ಶನಿದೇವರು ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ನೀಡುವ ನ್ಯಾಯಯುತ ದೇವರು. ಶನಿ ದೋಷವೆಂದರೆ ಅನೇಕರು ಭಯ ಪಡುತ್ತಾರೆ. ಆದ್ರೆ ಇದಕ್ಕೆ ಸುಲಭ ಪರಿಹಾರವಿದೆ.
ಶನಿಯ ದುಷ್ಪರಿಣಾಮದಿಂದ ಯಾವುದೇ ವ್ಯಕ್ತಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.
ಶನಿದೋಷ ನಿವಾರಣೆ ಆಗಬೇಕೆಂದರೆ 11 ರೂ. & ಕಾಳುಮೆಣಸನ್ನ ಕಪ್ಪು ಬಟ್ಟೆಯಲ್ಲಿ ಕಟ್ಟಿ ಶನಿ ದೇವಸ್ಥಾನದಲ್ಲಿಟ್ಟು ದಾನ ಮಾಡಬೇಕು.
ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿ ದೋಷ ಇದ್ದರೆ ಅದು ನಿವಾರಣೆಯಾಗುತ್ತದೆ.
ಆರ್ಥಿಕ ತೊಂದರೆಯಿಂದ ಪರಿಹಾರ ಪಡೆಯಲು 5 ಮೆಣಸನ್ನು ತಲೆಯ ಮೇಲೆ 7 ಬಾರಿ ಸುತ್ತಿ & ನಾಲ್ಕು ವಿಭಿನ್ನ ದಿಕ್ಕುಗಳಲ್ಲಿ ರಾತ್ರಿಯಲ್ಲಿ ಶಾಂತ ಸ್ಥಳದಲ್ಲಿ ಅಥವಾ ಚೌಕದಲ್ಲಿ ಇರಿಸಿ.
ಕೊನೆಯ ಐದು ಕಾಳನ್ನು ಆಕಾಶದ ಕಡೆಗೆ ಎಸೆಯಿರಿ ಮತ್ತು ಸದ್ದಿಲ್ಲದೆ ಮನೆಗೆ ಬನ್ನಿ. ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬೇಡಿ.
ಮನೆಯಿಂದ ಹೊರಡುವಾಗ ಮನೆಯ ಮುಖ್ಯ ಬಾಗಿಲಿಗೆ ಕಾಳುಮೆಣಸನ್ನಿಡಿ. ನಂತರ ಮನೆಯಿಂದ ಹೊರಡುವಾಗ ನೇರವಾಗಿ ಮೆಣಸು ಮೇಲೆ ಹೆಜ್ಜೆ ಇಟ್ಟು ಹೊರಡಿ.
ಹೀಗೆ ಮಾಡುವುದರಿಂದ ನಿಮ್ಮ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ.