ಐಪಿಎಲ್ ನಡುವೆಯೇ ಕಹಿಸುದ್ದಿ...‌ 104 ಪಂದ್ಯ ಗೆದ್ದಿದ್ದ ಭಾರತದ ದಿಗ್ಗಜ ಕ್ಯಾಪ್ಟನ್‌ ಹೆಸರನ್ನು ಕ್ರಿಕೆಟ್ ಸ್ಟೇಡಿಯಂನಿಂದ ಕಿತ್ತುಹಾಕಲು ಆದೇಶ! ಕಾರಣವೇನು?

Mohammed Azharuddin: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದ ಉತ್ತರ ಪೆವಿಲಿಯನ್‌ನಿಂದ ಅಜರುದ್ದೀನ್ ಹೆಸರನ್ನು ತೆಗೆದುಹಾಕಬೇಕು ಎಂದು ಹೆಚ್​ಸಿಎ ನೈತಿಕ ಅಧಿಕಾರಿ ಮತ್ತು ಓಂಬುಡ್ಸ್​ಮನ್ ನ್ಯಾಯಮೂರ್ತಿ ವಿ ಈಶ್ವರಯ್ಯ ಅವರು ಆದೇಶ ಹೊರಡಿಸಿದ್ದಾರೆ.  

Written by - Bhavishya Shetty | Last Updated : Apr 20, 2025, 08:57 PM IST
    • ಮೊಹಮ್ಮದ್ ಅಜರುದ್ದೀನ್ ವಿರುದ್ಧ ಈ ಆದೇಶ
    • ಎಲ್‌ಸಿಸಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ 226 ಅಂಗಸಂಸ್ಥೆ ಸದಸ್ಯರಲ್ಲಿ ಒಂದು
    • 'ಎಲ್‌ಸಿಸಿ' ಕ್ರಿಕೆಟ್ ಅಕಾಡೆಮಿ ಈ ನಿರ್ಧಾರದ ವಿರುದ್ಧ ದೂರು ದಾಖಲಿಸಿತ್ತು
ಐಪಿಎಲ್ ನಡುವೆಯೇ ಕಹಿಸುದ್ದಿ...‌ 104 ಪಂದ್ಯ ಗೆದ್ದಿದ್ದ ಭಾರತದ ದಿಗ್ಗಜ ಕ್ಯಾಪ್ಟನ್‌ ಹೆಸರನ್ನು ಕ್ರಿಕೆಟ್ ಸ್ಟೇಡಿಯಂನಿಂದ ಕಿತ್ತುಹಾಕಲು ಆದೇಶ! ಕಾರಣವೇನು?
Mohammed Azharuddin Name Removed From Hyderabad Stadium Stand

Mohammed Azharuddin Name Removed From Hyderabad Stadium Stand: ಇತ್ತೀಚೆಗೆ, ಎಚ್​ಸಿಎ ನೈತಿಕ ಅಧಿಕಾರಿ ಮತ್ತು ಓಂಬುಡ್ಸ್​ಮನ್ ನ್ಯಾಯಮೂರ್ತಿ ವಿ ಈಶ್ವರಯ್ಯ ಅವರು ಆದೇಶ ಹೊರಡಿಸಿದ್ದು, ಅದರಲ್ಲಿ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದ ಉತ್ತರ ಪೆವಿಲಿಯನ್‌ನಿಂದ ಅಜರುದ್ದೀನ್ ಹೆಸರನ್ನು ತೆಗೆದುಹಾಕಬೇಕು ಎಂದು ಹೇಳಲಾಗಿದೆ. ಎಚ್‌ಸಿಎ ಮಾಜಿ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ವಿರುದ್ಧ ಈ ಆದೇಶವನ್ನು ತರಲಾಗಿದೆ. ಈ ವರ್ಷದ ಆರಂಭದಲ್ಲಿ ಎಲ್‌ಸಿಸಿ (ಲಾರ್ಡ್ಸ್ ಕ್ರಿಕೆಟ್ ಕ್ಲಬ್) ಸಲ್ಲಿಸಿದ ದೂರಿನ ಮೇರೆಗೆ ಏಪ್ರಿಲ್ 19 ರಂದು ಈ ಆದೇಶವನ್ನು ಅಂಗೀಕರಿಸಲಾಯಿತು. ಎಲ್‌ಸಿಸಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ 226 ಅಂಗಸಂಸ್ಥೆ ಸದಸ್ಯರಲ್ಲಿ ಒಂದಾಗಿದೆ.

ಇದನ್ನೂ ಓದಿ:  ನಟ ಕಮಲ್‌ ಹಾಸನ್‌ ಮೊದಲ ಪತ್ನಿ ಇವರೇ ನೋಡಿ... ಡಿವೋರ್ಸ್‌ ಆಗಿದ್ದೇಕೆ, ವಿಚ್ಛೇದನದ ಬಳಿಕ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತೇ!

