2019 ನೇ ವಿಶ್ವಕಪ್ ವರೆಗೆ ಧೋನಿಯೇ ಭಾರತದ ತಂಡದ ವಿಕೆಟ್ ಕೀಪರ್ - ಎಂ.ಎಸ್.ಕೆ.ಪ್ರಸಾದ್

       

Last Updated : Dec 24, 2017, 03:39 PM IST
2019 ನೇ ವಿಶ್ವಕಪ್ ವರೆಗೆ ಧೋನಿಯೇ ಭಾರತದ ತಂಡದ ವಿಕೆಟ್ ಕೀಪರ್ - ಎಂ.ಎಸ್.ಕೆ.ಪ್ರಸಾದ್ title=

ಮುಂಬೈ: 2019 ನೇ ವಿಶ್ವಕಪ್ ವರೆಗೆ ಧೋನಿಯೇ ಭಾರತದ ತಂಡದ ವಿಕೆಟ್ ಕೀಪರ್ ಆಗಿ ಇರುತ್ತಾರೆ ಎಂದು ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ಸೀಮಿತ ಓವರಗಳ ಕ್ರಿಕೆಟ್ ನಲ್ಲಿ ಧೋನಿಯ ಸ್ಥಾನಕ್ಕೆ ರಿಶ್ಬಾ ಪಂತ್ ಹಾಗೂ ದಿನೇಶ್ ಕಾರ್ತಿಕ್ ರ  ಹೆಸರು ವಿಕೆಟ್ ಕೀಪಿಂಗ್  ಗಾಗಿ ಬಲವಾಗಿ ಕೇಳಿಬಂದಿತ್ತು , ಆದರೆ ಈ ಕುರಿತಾಗಿ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಪ್ರಸಾದ್  ಸ್ಪಷ್ಟಪಡಿಸಿದ್ದು "ನನ್ನ ಪ್ರಕಾರ ಇಂದಿಗೂ ಕೂಡ ಧೋನಿ ವಿಶ್ವದ ನಂಬರ್ ಒನ್ ವಿಕೆಟ್ ಕೀಪರ್ ಆಗಿದ್ದು  ಇದನ್ನು ನಾವು ಇತ್ತೀಚಿನ  ಶ್ರೀಲಂಕಾ ವಿರುದ್ದದ T20 ಪಂದ್ಯದಲ್ಲಿ ಅವರ ಸ್ಟಂಪಿಂಗ್ ಅದ್ಬುತವಾದದ್ದು, ಆದ್ದರಿಂದ ನಾವು 2019 ರ ವಿಶ್ವಕಪ್ ವರೆಗೆ ಧೋನಿಯೇ ಭಾರತ ತಂಡದ  ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ" ಎಂದು ತಿಳಿಸಿದ್ದಾರೆ.

ಅಲ್ಲದೆ ಯುವ ವಿಕೆಟ್ ಕೀಪರ್ ಗಳ ಬಗ್ಗೆ ಪ್ರತಿಕರ್ಯಿಸುತ್ತಾ ಅವರ್ಯಾರು ಕೂಡಾ ನಾವು ನೀರಿಕ್ಷಿಸಿದ ಮಟ್ಟದಲ್ಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೂಡಾ ನಾವು ಆ ಆಟಗಾರಿಗೆ ಭಾರತ ಎ ತಂಡದಲ್ಲಿ ಅವಕಾಶ ನೀಡುತ್ತೇವೆ ಎಂದು ಮಾಜಿ ವಿಕೆಟ್ ಕೀಪರ್ ಪ್ರಸಾದ್ ಹೇಳಿದ್ದಾರೆ. 
  

Trending News