ಕಪ್ಪು ದಾರ ಈ 4 ರಾಶಿಯವರು ತಪ್ಪಿಯೂ ಕಟ್ಟಬಾರದು.. ಕೈ ಕಾಲಿಗೆ ಕಟ್ಟಿದರಂತೂ ಕಷ್ಟ ತಪ್ಪಿದ್ದೇ ಅಲ್ಲ!

Astro Tips: ಕಪ್ಪು ದಾರವನ್ನು ಕೆಲವು ರಾಶಿಗಳ ಜನರು ಧರಿಸಬಾರದು. ಇದರಿಂದ ದರಿದ್ರ ವಕ್ಕರಿಸಿ ಕೋಟ್ಯಾಧಿಪತಿಯೂ ಬೀದಿಗೆ ಬರುವನು. 

Written by - Chetana Devarmani | Last Updated : Nov 15, 2025, 07:29 PM IST
    • ಯಾರು ಕಪ್ಪು ದಾರವನ್ನು ಧರಿಸಬಾರದು
    • ಕಪ್ಪು ದಾರ ಕಟ್ಟುವುದರ ಅಡ್ಡಪರಿಣಾಮಗಳು
    • ಯಾವ ಜನರು ಕಪ್ಪು ದಾರವನ್ನು ಧರಿಸಬಾರದು
ಕಪ್ಪು ದಾರ ಈ 4 ರಾಶಿಯವರು ತಪ್ಪಿಯೂ ಕಟ್ಟಬಾರದು.. ಕೈ ಕಾಲಿಗೆ ಕಟ್ಟಿದರಂತೂ ಕಷ್ಟ ತಪ್ಪಿದ್ದೇ ಅಲ್ಲ!

who should not wear black thread : ಕಪ್ಪು ದಾರ ಧರಿಸುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ಶತ್ರುಗಳ ಬಾಧೆ, ಪ್ರೇತಗಳ ಕಾಟ, ಕೆಟ್ಟ ದೃಷ್ಟಿ ಕಣ್ಣು ಇತ್ಯಾದಿಗಳಿಂದ ರಕ್ಷಿಸಲ್ಪಡುತ್ತೇವೆ ಎಂಬ ನಂಬಿಕೆಯಿದೆ. ಇದರ ಜೊತೆಗೆ ಗ್ರಹ ದೋಷಗಳು ಸಹ ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ. ಯಾವ ಜನರು ಕಪ್ಪು ದಾರವನ್ನು ಧರಿಸಬಾರದು ಎಂದು ತಿಳಿಯಿರಿ.

Add Zee News as a Preferred Source

ಇಂದಿಗೂ ಸಹ, ಕಪ್ಪು ದಾರ ಧರಿಸುವುದು ಸಾಕಷ್ಟು ಜನಪ್ರಿಯವಾಗಿದೆ. ಜನರು ಈ ದಾರವನ್ನು ಕುತ್ತಿಗೆ, ಸೊಂಟ, ತೋಳುಗಳು, ಕೈಗಳು, ಕಾಲುಗಳು ಇತ್ಯಾದಿಗಳಿಗೆ ಕಟ್ಟುತ್ತಾರೆ. ನಂಬಿಕೆಗಳ ಪ್ರಕಾರ, ಕಪ್ಪು ದಾರ ಧರಿಸುವುದರಿಂದ ದುಷ್ಟ ಕಣ್ಣಿನಿಂದ ಸುಲಭವಾಗಿ ರಕ್ಷಿಸಬಹುದು. ಇದರ ಹೊರತಾಗಿ, ಜ್ಯೋತಿಷ್ಯದಲ್ಲಿ ಇದನ್ನು ಕಟ್ಟುವ ಇತರ ಹಲವು ವಿಧಾನಗಳನ್ನು ಸಹ ಹೇಳಲಾಗಿದೆ. ಕೈ ಮತ್ತು ಕಾಲುಗಳಲ್ಲಿನ ನೋವನ್ನು ನಿವಾರಿಸಲು ಅನೇಕ ಜನರು ಕಪ್ಪು ದಾರವನ್ನು ಕಟ್ಟುತ್ತಾರೆ. ಆದರೆ ಧಾರ್ಮಿಕ ದೃಷ್ಟಿಕೋನದಿಂದ ಕಪ್ಪು ದಾರವು ಬಹಳ ಮಹತ್ವದ್ದಾಗಿದೆ.

ಜ್ಯೋತಿಷ್ಯದ ಪ್ರಕಾರ, 4 ರಾಶಿಗಳು ಎಂದಿಗೂ ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಅವರು ದುರಾದೃಷ್ಟವನ್ನು ಎದುರಿಸಬೇಕಾಗಬಹುದು. ಕಪ್ಪು ದಾರ ಧರಿಸುವುದರಿಂದ ಈ  ರಾಶಿಗಳ ಜನರು ಅನೇಕ ತೊಂದರೆಗಳಿಗೆ ಸಿಲುಕಬಹುದು. ಕಪ್ಪು ದಾರವನ್ನು ಕೆಲವು ಜನರು ಕಟ್ಟಬಾರದು. ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತವೆ. ಈ 4 ರಾಶಿಯವರು ಕಪ್ಪು ದಾರವನ್ನು ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ. ಇದರಿಂದ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. 

