Rishabh Pant: ಭಾರತದ ಟೆಸ್ಟ್ ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ನಿಷೇಧಿಸಲಾಗುತ್ತದೆಯೇ? ಈ ವಿಷಯದ ಬಗ್ಗೆ ಈಗ ಗಂಭೀರ ಚರ್ಚೆ ನಡೆಯುತ್ತಿದೆ. ಲೀಡ್ಸ್ನಲ್ಲಿ ನಡೆದ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 465 ರನ್ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 471 ರನ್ ಗಳಿಸಿದ್ದ ಟೀಮ್ ಇಂಡಿಯಾ 6 ರನ್ಗಳ ಅಲ್ಪ ಮುನ್ನಡೆ ಸಾಧಿಸಿತ್ತು. ಫೀಲ್ಡರ್ಗಳು ಒಂದೇ ಬಾರಿಗೆ ನಾಲ್ಕು ಕ್ಯಾಚ್ಗಳನ್ನು ಕೈಬಿಟ್ಟಿದ್ದರಿಂದ ಭಾರತೀಯ ಬೌಲರ್ಗಳು ವಿಕೆಟ್ ಪಡೆಯಲು ತಡವರಿಸಬೇಕಾಯಿತು. ಅದೇ ಸಮಯದಲ್ಲಿ, ರಿಷಭ್ ಪಂತ್ ತೋರಿದ ಒಂದು ವರ್ತನೆಯು ಈಗ ಬಿಸಿ ಬಿಸಿ ವಿಚಾರವಾಗಿದೆ.
ಇಂಗ್ಲೆಂಡ್ನ ಇನ್ನಿಂಗ್ಸ್ನ 61 ನೇ ಓವರ್ನಲ್ಲಿ, ಹ್ಯಾರಿ ಬ್ರೂಕ್ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಬೌಂಡರಿ ಹೊಡೆದಿದ್ದಾರೆ. ಇದರ ನಂತರ, ಚೆಂಡನ್ನು ತೆಗೆದುಕೊಂಡ ಭಾರತೀಯ ವಿಕೆಟ್ ಕೀಪರ್ ರಿಷಭ್ ಪಂತ್ ಅಂಪೈರ್ ಪಾಲ್ ರೀಫೆಲ್ ಅವರ ಬಳಿಗೆ ಹೋಗಿದ್ದಾರೆ. ಚೆಂಡು ಆಕಾರ ಬದಲಾಗಿದೆ ಎಂದು ಹೇಳಿ, ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ಆದರೆ ಚೆಂಡನ್ನು ತಮ್ಮ ಕೈಯಿಂದ ಪರಿಶೀಲಿಸಿದ ಅಂಪೈರ್ ಪಾಲ್ ರೀಫೆಲ್, ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಚೆಂಡು ಆಕಾರ ಬದಲಾಗಿಲ್ಲ ಚೆನ್ನಾಗಿದೆ ಎಂದು ಹೇಳಿದ್ದರು.
ಆದರೆ, ರಿಷಭ್ ಪಂತ್ ಚೆಂಡನ್ನು ಬದಲಾಯಿಸಬೇಕೆಂದು ಅಂಪೈರ್ ಜೊತೆ ವಾದಿಸಿದ್ದಾರೆ. ಅಂಪೈರ್ ಒಪ್ಪದಿದ್ದಾಗ, ಅವರು ಹತಾಶೆಯಿಂದ ಚೆಂಡನ್ನು ನೆಲಕ್ಕೆ ಎಸೆದು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಂಪೈರ್ ಕಡೆಗೆ ಕೋಪ ವ್ಯಕ್ತಪಡಿಸುವುದು ಐಸಿಸಿಯ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ರ ಪ್ರಕಾರ, ಒಬ್ಬ ಆಟಗಾರನು ಅಂಪೈರ್ ಮೇಲೆ ಚೆಂಡನ್ನು ಎಸೆದರೆ ಅಥವಾ ಹತಾಶೆಯಿಂದ ಬ್ಯಾಟ್ ಮಾಡಿದರೆ, ಲೆವೆಲ್ 1 ಅಥವಾ ಲೆವೆಲ್ 2 ಅಪರಾಧದ ಅಡಿಯಲ್ಲಿ ಅವರ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ಲೆವೆಲ್ 1 ರ ಅಡಿಯಲ್ಲಿ, ಒಂದು ಪಂದ್ಯದ ನಿಷೇಧ ವಿಧಿಸಲಾಗುತ್ತದೆ.
ಟೀಮ್ ಇಂಡಿಯಾದ ಉಪನಾಯಕ ಮತ್ತು ವಿಕೆಟ್ ಕೀಪರ್ ಆಗಿರುವ ರಿಷಭ್ ಪಂತ್ ಅವರನ್ನು ನಿಷೇಧಿಸಿದರೆ, ತಂಡದ ಮೇಲೆ ಪರಿಣಾಮ ತೀವ್ರವಾಗಿರುತ್ತದೆ. ಇದರ ಹೊರತಾಗಿ, ರಿಷಭ್ ಪಂತ್ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಶತಕ ಗಳಿಸಿದ್ದರು. ಸದ್ಯ ಉತ್ತಮ ಫಾರ್ಮ್ನಲ್ಲಿರುವ ರಿಷಭ್ ಪಂತ್ ಮಾಡಿದ ತಪ್ಪಿಗೆ ಐಸಿಸಿ ಯಾವ ಶಿಕ್ಷೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
61ನೇ ಎಸೆತವನ್ನು ಬದಲಾಯಿಸಲು ಹಿಂಜರಿದ ಅಂಪೈರ್, ಕೊನೆಗೆ 74ನೇ ಓವರ್ನಲ್ಲಿ ಚೆಂಡನ್ನು ಬದಲಾಯಿಸಿದರು. ಜಸ್ಪ್ರೀತ್ ಬುಮ್ರಾ ಕೂಡ ಚೆಂಡನ್ನು ಬದಲಾಯಿಸಲು ಅಂಪೈರ್ ಅವರನ್ನು ಹಲವು ಬಾರಿ ಕೇಳಿಕೊಂಡರು. ಅಂತಿಮವಾಗಿ, 74ನೇ ಓವರ್ನಲ್ಲಿ, ರಿಂಗ್ ಟೆಸ್ಟ್ನಲ್ಲಿ ಚೆಂಡು ಆಕಾರ ಬದಲಾಗಿದೆ ಎಂದು ಕಂಡುಬಂದ ನಂತರ ಅಂಪೈರ್ ಹೊಸ ಚೆಂಡನ್ನು ನೀಡಿದರು. ಜಸ್ಪ್ರೀತ್ ಬುಮ್ರಾ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಪಡೆದಿದ್ದರು. SENA ದೇಶಗಳಲ್ಲಿ 150 ಟೆಸ್ಟ್ ವಿಕೆಟ್ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









