ವಿಷ್ಣುವಿನ ಕೈಯಲ್ಲಿರುವ ಮತ್ತು ತಾಯಿ ಲಕ್ಷ್ಮಿಗೆ ಆಸನವಾಗಿರುವ ಈ ಹೂವನ್ನು ತಿಜೋರಿಯಲ್ಲಿ ಕಾಣುವಂತೆ ಇರಿಸುವುದು ತುಂಬಾ ಮಂಗಳಕರವಾಗಿದೆ. ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ನೀವು ಕಮಲದ ಹೂವನ್ನು ಅರ್ಪಿಸಬೇಕು ಮತ್ತು ನಂತರ ಅದನ್ನು ನಿಮ್ಮ ತಿಜೋರಿಯಲ್ಲಿಡಬೇಕು.
ಅರಿಶಿನದ ಉಂಡೆ ನಿಮ್ಮ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿ ಗುರುವಾರ ಅಥವಾ ಶುಕ್ರವಾರದಂದು ಅರಿಶಿನದ ಉಂಡೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇರಿಸಿ.
ಹಳದಿ ಕವಡೆಗಳು ತಾಯಿ ಲಕ್ಷ್ಮಿಗೆ ತುಂಬಾ ಇಷ್ಟ. ಇವುಗಳನ್ನು ಹಣದ ತಿಜೋರಿಯಲ್ಲಿ ಇಡಬೇಕು ಎನ್ನಲಾಗುತ್ತದೆ. ಶುಕ್ರವಾರ ಅಥವಾ ಹುಣ್ಣಿಮೆಯ ದಿನ ಇದನ್ನು ನೀವು ತಿಜೋರಿಯಲ್ಲಿರಿಸಬಹುದು.
ವಾಸ್ತು ಪ್ರಕಾರ ಕನ್ನಡಿಯಲ್ಲಿ ಏನೇ ಕಂಡರೂ ಅದು ದ್ವಿಗುಣವಾಗುತ್ತದೆ ಎನ್ನುತ್ತಾರೆ. ಆದ್ದರಿಂದ, ತಿಜೋರಿಯ ಉತ್ತರ ಭಾಗದಲ್ಲಿ ಸಣ್ಣ ಕನ್ನಡಿ ಹಾಕಿ. ನಿಮ್ಮ ಹಣ ದ್ವಿಗುಣಗೊಳ್ಳಲು ಸಮಯ ಬೇಕಾಗುವುದಿಲ್ಲ.
ತಾಯಿ ಲಕ್ಷ್ಮಿಗೆ ಕೆಂಪು ಬಣ್ಣದ ಬಟ್ಟೆ ತುಂಬಾ ಪ್ರಿಯವಾಗಿದೆ. ಆದ್ದರಿಂದ, ಹಣವನ್ನು ಇರಿಸುವ ಜಾಗದಲ್ಲಿ ಕೆಂಪು ಬಟ್ಟೆಯಲ್ಲಿ 11 ಅಥವಾ 21 ರೂಪಾಯಿಗಳನ್ನು ಕಟ್ಟಿಕೊಳ್ಳಿ ಮತ್ತು ಅದನ್ನು ಹುಣ್ಣಿಮೆ, ಧನತ್ರಯೋದಶಿ ದಿನ ಇರಿಸುವುದು ಮಂಗಳಕರ.