ವೃಶ್ಚಿಕ ರಾಶಿ: 

ಕೈ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬಾರದು. ಇದು ಅದೃಷ್ಟವನ್ನು ದೂರ ಮಾಡಿ ದುರಾದೃಷ್ಟವನ್ನು ತರುತ್ತದೆ. ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ. ವೃಶ್ಚಿಕ ರಾಶಿಯ ಜನರ ಕಪ್ಪು ದಾರವನ್ನು ಕಟ್ಟಿದರೆ ಜೀವನದಲ್ಲಿ ಸಾಕಷ್ಟು ನಕಾರಾತ್ಮಕ ಫಲಿತಾಂಶಗಳನ್ನು ಪಡೆಯುವರು. ಅಪಶಕುನ, ನಕಾರಾತ್ಮಕ ಶಕ್ತಿ, ರೋಗ, ನಷ್ಟ, ಮೋಸ ಮತ್ತು ಸಂಬಂಧಗಳಲ್ಲಿ ಬಿರುಕು ಮೂಡಬಹುದು. ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಮಂಗಳ ಗ್ರಹ ಮತ್ತು ಶನಿ ದೇವನ ನಡುವೆ ಶತ್ರುವಿನ ಸಂಬಂಧವಿದೆ. ಆದ್ದರಿಂದ ವೃಶ್ಚಿಕ ರಾಶಿಯವರು ಕಪ್ಪು ದಾರ ಕಟ್ಟುವುದನ್ನು ತಪ್ಪಿಸಬೇಕು. 

ಮೇಷ ರಾಶಿ :

ಮೇಷ ರಾಶಿಯ ಜನಿಸಿದವರು ಕೈಯಲ್ಲಿ ಕಪ್ಪು ದಾರವನ್ನು ಧರಿಸಲೇ ಬಾರದು. ಇದು ಅವರಿಗೆ ಅಶುಭವಾಗಿದೆ. ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ ಮಂಗಳ ಮೇಷ ರಾಶಿಯ ಅಧಿಪತಿ. ಕಪ್ಪು ದಾರವು ರಾಹು ಮತ್ತು ಶನಿಗೆ ಸಂಬಂಧಿಸಿದೆ. ಶನಿ ಮತ್ತು ಮಂಗಳ ಗ್ರಹದ ನಡುವೆ ವೈರತ್ವದ ಭಾವನೆ ಇದೆ. ಮಂಗಳ ಗ್ರಹದ ಶುಭ ಪ್ರಭಾವ ಮುಗಿದ ತಕ್ಷಣ, ರಾಹುವಿನ ಪ್ರಭಾವ ಪ್ರಾರಂಭವಾಗುತ್ತದೆ. ಇದು ದುರದೃಷ್ಟವನ್ನು ಉಂಟುಮಾಡುತ್ತದೆ. ಇದು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಈ ರಾಶಿಯ ಜನರು ಕಪ್ಪು ದಾರವನ್ನು ಧರಿಸಬಾರದು

ಧನು ರಾಶಿ

ಧನು ರಾಶಿಯವರು ಜನರು ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಧನು ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ಕಪ್ಪು ದಾರ ಕಟ್ಟುವುದರಿಂದ ನಕಾರಾತ್ಮಕ ಫಲಿತಾಂಶ ಎದುರಿಸುವರು. ಧನು ರಾಶಿಗೆ ಸೇರಿದ ಜನರು ಕಪ್ಪು ಬಣ್ಣದ ಬದಲಾಗಿ ಹಳದಿ ಬಣ್ಣದ ದಾರ ಧರಿಸುವುದು ಉತ್ತಮ. ಕಪ್ಪ ದಾರ ಧರಿಸುವುದು ಆತ್ಮವಿಶ್ವಾಸದಲ್ಲಿ ಕೊರತೆ, ತಂದೆ ಮತ್ತುಮಕ್ಕಳ ನಡುವೆ ಜಗಳಕ್ಕೆ ಕಾರಣವಾಗಬಹುದು. 

ವೃಷಭ ರಾಶಿ

ವೃಷಭ ರಾಶಿಯ ಜನರು ಕಪ್ಪು ದಾರ ಕಟ್ಟುವುದರಿಂದ ಆರ್ಥಿಕ ಹಾನಿಯಾಗುತ್ತದೆ. ಇದರಿಂದ ಜೀವನದಲ್ಲಿ ಬಡತನಕ್ಕೆ ಗುರಿಯಾಗುತ್ತಾರೆ. ಆರ್ಥಿಕ ನಷ್ಟದಿಂದ ಬಳಲಬೇಕಾಗುತ್ತದೆ. ವೃಷಭ ರಾಶಿ ಅಧಿಪತಿ ಶುಕ್ರ ಗ್ರಹವಾಗಿದೆ. ಶುಕ್ರ ಗ್ರಹದ ಬಣ್ಣ ಬಿಳಿ ಬಣ್ಣವಾಗಿದೆ. ಹಾಗಾಗಿ ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇರುವುದು. ಹಣಕಾಸಿನ ವಿಚಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಮಾನಸಿಕ ತೊಂದರೆಗಳು ಬರುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗಬಹುದು.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ.  

ಇದನ್ನೂ ಓದಿ: ಭೂಮಿ ಖರೀದಿಗೂ ಮೊದಲು ಮಣ್ಣು ಪರೀಕ್ಷಿಸಬೇಕಾ? ಜ್ಯೋತಿಷ್ಯ ಏನು ಹೇಳುತ್ತೆ?

ಇದನ್ನೂ ಓದಿ: ಪೂರ್ವಾಷಾಢ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ 3 ರಾಶಿಯವರಿಗೆ ಸುವರ್ಣ ಅವಧಿ ಶುರು, ಅದೃಷ್ಟ ಕೈಹಿಡಿಯಲಿದೆ

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News