಅಥವಾ ನಾಯಕತ್ವದ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ತೀಕ್ಷ್ಣ ಚಿಂತನೆ, ಶಾಂತ ನಡವಳಿಕೆಯಿಂದ ಇತರರನ್ನು ಮೆಚ್ಚಿಸುವಿರಿ. ಹೊಸ ಯೋಜನೆಗಳಿಂದ ಆರ್ಥಿಕ ಹರಿವು ಹೆಚ್ಚಾಗಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ತೋರಲು ಪ್ರಾರಂಭಿಸಲಿವೆ. ಅದರಲ್ಲೂ ವಿಶೇಷವಾಗಿ ದೀರ್ಘಕಾಲೀನ ಗುರಿಗಳಲ್ಲಿ ನೀವು ಜಯಶಾಲಿಯಾಗುವಿರಿ. ವೃತ್ತಿಪರ ಕಾರ್ಯಕ್ಷಮತೆ ಪ್ರಭಾವಶಾಲಿಯಾಗಿದ್ದು, ಆರ್ಥಿಕ ನಿರೀಕ್ಷೆಗಳು ಬಲಗೊಳ್ಳಲಿವೆ. 

ಇದನ್ನೂ ಓದಿ- ಗ್ರಹಣದೊಂದಿಗೆ ಪಿತೃ ಪಕ್ಷ ಆರಂಭ : ಇಲ್ಲಿಂದಲೇ ಬೆಳಗುವುದು ಮೂರು ರಾಶಿಯವರ ಭಾಗ್ಯ, ಹಣಕಾಸಿನ ವಿಷಯದಲ್ಲಿ ಹೊಡೆಯುವುದು ಜಾಕ್ ಪಾಟ್

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಯಾರನ್ನಾದರೂ ಕುರುಡಾಗಿ ನಂಬುವುದನ್ನು ತಪ್ಪಿಸಿ. ವಿಶೇಷವಾಗಿ ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲಸದಲ್ಲಿ, ಬುದ್ಧಿವಂತ ತಂತ್ರಗಳು ಸಹಾಯ ಮಾಡುತ್ತವೆ. ವೈಯಕ್ತಿಕ ವಿಚಾರಗಳಲ್ಲಿ ವಿಳಂಬವಾಗುವುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಟೀಮ್ ವರ್ಕ್ ನಿಮ್ಮ ಯಶಸ್ಸಿನ ಕೀಲಿ ಆಗಿರಲಿದೆ. ವ್ಯವಹಾರ ಮತ್ತು ವೃತ್ತಿ ವಿಷಯಗಳಲ್ಲಿ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಬೆಂಬಲ ಉತ್ತಮ ಲಾಭವನ್ನು ತಂದುಕೊಡಲಿದೆ. ವೈಯಕ್ತಿಕ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಣಬಹುದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವತ್ತ ಗಮನಹರಿಸಿ. ಹಣಕಾಸಿನ ವಿಚಾರವಾಗಿ ಅಜಾಗರೂಕತೆಯನ್ನು ತಪ್ಪಿಸಿ. ವ್ಯವಹಾರದಲ್ಲಿ ತಾಳ್ಮೆಯಿಂದ ವರ್ತಿಸಿ. ವೃತ್ತಿ ಬದುಕಿನಲ್ಲಿ ಸ್ಥಿರವಾದ ಪ್ರಗತಿ ಕಂಡು ಬರಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಭಾವನಾತ್ಮಕವಾಗಿ ಧನಾತ್ಮಕ ಫಲಗಳನ್ನು ಅನುಭವಿಸುವಿರಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಹನಕಿಯಸಿನ ವಿಷಯಗಳಲ್ಲಿ ಅದೃಷ್ಟ ನಿಮ್ಮ ಪರವಾಗಿದೆ. ನಿಮ್ಮ ಗುರಿಗಳನ್ನು ಕೇಂದ್ರೀಕರಿಸಿ ಈ ನಿಟ್ಟಿನಲ್ಲಿ ಮುಂದುವರೆಯುವುದು ಸೂಕ್ತ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News