RCB ಪ್ಲೇಆಪ್‌ಗೆ ಹೋದ್ರೆ ಕಪ್‌ ಗೆಲ್ತಾರೆ, ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ..! ಮಾಜಿ ಕ್ರಿಕೆಟಿಗನ ಶಾಕಿಂಗ್‌ ಹೇಳಿಕೆ 

IPL 2025 playoffs : ಐಪಿಎಲ್ 2025 ರ ಸೀಸನ್ ಮುಂದುವರೆದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಫಾರ್ಮ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಈ ಬಾರಿ ಆರ್‌ಸಿಬಿ ಪ್ಲೇಆಫ್ ತಲುಪಿದರೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಹೇಳಿದ್ದಾರೆ.. 

Written by - Krishna N K | Last Updated : Apr 19, 2025, 06:08 PM IST
    • ಈ ಸೀಸನ್‌ನಲ್ಲಿ ಆರ್‌ಸಿಬಿ, ತವರು ನೆಲದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ.
    • ಈ ಬಾರಿ ಆರ್‌ಸಿಬಿ ಪ್ಲೇಆಫ್ ತಲುಪಿದರೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ
    • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಫಾರ್ಮ್ ಬಗ್ಗೆ ಮಾಜಿ ಕ್ರಿಕೆಟಿಗ ಹೇಳಿಕೆ
RCB ಪ್ಲೇಆಪ್‌ಗೆ ಹೋದ್ರೆ ಕಪ್‌ ಗೆಲ್ತಾರೆ, ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ..! ಮಾಜಿ ಕ್ರಿಕೆಟಿಗನ ಶಾಕಿಂಗ್‌ ಹೇಳಿಕೆ 

Ambati Rayudu on RCB : ಈ ಸೀಸನ್‌ನಲ್ಲಿ ಆರ್‌ಸಿಬಿ, ತವರು ನೆಲದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಅವರ ಸೋಲು ಇದಕ್ಕೆ ಸಾಕ್ಷಿಯಾಗಿದೆ. ಈ ದಾಖಲೆಯ ಪ್ರಕಾರ, ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ತವರಿನಲ್ಲಿ ಅತಿ ಹೆಚ್ಚು ಸೋಲುಗಳನ್ನು ಅನುಭವಿಸಿದ ಮೊದಲ ತಂಡವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಇದುವರೆಗೆ 46 ಪಂದ್ಯಗಳಲ್ಲಿ ಸೋತಿದೆ. 

ಈ ಹಿನ್ನೆಲೆಯಲ್ಲಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಚೇತೇಶ್ವರ ಪೂಜಾರ ಅವರೊಂದಿಗೆ ಭಾಗವಹಿಸಿದ್ದ ಅಂಬಟಿ ರಾಯುಡು, ಆರ್‌ಸಿಬಿಯ ತವರಿನ ಫಾರ್ಮ್‌ಗೆ ಪ್ರತಿಕ್ರಿಯಿಸಿದರು. "ತವರಣದಲ್ಲಿ ಸತತ ಸೋಲುಗಳು ಆರ್‌ಸಿಬಿಯ ಪ್ಲೇಆಫ್ ಅವಕಾಶಗಳಿಗೆ ಧಕ್ಕೆ ತರುತ್ತವೆಯೇ?" ಎಂದು ನಿರೂಪಕ ಕೇಳಿದರು. 

ಇದನ್ನೂ ಓದಿ:Forgotten History: ಜಗತ್ತಿನಲ್ಲಿ ಗೂಗ್ಲಿ ಹುಟ್ಟಿದ್ದು ಹೇಗೆ? ಮತ್ತು ಭಾರತದಲ್ಲಿ ಮೊದಲು ಇದನ್ನು ಬಳಸಿದ ಕ್ರಿಕೆಟರ್ ಯಾರು?

ಆಗ ರಾಯುಡು, ತವರಿನ ಪಂದ್ಯಗಳನ್ನು ಗೆಲ್ಲದಿದ್ದರೆ RCB ಪ್ಲೇಆಫ್ ತಲುಪುವುದು ಕಷ್ಟ ಎಂದು ಸ್ಪಷ್ಟವಾಗಿ ಹೇಳಿದರು.. ಎದುರಾಳಿಯ ಮೈದಾನದಲ್ಲಿ ಪ್ರತಿ ಬಾರಿಯೂ ಗೆಲ್ಲಲು ಸಾಧ್ಯವಿಲ್ಲ, ಆಯಾ ತಂಡಗಳು ಸಹ ಉತ್ತಮ ಪ್ರದರ್ಶನದೊಂದಿಗೆ ಕಣಕ್ಕೆ ಇಳಿಯುತ್ತಿವೆ ಎಂದು ಅಂಬಟಿ ವಿವರಿಸಿದರು. ಆದರೆ, ಆರ್‌ಸಿಬಿ ಪ್ಲೇಆಫ್ ತಲುಪಿದರೆ, ಪ್ರಶಸ್ತಿ ಗೆಲ್ಲಲು ಸಾಕಷ್ಟು ಅವಕಾಶಗಳಿವೆ ಎಂದರು.

ಮುಂದಿನ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ ಸ್ಥಳಗಳಲ್ಲಿ ನಡೆಯಲಿದ್ದು, ಇದು ಆರ್‌ಸಿಬಿಗೆ ಸಕಾರಾತ್ಮಕವಾಗಬಹುದು ಎಂದು ರಾಯುಡು ವಿಶ್ಲೇಷಿಸಿದರು. ಅಂಬಟಿ ಮಾತುಗಳು ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ತುಂಬುವಂತಿತ್ತು.

ಇದನ್ನೂ ಓದಿ:IPL 2025, RCB vs PBKS: ತವರಿನಲ್ಲಿಯೇ ಹ್ಯಾಟ್ರಿಕ್‌ ಸೋಲು; ಮತ್ತೊಮ್ಮೆ ನಿರಾಸೆ ಮೂಡಿಸಿದ ಆರ್‌ಸಿಬಿ!!

ಅಂಬಟಿ ರಾಯುಡು ಮಾಡಿರುವ ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಐಪಿಎಲ್ ಪ್ರಶಸ್ತಿ ಗೆಲ್ಲಲು, ಪ್ಲೇಆಫ್ ತಲುಪುವುದು ಮಾತ್ರವಲ್ಲ, ನಿರ್ಣಾಯಕ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಸಹ ಅಗತ್ಯ.  ಮುಂದಿನ ದಿನಗಳಲ್ಲಿ ಏನಾಗುತ್ತೆ RCB ಪರಿಸ್ಥಿತಿ ಅಂತ ನೋಡಬೇಡಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News