ಪೊರಕೆಯಲ್ಲಿ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ, ಪೊರಕೆಗೆ ಸಂಬಂಧಿಸಿದ ಕೆಲವು ತಪ್ಪುಗಳು ಮನೆಯಲ್ಲಿ ದಾರಿದ್ರ್ಯಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಅವುಗಳೆಂದರೆ...
ವಾಸ್ತು ಪ್ರಕಾರ, ಅಪ್ಪಿತಪ್ಪಿಯೂ ಸೋಮವಾರದಂದು ಪೊರಕೆಯನ್ನು ಖರೀದಿಸಬಾರದು.
ಸೂರ್ಯಾಸ್ತದ ನಂತರ ಮರೆತೂ ಕೂಡ ಕಸ ಗುಡಿಸಬಾರದು. ಅಂತಹ ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗುತ್ತದೆ.
ಮನೆಯಲ್ಲಿ ಎಂದೂ ಕೂಡ ಮುರಿದ ಅಥವಾ ಕೊಳಕಾದ ಪೊರಕೆಯನ್ನು ಬಳಸಬಾರದು.
ಮನೆಯಲ್ಲಿ ಎಂದಿಗೂ ಸಹ ಕಿಚನ್ ಹಾಗೂ ಬೆಡ್ ರೂಂನಲ್ಲಿ ಪೊರಕೆಯನ್ನು ಇಡಲೇಬಾರದು. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗಬಹುದು.
ಮುಖ್ಯವಾಗಿ ಮನೆಯಲ್ಲಿ ಪೊರಕೆಯನ್ನು ಒರಗಿಸಿ ನಿಲ್ಲಿಸಬೇಡಿ. ಬದಲಿಗೆ ಅದನ್ನು ಮಲಗಿಸಿಡಬೇಕು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.