IPL 2023: ಮಗ ಅರ್ಜುನ್ ಸಾಧನೆ ಕಂಡು ಭಾವುಕರಾದ ಸಚಿನ್ ಕೊಟ್ರು ಭರ್ಜರಿ ಗಿಫ್ಟ್: ಏನದು ಗೊತ್ತಾ?

Sachin Tendulkar Video: ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್‌ ಪರ ಐಪಿಎಲ್-2023ರಲ್ಲಿ ಈ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 2 ಓವರ್‌’ಗಳಲ್ಲಿ 17 ರನ್ ಬಿಟ್ಟುಕೊಟ್ಟಿದ್ದರು. ಆದರೆ ಮಂಗಳವಾರ ಸನ್‌ ರೈಸರ್ಸ್ ಹೈದರಾಬಾದ್ (ಎಸ್‌ ಆರ್‌ ಎಚ್) ವಿರುದ್ಧದ ಎರಡನೇ ಪಂದ್ಯದಲ್ಲಿ 18 ರನ್‌’ಗಳಿಗೆ 1 ವಿಕೆಟ್ ಪಡೆದರು.

Written by - Bhavishya Shetty | Last Updated : Apr 19, 2023, 10:59 PM IST
    • ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್‌ ಪರ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.
    • ಎಸ್‌ ಆರ್‌ ಎಚ್ ವಿರುದ್ಧದ ಎರಡನೇ ಪಂದ್ಯದಲ್ಲಿ 18 ರನ್‌’ಗಳಿಗೆ 1 ವಿಕೆಟ್ ಪಡೆದರು
    • ಡ್ರೆಸ್ಸಿಂಗ್ ರೂಮ್‌’ನಲ್ಲಿ ಚಪ್ಪಾಳೆಗಳ ನಡುವೆ ಈ ಖುಷಿಯ ಕ್ಷಣ ಕಂಡಬಂತು.
IPL 2023: ಮಗ ಅರ್ಜುನ್ ಸಾಧನೆ ಕಂಡು ಭಾವುಕರಾದ ಸಚಿನ್ ಕೊಟ್ರು ಭರ್ಜರಿ ಗಿಫ್ಟ್: ಏನದು ಗೊತ್ತಾ? title=
Sachin Tendulkar

Sachin Tendulkar Video: ಪೋಷಕರಿಗೆ ತಮ್ಮ ಮಕ್ಕಳನ್ನು ಸಾಧನೆಯನ್ನು ಕಾಣೋದೇ ಒಂದು ಖುಷಿ. ಆ ಖುಷಿಗೆ ಬಡತನ-ಸಿರಿತನ ಎಂಬ ಭೇದವಿಲ್ಲ. ಇದೀಗ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಜೀವನದಲ್ಲೂ ಕೂಡ ಇಂತಹ ಹೆಮ್ಮೆಯ ಕ್ಷಣ ಬಂದಿದೆ. ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಮಂಗಳವಾರ ನಡೆದ ಐಪಿಎಲ್‌’ನಲ್ಲಿ ಮೊದಲ ವಿಕೆಟ್ ಪಡೆದಿದ್ದಾರೆ. ಈ ಖುಷಿಯಲ್ಲಿ ಸಚಿನ್ ಮಗನಿಗೆ ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ: Aarti Mittal: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಅರೆಸ್ಟ್!

ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್‌ ಪರ ಐಪಿಎಲ್-2023ರಲ್ಲಿ ಈ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 2 ಓವರ್‌’ಗಳಲ್ಲಿ 17 ರನ್ ಬಿಟ್ಟುಕೊಟ್ಟಿದ್ದರು. ಆದರೆ ಮಂಗಳವಾರ ಸನ್‌ ರೈಸರ್ಸ್ ಹೈದರಾಬಾದ್ (ಎಸ್‌ ಆರ್‌ ಎಚ್) ವಿರುದ್ಧದ ಎರಡನೇ ಪಂದ್ಯದಲ್ಲಿ 18 ರನ್‌’ಗಳಿಗೆ 1 ವಿಕೆಟ್ ಪಡೆದರು. ಕುತೂಹಲ ಏನೆಂದರೆ ಪಂದ್ಯದ ಕೊನೆಯ ಓವರ್’ನಲ್ಲಿ ಅಗತ್ಯವಾಗಿ ಬೇಕಿದ್ದ ವಿಕೆಟ್’ನ್ನು ಅವರನ್ನು ಕಬಳಿಸಿದ್ದರು. ಈ ಸಾಧನೆಯನ್ನು ಮುಂಬೈ ತಂಡದ ಮ್ಯಾನೇಜ್ಮೆಂಟ್ ಕೂಡ ಅಭಿನಂದಿಸಿದೆ.

 

ಬ್ಯಾಡ್ಜ್ ತೊಡಿಸಿದ ಸಚಿನ್!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಮ್ಯಾನೇಜ್‌ಮೆಂಟ್ ಪರವಾಗಿ POTM (ಪ್ಲೇಯರ್ ಆಫ್ ದಿ ಮ್ಯಾಚ್) ಬ್ಯಾಡ್ಜ್ ಅನ್ನು ಮಗ ಅರ್ಜುನ್ ಅವರ ಟಿ-ಶರ್ಟ್‌’ಗೆ ತೊಡಿಸಿದರು. ಡ್ರೆಸ್ಸಿಂಗ್ ರೂಮ್‌’ನಲ್ಲಿ ಚಪ್ಪಾಳೆಗಳ ನಡುವೆ ಈ ಖುಷಿಯ ಕ್ಷಣ ಕಂಡಬಂತು. ಈ ಸಂದರ್ಭದಲ್ಲಿ ಅಪ್ಪ ಮಗ ಇಬ್ಬರೂ ಭಾವುಕರಾಗಿದ್ದು ಕಂಡು ಬಂದಿದ್ದು, ಇದೊಂದು ಹೆಮ್ಮೆಯ ಕ್ಷಣ ಎಂದೇ ಹೇಳಬಹುದು.

ಇದನ್ನೂ ಓದಿ: Fish: ಈ ಮೀನಿನ ಬೆಲೆ ಬರೋಬ್ಬರಿ 25 ಲಕ್ಷದಿಂದ 1 ಕೋಟಿ ರೂ.! ತಿನ್ನೋಕೆ ಆಗದ ಈ ದುಬಾರಿ ಫಿಶ್ ಮತ್ತೇನಕ್ಕೆ ಪ್ರಯೋಜನ?

ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ ಮಾತನಾಡಿದ ಮುಂಬೈ ಇಂಡಿಯನ್ಸ್ ವೇಗಿ ಅರ್ಜುನ್ ತೆಂಡೂಲ್ಕರ್, “ಮೊದಲ ಐಪಿಎಲ್ ವಿಕೆಟ್ ಕಬಳಿಸಿರುವುದು ಸಂತೋಷವಾಗಿದೆ. ನಮ್ಮಲ್ಲಿ ಏನಿದೆಯೋ ಅದರಲ್ಲಿ ಯೋಜನೆ ರೂಪಿಸಿ, ಏನು ಮತ್ತು ಅದರಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಮೇಲೆ ನಾನು ಗಮನ ಹರಿಸಬೇಕಾಗಿತ್ತು” ಎಂದು ಹೇಳಿದರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News