)
Shreyas Iyer shocking statement: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2026ರಲ್ಲಿ ಸತತ ಆರನೇ ಸೋಲು ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಸೋಲೋಪ್ಪಿದೆ. ಆರ್ಸಿಬಿ ನೀಡಿದ್ದ 223 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 199 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಇದರಿಂದಾಗಿ ಆರ್ಸಿಬಿ 23 ರನ್ಗಳ ಜಯ ಪಡೆಯಿತು. ಈ ಗೆಲುವಿನೊಂದಿಗೆ ಈ ಸೀಸನ್ನಲ್ಲಿ ಆರ್ಸಿಬಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಪ್ಲೇಆಫ್ ರೇಸ್ ಈಗ ಪಂಜಾಬ್ಗೆ ಇನ್ನಷ್ಟು ಕಠಿಣವಾಗಿದೆ. ಏಕೆಂದರೆ ಒಂದೇ ಒಂದು ಪಂದ್ಯ ಉಳಿದಿದ್ದು ಗೆಲುವು ಪಡೆಯುವುದು ಅನಿವಾರ್ಯವಾಗಿದೆ.
ಈ ಐಪಿಎಲ್ ಸೀಸನ್ನಲ್ಲಿ ಮೊದಲ 7 ಪಂದ್ಯಗಳಲ್ಲಿ ಪಂಜಾಬ್ ಸತತವಾಗಿ ಗೆಲುವು ಪಡೆದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು. ಈ ಬಾರಿ ಟ್ರೋಫಿ ಪಂಜಾಬ್ದ್ದೇ ಎನ್ನುವಂತೆ ಆಗಿತ್ತು. ಆದರೆ ಈಗ ಪಂಜಾಬ್ 6 ಪಂದ್ಯಗಳನ್ನು ಗೆದ್ದರು ಮತ್ತು ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರ ನಂತರ, ಪಂಜಾಬ್ ಮುಂದಿನ 6 ಪಂದ್ಯಗಳನ್ನು ಸತತವಾಗಿ ಸೋತಿದೆ. ಈಗ ಪಂಜಾಬ್ 13 ಪಂದ್ಯಗಳಿಂದ 13 ಅಂಕಗಳನ್ನು ಹೊಂದಿದೆ. ಪ್ಲೇ-ಆಫ್ ತಲುಪಲು ಪಂಜಾಬ್ ಕಿಂಗ್ಸ್ಗೆ ಉಳಿದಿರುವ ಏಕೈಕ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಈ ಪಂದ್ಯದಲ್ಲಿ ಗೆಲುವಿನ ಪಡೆದರೆ ಪಂಜಾಬ್ 15 ಅಂಕಗಳು ಮಾತ್ರ ಸಿಗುತ್ತವೆ. ಆದ್ದರಿಂದ ಪ್ಲೇಆಫ್ಗೆ ಅರ್ಹತೆ ಪಡೆಯಲು ಇತರ ತಂಡದ ಫಲಿತಾಂಶ ಮುಖ್ಯವಾಗುತ್ತದೆ.
ಆರ್ಸಿಬಿ ನೀಡಿದ 223 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ ಕಳಪೆ ಬ್ಯಾಟಿಂಗ್ ಆರಂಭ ಪಡೆಯಿತು. ಪವರ್ ಪ್ಲೇನ ಮೊದಲ 20 ಎಸೆತಗಳಲ್ಲಿ ಪಂಜಾಬ್ ಓಪನರ್ ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರು ವಿಕೆಟ್ ಒಪ್ಪಿಸಿದರು. ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಸೂರ್ಯಾಂಶ್ ಶೆಡ್ಜ್ ಮತ್ತು ಕೂಪರ್ ಕಾನ್ಲಿ ಪಂಜಾಬ್ನ ಇನ್ನಿಂಗ್ಸ್ ಅನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಶಶಾಂಕ್ 27 ಎಸೆತಗಳಲ್ಲಿ 56 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು. ಸ್ಟೊಯಿನಿಸ್ 37, ಸೂರ್ಯಾಂಶ್ ಶೆಡ್ಜ್ 35 ಮತ್ತು ಕಾನ್ಲಿ ಕೂಡ 37 ರನ್ ಗಳಿಸಿದರೂ ಗೆಲುವು ಸಾಧ್ಯವಾಗಲಿಲ್ಲ.
ಆರ್ಸಿಬಿ ಪರ ರಸಿಕ್ ಸಲಾಂ ದಾರ್ 3 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಭುವನೇಶ್ವರ ಕುಮಾರ್ 2 ವಿಕೆಟ್ ಪಡೆದು ಸಂಭ್ರಮಿಸಿದರು. ಜೋಶ್ ಹ್ಯಾಜಲ್ವುಡ್, ಸುಯಾಶ್ ಶರ್ಮಾ ಮತ್ತು ರೊಮಾರಿಯೊ ಶೆಫರ್ಡ್ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಇದರ ನಂತರ, ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಅವರ ಅರ್ಧಶತಕಗಳಿಂದಾಗಿ ಆರ್ಸಿಬಿ 223 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 73 ರನ್ ಗಳಿಸಿದರೆ, ವಿರಾಟ್ 58 ರನ್ ಗಳಿಸಿ ತಂಡಕ್ಕೆ ಕಾಣಿಕೆ ನೀಡಿದ್ದರು.
ಪಂದ್ಯದ ನಂತರ ಮಾತನಾಡಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರು, ಉತ್ತಮವಾಗಿ ಆರಂಭಿಸಿದರೂ ಪವರ್ಪ್ಲೇ ನಂತರ ಬೌಲಿಂಗ್ ದಾಳಿ ಮಾಡಿದರು. 222 ರನ್ಗಳನ್ನು ತಲುಪಿದ್ದು ಶ್ಲಾಘನೀಯ ಸಾಧನೆ. ನಾವು ಪವರ್ಪ್ಲೇನಲ್ಲೇ ಪಂದ್ಯವನ್ನು ಸೋತಿದ್ದೇವೆ. ಪವರ್ಪ್ಲೇನಲ್ಲಿ ನಾವು 3 ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ರನ್ ಗಳಿಸುವವರು ಪೆವಿಲಿಯನ್ಗೆ ಮರಳಿದ್ದರು. ಇದು ತುಂಬಾ ನಿರಾಶಾದಾಯಕವಾಗಿದೆ. ಶಶಾಂಕ್ ಮತ್ತು ಸ್ಟೊಯಿನಿಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ನಾವು ಪ್ರತಿ ಓವರ್ಗೆ 10 ರನ್ಗಳನ್ನು ಕಲೆ ಹಾಕಬೇಕಿತ್ತು. ಆದರೆ ಹ್ಯಾಜಲ್ವುಡ್ ಮತ್ತು ಭುವಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಆದ್ದರಿಂದ ನಾವು ಗೆಲ್ಲಲು ಸಾಧ್ಯವಾಗಲಿಲ್ಲ. ಫಲಿತಾಂಶ ಏನೇ ಬಂದರೂ ನಾನು ಯಾವಾಗಲೂ ಸಕಾರಾತ್ಮಕವಾಗಿರುತ್ತೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿದರು.