ವೈಭವ್ ಸೂರ್ಯವಂಶಿ ಹುಟ್ಟಿದ ದಿನಾಂಕ ಮತ್ತು ನಕ್ಷತ್ರ ಎರಡೂ ವಿಶೇಷ ! ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಪಡೆಯಲು ಈ ಎರಡು ಅಂಶಗಳೇ ಕಾರಣವಂತೆ !

14ನೇ ವಯಸ್ಸಿನಲ್ಲಿ ಕ್ರಿಕೆಟ್ ನಲ್ಲಿ ಖ್ಯಾತಿ ಪಡೆದಿರುವ ವೈಭವ್ ಸೂರ್ಯವಂಶಿಯದ್ದು ಅದ್ಭುತ ಜಾತಕ ಎನ್ನಲಾಗಿದೆ. ಅವರು ಹುಟ್ಟಿದ ದಿನಾಂಕ ಮತ್ತು ನಕ್ಷತ್ರದ ಕಾರಣದಿಂದಲೇ ಇಷ್ಟೊಂದು ಖ್ಯಾತಿ ಗಳಿಸಿದ್ದಾರೆ ಎನ್ನಲಾಗಿದೆ.  

Written by - Ranjitha R K | Last Updated : Apr 29, 2025, 04:13 PM IST
  • ವೈಭವ್ ಸೂರ್ಯವಂಶಿಯ ಜಾತಕ
  • ನಕ್ಷತ್ರ ಮತ್ತು ಮೂಲಾಂಕದ ಅದ್ಭುತ ಸಂಯೋಜನೆ
  • ವೈಭವ ಸೂರ್ಯವಂಶಿಯ ಮೂಲ ಸಂಖ್ಯೆ 9
ವೈಭವ್ ಸೂರ್ಯವಂಶಿ ಹುಟ್ಟಿದ ದಿನಾಂಕ ಮತ್ತು ನಕ್ಷತ್ರ ಎರಡೂ ವಿಶೇಷ ! ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಪಡೆಯಲು ಈ ಎರಡು ಅಂಶಗಳೇ ಕಾರಣವಂತೆ !

Vaibhav Suryavanshi Kundl : ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಇಮೋಶನ್. ಈ ಆಟವನ್ನು ಬೀದಿ ಬೀದಿಗಳಲ್ಲಿಯೂ ಸಂಭ್ರಮಿಸುತ್ತಾರೆ. ಪ್ರಸ್ತುತ ದೇಶದಲ್ಲಿ ಐಪಿಎಲ್ ಭರದಿಂದ ಸಾಗುತ್ತಿದೆ. ವಿಶ್ವಕಪ್‌ಗಿಂತ ಐಪಿಎಲ್ ಹೆಚ್ಚು ಜನಪ್ರಿಯವಾಗಿದೆ. ಐಪಿಎಲ್ ಭಾರತದ ಆಟಗಾರರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿದೆ. ಈ ವರ್ಷದ ಐಪಿಎಲ್‌ನಲ್ಲಿ ಹೊಸ ಪ್ರತಿಭೆಯೊಂದು ಸಂಚಲನ ಮೂಡಿಸಿದೆ. ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ತನ್ನ ಸ್ಫೋಟಕ ಆಟದ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾನೆ. ವೈಭವ ಸೂರ್ಯವಂಶಿಯವರ ಜಾತಕದಲ್ಲಿ ಮೂಲಾಂಕ ಮತ್ತು ನಕ್ಷತ್ರದ ಕಾರಣದಿಂದ  ಅದ್ಭುತ ಯೋಗ ರೂಪುಗೊಂಡಿದೆ. 

Add Zee News as a Preferred Source

ವೈಭವ್ ಸೂರ್ಯವಂಶಿಯ ಜಾತಕ : 
ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್‌ಪುರದಲ್ಲಿ ಜನಿಸಿದರು. ವೈಭವ್ ಸೂರ್ಯವಂಶಿ ಮಾರ್ಚ್ 27, 2011 ರಂದು ಜನಿಸಿದರು.ಅವರದ್ದು ಮೀನ ರಾಶಿ ಮತ್ತು ಪೂರ್ವಾಷಾಢ ನಕ್ಷತ್ರ. ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದ ವೈಭವ್, ಕೇವಲ 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತನ್ನು ಪ್ರವೇಶಿಸಿದರು. ಕೇವಲ 14 ನೇ ವಯಸ್ಸಿನಲ್ಲಿ, ಸೂರ್ಯವಂಶಿ ಅದ್ಭುತ ಇತಿಹಾಸವನ್ನು ಸೃಷ್ಟಿಸಿದರು. ಜ್ಯೋತಿಷ್ಯದಲ್ಲಿ, ಪೂರ್ವಾಷಾಢ ನಕ್ಷತ್ರವನ್ನು ಅಜೇಯ ಅಥವಾ ವಿಜಯಶಾಲಿ ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ಜನರು ಅದ್ಭುತ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಇವರು ಯಾವುದೇ ವಿಷಯದಲ್ಲಿಯೂ ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ಸಮಯದಲ್ಲಿ, ಸೂರ್ಯವಂಶಿಯ ಜಾತಕದಲ್ಲಿ ಗುರುವಿನ ಪ್ರಭಾವ ವಿಶೇಷವಾಗಿದ್ದು, ಮುಂಬರುವ ಸಮಯದಲ್ಲಿ ಅವನು ಹೆಚ್ಚಿನ ಖ್ಯಾತಿಯನ್ನು ಗಳಿಸುತ್ತಾರೆ. 

ಇದನ್ನೂ ಓದಿ : Vastu tips: ಮನೆಯಲ್ಲಿ ವಾಸ್ತು ದೋಷವಿದ್ದರೆ, ಅದಕ್ಕೆ ನಿಮ್ಮ ಮನೆಯಲ್ಲಿ ʻಈʼ ದಿಕ್ಕಿನಲ್ಲಿಟ್ಟಿರುವ ಕನ್ನಡಿಯೇ ಕಾರಣ! ಬಡತನ,ಜಗಳ, ಮನಸ್ಥಾಪ ಎದುರಾಗುವುದೇ ಇದರಿಂದ

ನಕ್ಷತ್ರ ಮತ್ತು ಮೂಲಾಂಕದ ಅದ್ಭುತ ಸಂಯೋಜನೆ : 
ಸಂಖ್ಯಾಶಾಸ್ತ್ರದ ಪ್ರಕಾರ, ವೈಭವ ಸೂರ್ಯವಂಶಿಯ ಮೂಲ ಸಂಖ್ಯೆ 9. ಸಂಖ್ಯೆ 9 ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಇದರರ್ಥ ಈ ಸಂಖ್ಯೆಯು ಶಕ್ತಿಶಾಲಿ ಗ್ರಹವಾದ ಮಂಗಳನ ವಿಶೇಷ ಆಶೀರ್ವಾದವನ್ನು ಹೊಂದಿದೆ. ಮಂಗಳ ಗ್ರಹದ ಅನುಗ್ರಹದಿಂದ, ಈ ಮೂಲಾಂಕದ ಜನರು ಧೈರ್ಯಶಾಲಿಗಳು, ಶಕ್ತಿಶಾಲಿಗಳು. ಇದಲ್ಲದೆ, ವೈಭವ ಸೂರ್ಯವಂಶಿಯ ಅದೃಷ್ಟ ಸಂಖ್ಯೆ 7. ಇದರ ಅಧಿಪತಿ ಕೇತು.   ಕೇತುವಿನ ಪ್ರಭಾವದಿಂದ ಈ ಅದೃಷ್ಟ ಹೊಂದಿರುವ ಜನರು ತುಂಬಾ ಗಂಭೀರರು ಮತ್ತು ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಕೇತುವಿನ ಆಶೀರ್ವಾದ ಪಡೆದ ವ್ಯಕ್ತಿಯನ್ನು ಯಾವುದೇ ಶಕ್ತಿಯು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Akshaya Tritiya: ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಯ ಆಶಿರ್ವಾದ ಪಡೆಯಲು, ನಿಮ್ಮ ಮನೆಯಲ್ಲಿ ʻಈʼ ಒಂದು ಕೆಲಸ ಮಾಡಿ..!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News