ಪಿತೃ ಪಕ್ಷ

ಪೂರ್ವಜರನ್ನು ತೃಪ್ತಿ ಪಡಿಸಲು ಸರ್ವ ಪಿತೃ ಅಮವಾಸ್ಯೆಯ ಪರಿಹಾರಗಳು

Yashaswini V
Oct 09,2023

ಸರ್ವ ಪಿತೃ ಅಮಾವಾಸ್ಯೆ

ಸರ್ವ ಪಿತೃ ಅಮಾವಾಸ್ಯೆ ತಿಥಿಯಂದು ಪಿತೃ ಪಕ್ಷ ಕೊನೆಗೊಳ್ಳುತ್ತದೆ. ಈ ಬಾರಿಯ ಸರ್ವ ಪಿತೃ ಅಮಾವಾಸ್ಯೆ ಅಕ್ಟೋಬರ್ 14 ರಂದು ಇರಲಿದೆ.

ಅಮಾವಾಸ್ಯೆ

ಪಿತೃ ಪಕ್ಷದಲ್ಲಿ ನಿಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಸರ್ವ ಪಿತೃ ಅಮಾವಾಸ್ಯೆಯ ದಿನ ಎಂದು ಹೇಳಲಾಗುತ್ತದೆ.

ಪೂರ್ವಜರ ಮೋಕ್ಷ

ಈ ದಿನ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಸೂರ್ಯ ದೇವರಿಗೆ ಅರ್ಘ್ಯ

ಸರ್ವ ಪಿತೃ ಅಮಾವಾಸ್ಯೆಯ ದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಪೂರ್ವಜರು ಸಂತೃಪ್ತರಾಗುತ್ತಾರೆ ಎಂಬ ನಂಬಿಕೆಯಿದೆ.

ಅರಳಿ ಮರಕ್ಕೆ ನೀರು

ನಮ್ಮ ಪೂರ್ವಜರು ಅರಳಿ ಮರದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ, ಸರ್ವ ಪಿತೃ ಅಮಾವಾಸ್ಯೆಯ ದಿನ ಈ ಮರಕ್ಕೆ ನೀರು ಅರ್ಪಿಸಿ, ಸಂಜೆ ದೀಪ ಹಚ್ಚಬೇಕು.

ಕರಿ ಎಳ್ಳು

ಸರ್ವ ಪಿತೃ ಅಮಾವಾಸ್ಯೆಯ ದಿನ ಪೂರ್ವಜರಿಗೆ ಕರಿ ಎಳ್ಳಿನ ತರ್ಪಣ ಬಿಡುವುದರಿಂದ ಪೂರ್ವಜರ ದಾಹ ತಣಿಸುತ್ತದೆ ಎಂದು ನಂಬಲಾಗಿದೆ.

ದಾನ

ಪಿತೃ ಪಕ್ಷದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ನಿಮ್ಮ ಕೈಲಾದಷ್ಟು ಅಗತ್ಯವಿರುವವರಿಗೆ ದಾನ ಮಾಡಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story