ಕಾರಣವೇನು?
೨೦೧೯ ರಲ್ಲಿ, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾಗ, ಮೊಹಮ್ಮದ್ ಅಜರುದ್ದೀನ್ ನವೆಂಬರ್ ೨೫ ರಂದು ಅಪೆಕ್ಸ್ ಕೌನ್ಸಿಲ್ ಸಭೆಯನ್ನು ಕರೆದಿದ್ದರು. ಅದರ ಅಧ್ಯಕ್ಷತೆಯನ್ನು ಅವರೇ ವಹಿಸಿದ್ದರು. ಈ ಸಭೆಯಲ್ಲಿ, ಹೈದರಾಬಾದ್​ನ ಉಪ್ಪಲ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಉತ್ತರ ಪೆವಿಲಿಯನ್ ಸ್ಟ್ಯಾಂಡ್​​ಗೆ ಅಜರುದ್ದೀನ್ ಹೆಸರನ್ನು ಇಡಲಾಗಿತ್ತು. ಇನ್ನು ಸ್ಟ್ಯಾಂಡ್​ಗೆ ತಮ್ಮ ಹೆಸರು ಇಡದಬಾರದೆಂದು ಹೆಚ್‌ಸಿಎ ಸಾಮಾನ್ಯ ಸಭೆ ಅಥವಾ ಅಪೆಕ್ಸ್ ಕೌನ್ಸಿಲ್ ಈ ನಿರ್ಧಾರ ಅನುಮೋದಿಸಿಲ್ಲ. ಆದರೂ ಅಜರುದ್ದೀನ್ ಉತ್ತರ ಸ್ಟ್ಯಾಂಡ್​ಗೆ ಮೊಹಮ್ಮದ್ ಅಜರುದ್ದೀನ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದಾದ ನಂತರ, ಈ ವರ್ಷದ ಫೆಬ್ರವರಿ 28 ರಂದು ನಗರದ 'ಎಲ್‌ಸಿಸಿ' ಕ್ರಿಕೆಟ್ ಅಕಾಡೆಮಿ ಈ ನಿರ್ಧಾರದ ವಿರುದ್ಧ ದೂರು ದಾಖಲಿಸಿತ್ತು. ಇದನ್ನು ಕ್ಲಬ್ ಸಂಘದ ಜ್ಞಾಪಕ ಪತ್ರದ ಉಲ್ಲಂಘನೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಕ್ಲಬ್ ಪ್ರಕಾರ, ಅಪೆಕ್ಸ್‌ನ ಯಾವುದೇ ಸದಸ್ಯರು ತಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಅಜರುದ್ದೀನ್ ಹೇಳಿಕೆ:
ಲೋಕಪಾಲರ ಈ ಆದೇಶದ ಕುರಿತು 'ದಿ ಹಿಂದೂ' ಜೊತೆ ಮಾತನಾಡಿದ ಅಜರುದ್ದೀನ್, 'ಇದರಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ, ಮತ್ತು ಲೋಕಪಾಲರ ಆದೇಶಗಳ ವಿರುದ್ಧ ನಾನು ಹೈಕೋರ್ಟ್‌ಗೆ ಹೋಗುತ್ತೇನೆ. ನಾನು ಇದರ ಬಗ್ಗೆ ಕಾಮೆಂಟ್ ಮಾಡಲು ಬಯಸುವುದಿಲ್ಲ. ನಾನು ಅಷ್ಟು ಕೆಳಮಟ್ಟಕ್ಕೆ ಇಳಿಯಲು ಬಯಸುವುದಿಲ್ಲ. ಕ್ರಿಕೆಟ್ ಜಗತ್ತು ಈ ಸಂಸ್ಥೆಯನ್ನು ನೋಡಿ ನಗುತ್ತದೆ. 17 ವರ್ಷಗಳ ವೃತ್ತಿಜೀವನದಲ್ಲಿ, 10 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದೆ. ಅದು ಕೂಡ ಗೌರವದಿಂದ. ಇದು ದುಃಖಕರವಾಗಿದೆ. ನಾನು ಕಾನೂನು ಮಾರ್ಗವನ್ನು ಆರಿಸಿಕೊಳ್ಳುತ್ತೇವೆ ಮತ್ತು ಕಾನೂನು ತನ್ನ ತೀರ್ಪನ್ನು ನೀಡುತ್ತದೆ" ಎಂದಿದ್ದಾರೆ.

ಇದನ್ನೂ ಓದಿ:  ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವ ಏಕೈಕ ಮದ್ದು ಈ ತರಕಾರಿ ರಸ.. ಇದೇ ರೀತಿ ಬಳಸಿದರೆ ರಿಸಲ್ಟ್‌ ಪಕ್ಕಾ!

ಈ ನಿರ್ಧಾರದ ನಂತರ LCC ತೃಪ್ತಿ ವ್ಯಕ್ತಪಡಿಸಿದ್ದು, ಕ್ಲಬ್ ಅಧ್ಯಕ್ಷೆ ಸೋಮನಾ ಮಿಶ್ರಾ ಅವರು ನ್ಯಾಯಯುತ ಮತ್ತು ಪ್ರಾಮಾಣಿಕ ನಿರ್ಧಾರವನ್ನು ನೀಡಿದ್ದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News