ನರಕ ಚತುರ್ದಶಿ ದಿನ ಈ ದೇವತೆಗಳನ್ನು ಪೂಜಿಸಿದರೆ ಸಿಗುವುದು ಲಾಭ

Ranjitha R K
Nov 03,2023

ದೀಪಾವಳಿ ಪೂಜೆ

ದೀಪಾವಳಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲನೇ ದಿನ ನರಕ ಚತುರ್ದಶಿ, ಎರಡನೇ ದಿನ ಲಕ್ಷ್ಮೀ ಪೂಜೆ, ಗೋಪೂಜೆ ಮೂರನೇಯ ದಿನ ದೀಪಾವಳಿ. ಈ ದಿನ 6 ದೇವತೆಗಳನ್ನು ಪೂಜಿಸಬೇಕು.

ದೀಪಾವಳಿ ಪೂಜೆ

ನರಕ ಚತುರ್ದಶಿಯನ್ನು ದೀಪಾವಳಿಯ ಮೊದಲ ದಿನ ಆಚರಿಸಲಾಗುತ್ತದೆ. ಈ ವರ್ಷ ನ.೧೨ರಂದು ನರಕ ಚತುರ್ದಶಿ.

ದೀಪಾವಳಿ ಪೂಜೆ

ನರಕ ಚತುರ್ದಶಿ ರಾತ್ರಿ ಯಮನನ್ನು ಪೂಜಿಸಲಾಗುತ್ತದೆ. ಈ ದಿನ ಯಮನ ಹೆಸರಿನಲ್ಲಿ ಸಾಸಿವೆ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ.

ದೀಪಾವಳಿ ಪೂಜೆ

ಈ ದಿನ ಬೆಳಿಗ್ಗೆ ಎದ್ದು ಕಾಳಿ ದೇವಿಯನ್ನು ಪೂಜಿಸುವುದು ಮಂಗಳಕರ. ಕಾಳಿಯನ್ನು ಆರಾಧಿಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ.

ದೀಪಾವಳಿ ಪೂಜೆ

ನರಕ ಚತುರ್ದಶಿ ದಿನ ಶ್ರೀ ಕೃಷ್ಣನನ್ನು ಕೂಡಾ ಪೂಜಿಸಲಾಗುತ್ತದೆ. ನರಕಾಸುರನನ್ನು ಶ್ರೀ ಕೃಷ್ಣ ಕೊಂದನೆಂದು ಹೇಳುತ್ತದೆ ಪುರಾಣ.

ದೀಪಾವಳಿ ಪೂಜೆ

ನರಕ ಚತುರ್ದಶಿ ದಿನ ಶಿವನನ್ನು ಕೂಡಾ ಪೂಜಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ.

ದೀಪಾವಳಿ ಪೂಜೆ

ಈ ದಿನ ಆಂಜನೇಯನ ಪೂಜೆಗೂ ವಿಶೇಷ ಮಹತ್ವ ಇದೆ. ನಂಬಿಕೆಗಳ ಪ್ರಕಾರ ಆಂಜನೇಯನ ಪೂಜೆಯಿಂದ ಕಷ್ಟ ಕಳೆಯುತ್ತದೆಯಂತೆ.

ದೀಪಾವಳಿ ಪೂಜೆ

ವಾಮನ ದೇವನನ್ನು ಪೂಜಿಸುವುದರಿನ್ದಲೂ ಫಲ ಸಿಗುತ್ತದೆಯಂತೆ. ಈ ದಿನ ವಿಷ್ಣು ವಾಮನ ಅವತಾರದಲ್ಲಿ ಬಾಲಿ ಮಹಾರಾಜನನ್ನು ಹರಸಿದನಂತೆ.

ದೀಪಾವಳಿ ಪೂಜೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story