Karun Nair: ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆ ಎದುರಾದಾಗ ಅಥವಾ ಯಾವುದೋ ಒಂದು ಅವಕಾಶ ಕೈ ಜಾರಿ ಹೋದಾಗ ದೇವರ ಬಳಿ ಮತ್ತೊಂದು ಅವಕಾಶ ನೀಡುವಂತೆ ಬೇಡಿಕೊಳ್ಳುತ್ತೇವೆ. ಅಂತಹ ಕ್ಷಣಗಳು ಕೆಲವೊಮ್ಮೆ ಈಡೇರುತ್ತವೆ ಸಹ.. ಇದೀಗ ಕರುಣ್ ನಾಯರ್ ವಿಷಯದಲ್ಲೂ ಹೀಗೆಯೇ ಆಗಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಕೆಲವೇ ಆಟಗಾರರಲ್ಲಿ ಒಬ್ಬರಾದ ಕರುಣ್ ನಾಯರ್ ಒಮ್ಮೆ ತಂಡದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಅಂತಹ ಸಂದರ್ಭದಲ್ಲಿ, ಡಿಸೆಂಬರ್ 10, 2022 ರಂದು, ಸಾಮಾಜಿಕ ಮಾಧ್ಯಮದಲ್ಲಿ "ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು" ಎಂದು ಭಾವನಾತ್ಮಕವಾಗಿ ಬರೆದಿದ್ದರು. ಆ ಸಮಯದಲ್ಲಿ ಅವರು ಕರ್ನಾಟಕ ತಂಡದಲ್ಲೂ ಇರಲಿಲ್ಲ ಅಥವಾ ಭಾರತ ತಂಡಕ್ಕೆ ಮರಳುವ ಯಾವುದೇ ಭರವಸೆಯೂ ಇರಲಿಲ್ಲ.
ಇದನ್ನೂ ಓದಿ: 10ನೇ ತರಗತಿಗೆ ಪ್ರವೇಶ ಪಡೆದ ಐಪಿಎಲ್ ತಾರೆ ವೈಭವ ಸೂರ್ಯವಂಶಿ..! ಶಾಲೆಯ ಫೀಸ್ ಎಷ್ಟು ಗೊತ್ತೇ?
ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ವಿಶೇಷವೆಂದರೆ ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡಿದಾಗ, ಅವನ ಹಳೆಯ ಪೋಸ್ಟ್ಗಳು ಮತ್ತೆ ಚರ್ಚೆಯ ವಿಷಯವಾಗುತ್ತವೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕರುಣ್ ನಾಯರ್ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿದಾಗ ನಡೆದಿದ್ದು ಕೂಡ ಇದೇ... ಅವರ ಹಳೆಯ ಟ್ವೀಟ್ ಮತ್ತೆ ವೈರಲ್ ಆಗಿದ್ದು. ಸುಮಾರು ಮೂರು ವರ್ಷಗಳ ನಂತರ ಐಪಿಎಲ್ಗೆ ಮರಳಿದಾಗ, ಮೊದಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದ್ದರು. ಅವರ ಮುಂದೆ ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಶ್ರೇಷ್ಠ ಬೌಲರ್ಗಳಿದ್ದರೂ ಸಹ ಕೇರ್ ಮಾಡಿರಲಿಲ್ಲ ನಾಯರ್.
ಪಂದ್ಯದ ನಂತರ, ಮಾತನಾಡಿದ್ದ ಅವರು, "ಫಾಫ್ ಗಾಯದ ನಂತರ, ನಮ್ಮಂತಹ ಬ್ಯಾಟ್ಸ್ಮನ್ಗಳಿಗೆ ಯಾವುದೇ ಸಮಯದಲ್ಲಿ ಅವಕಾಶ ಸಿಗಬಹುದು ಎಂದು ನಮಗೆ ತಿಳಿದಿತ್ತು. ಆದ್ದರಿಂದ ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ. ನಾನು ಋತುವಿನ ಉದ್ದಕ್ಕೂ ತಯಾರಿ ನಡೆಸುತ್ತಲೇ ಇದ್ದೆ ಮತ್ತು ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇದೆಲ್ಲ ನನಗೆ ಹೊಸದಲ್ಲ. ನಾನು ತಂಡಕ್ಕಾಗಿ ಪ್ರದರ್ಶನ ನೀಡಲು ಬಯಸಿದ್ದೆ" ಎಂದಿದ್ದರು.
