ಧಾರ್ಮಿಕ ದೃಷ್ಟಿಯಿಂದ ಬೆಳ್ಳಿಯು ಅತ್ಯಂತ ಪವಿತ್ರ ಮತ್ತು ಸಾತ್ವಿಕ ಲೋಹವಾಗಿದೆ. ಬೆಳ್ಳಿ ಶಿವನ ಕಣ್ಣುಗಳಿಂದ ಹುಟ್ಟಿಕೊಂಡ ಲೋಹ ಎನ್ನುವುದು ನಂಬಿಕೆ.
ಜ್ಯೋತಿಷ್ಯದಲ್ಲಿ ಬೆಳ್ಳಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಇದು ಸಂಪತ್ತಿನ ಅಂಶವಾದ ಶುಕ್ರ ಮತ್ತು ಮನಸ್ಸಿನ ಅಂಶವಾದ ಚಂದ್ರನಿಗೆ ಸಂಬಂಧಿಸಿದೆ.
ಜ್ಯೋತಿಷ್ಯದಲ್ಲಿ ಬೆಳ್ಳಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಇದು ಸಂಪತ್ತಿನ ಅಂಶವಾದ ಶುಕ್ರ ಮತ್ತು ಮನಸ್ಸಿನ ಅಂಶವಾದ ಚಂದ್ರನಿಗೆ ಸಂಬಂಧಿಸಿದೆ.
ಬೆಳ್ಳಿಯು ದೇಹದ ನೀರಿನ ಅಂಶವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ ಕಫ, ಪಿತ್ತ ಮತ್ತು ವಾತದ ಸಮಸ್ಯೆಯನ್ನು ಕೂಡಾ ದೂರ ಮಾಡುವ ಶಕ್ತಿ ಬೆಳ್ಳಿಗೆ ಇದೆ. ಅದಕ್ಕಾಗಿಯೇ ನಿತ್ಯದ ಬದುಕಿನಲ್ಲಿ ಬೆಳ್ಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಮನಸ್ಸನ್ನು ಸದೃಢಗೊಳಿಸುವುದರ ಜೊತೆಗೆ, ಮನಸ್ಸನ್ನು ಚುರುಕುಗೊಳಿಸುತ್ತದೆ. ಚಂದ್ರನ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಬೆಳ್ಳಿ ಪ್ರಯೋಜನಕಾರಿಯಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿಕ್ಕ ಬೆರಳಿಗೆ ಶುದ್ಧ ಬೆಳ್ಳಿಯ ಉಂಗುರವನ್ನು ಧರಿಸುವುದು ಉತ್ತಮ. ಅದರ ಪ್ರಭಾವದಿಂದ, ಅಶುಭ ಚಂದ್ರನು ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತಾನೆ.
ಶುದ್ಧ ಬೆಳ್ಳಿಯಿಂದ ಮಾಡಿದ ಖಡವನ್ನು ಕೈಗೆ ಧರಿಸುವುದರಿಂದ ಕಫ, ಪಿತ್ತ ಮತ್ತು ವಾತಡ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದರಿಂದಾಗಿ ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.
ಶುದ್ಧ ಬೆಳ್ಳಿಯ ಸರವನ್ನು ಗಂಗಾಜಲದಿಂದ ಶುದ್ಧೀಕರಿಸಿ ಕೊರಳಲ್ಲಿ ಧರಿಸಿದರೆ ಮಾತಿನಲ್ಲಿ ಪ್ರಖರತೆ ಇರುತ್ತದೆ. ಜೊತೆಗೆ, ಹಾರ್ಮೋನುಗಳು ಸಹ ಸಮತೋಲನದಲ್ಲಿರುತ್ತವೆ. ಇದಲ್ಲದೇ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ.
ಬೆಳ್ಳಿ ಶುದ್ಧವಾದಷ್ಟೂ ಅದರ ಪರಿಣಾಮ ಉತ್ತಮವಾಗಿರುತ್ತದೆ. ಭಾವನಾತ್ಮಕ ಸಮಸ್ಯೆ ಇರುವವರು ಬೆಳ್ಳಿ ಧರಿಸಬಾರದು. ವೃಶ್ಚಿಕ, ಮೀನ ಮತ್ತು ಕರ್ಕಾಟಕ ರಾಶಿಯವರು ಬೆಳ್ಳಿ ಧರಿಸಿದರೆ ಅವರಿಗೆ ಶುಭ ಫಲ ಸಿಗಲಿದೆ. ಆದರೆ ಸಿಂಹ , ಧನು ರಾಶಿ ಮತ್ತು ಮೇಷ ರಾಶಿಯವರು ಬೆಳ್ಳಿಯಿಂದ ದೂರ ಇರಬೇಕು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತುನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.