ಬುಮ್ರಾ ಅವರಂತಹ ವಿಶ್ವದ ಅತ್ಯುತ್ತಮ ಬೌಲರ್ ವಿರುದ್ಧ ಕರುಣ್ ನಾಯರ್ ಅವರ ಪ್ರದರ್ಶನವು ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದರು ಎಂಬುದಕ್ಕೆ ಪುರಾವೆಯಾಗಿತ್ತು. "ನಾನು ಲಯದಲ್ಲಿದ್ದೆ, ನಾನು ಆಡಲು ಬಯಸುವ ಚೆಂಡುಗಳನ್ನು ಆರಿಸಬೇಕಾಗಿತ್ತು. ಅದಕ್ಕೆ ತಕ್ಕಂತೆ ನಾನು ಆತ್ಮವಿಶ್ವಾಸದಿಂದ ಆಡುತ್ತಿದ್ದೆ. ಬುಮ್ರಾ ಈಗ ವಿಶ್ವದ ಅತ್ಯುತ್ತಮ ಬೌಲರ್. ಆದ್ದರಿಂದ ಅವರು ಎಲ್ಲಿ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ನಾನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದೆ. ನಾನು ನನ್ನ ಮೇಲೆ ನಂಬಿಕೆ ಇಟ್ಟಿದ್ದೆ ಮತ್ತು ನಾನು ರನ್ ಗಳಿಸಬಹುದಾದ ಪ್ರದೇಶಗಳಲ್ಲಿ ಶಾಟ್ಗಳನ್ನು ಆಡುತ್ತಿದ್ದೆ. ಇದೆಲ್ಲ ನನಗೆ ಹೊಸದಲ್ಲ. ಆರಂಭದಲ್ಲಿ ಸಮಯ ತೆಗೆದುಕೊ, ಸಾಮಾನ್ಯ ಶಾಟ್ಗಳನ್ನು ಆಡು, ಅಗತ್ಯವಿದ್ದರೆ ಹೊಸ ಶಾಟ್ಗಳನ್ನು ಆಡು ಎಂದು ನನಗೆ ನಾನೇ ಹೇಳಿಕೊಂಡೆ ಮತ್ತು ಅದೃಷ್ಟವಶಾತ್ ಎಲ್ಲವೂ ಚೆನ್ನಾಗಿ ನಡೆಯಿತು" ಎಂದರು.
ಡಿಸೆಂಬರ್ 2022 ರ ಹೊತ್ತಿಗೆ, ನಾಯರ್ ಅವರ T20 ಸ್ಟ್ರೈಕ್ ರೇಟ್ 131.15 ಆಗಿತ್ತು. ಆದರೆ ಜನವರಿ 2023 ರಿಂದ, ಅವರ ಆಟ ಮತ್ತೆ ಜೀವಂತವಾದಾಗ, ಅವರ ಸ್ಟ್ರೈಕ್ ರೇಟ್ 171.87 ಕ್ಕೆ ಏರಿದೆ. "ನನ್ನ ಸ್ಟ್ರೈಕ್ ರೇಟ್ ಯಾವಾಗಲೂ ಉತ್ತಮವಾಗಿದೆ. ನಾನು ಹೆಚ್ಚು ಬದಲಾಗಿಲ್ಲ, ಆದರೆ ನನ್ನ ನೆಚ್ಚಿನ ಹೊಡೆತಗಳನ್ನು ಚೆನ್ನಾಗಿ ಆಡಲು ಖಂಡಿತವಾಗಿಯೂ ಶ್ರಮಿಸಿದ್ದೇನೆ" ಎಂದು ನಾಯರ್ ಹೇಳುತ್ತಾರೆ.
ಇದನ್ನೂ ಓದಿ: ಬ್ರೆಕ್ಪಾಸ್ಟ್ ಬಳಿಕ ಈ ಬೀಜವನ್ನ ಬಾಯಲ್ಲಿಟ್ಟುಕೊಂಡ್ರೆ ಸಾಕು ದಿನವಿಡೀ ನಾರ್ಮಲ್ ಇರುತ್ತೆ ಶುಗರ್! ಪಥ್ಯ ಮಾಡುವುದೇ ಬೇಡ..
ಇನ್ನು ಕರುಣ್ ನಾಯರ್ ಅವರಿಗೆ ಅವಕಾಶ ನೀಡುವಲ್ಲಿ ಕೆಎಲ್ ರಾಹುಲ್ ಪಾತ್ರ ಕೂಡ ಮುಖ್ಯವಾಗಿದೆ. ಪ್ರಮುಖ ಆಟಗಾರ ಗಾಯಗೊಂಡಾಗ, ತಂಡದ ಒಳಿತಿಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬಂದಾಗ ರಾಹುಲ್ ಆರಿಸಿದ್ದು ನಾಯರ್ ಅವರನ್ನು. ಅಂದು ಬೇಡಿಕೊಂಡ ಅವಕಾಶದ ಕೋರಿಗೆ ರಾಹುಲ್ ಮೂಲಕ ನೆರವೇರಿತು ಎಂದರೆ ತಪ್ಪಾಗಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









