ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಉಗ್ರರ ದಾಳಿ ಬೆದರಿಕೆ; ಸರಣಿ ರದ್ದಾಗುವ ಸಾಧ್ಯತೆ

ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಶ್ರೀಲಂಕಾದ ಪ್ರಧಾನ ಮಂತ್ರಿ ಕಚೇರಿ ತನ್ನ ಕ್ರಿಕೆಟ್ ಮಂಡಳಿಗೆ (ಎಸ್‌ಎಲ್‌ಸಿ) ಸಲಹೆ ನೀಡಿದೆ.

Last Updated : Sep 12, 2019, 11:26 AM IST
ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಉಗ್ರರ ದಾಳಿ ಬೆದರಿಕೆ; ಸರಣಿ ರದ್ದಾಗುವ ಸಾಧ್ಯತೆ title=
ಫೋಟೋ ಕೃಪೆ: IANS

ಕೊಲಂಬೊ: ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಇದೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಶ್ರೀಲಂಕಾ ಮತ್ತು ಪಾಕಿಸ್ತಾನದ ಮುಂಬರುವ ಕ್ರಿಕೆಟ್ ಸರಣಿ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ಸೆಪ್ಟೆಂಬರ್ 27 ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಕದಿನ ಮತ್ತು ಟಿ 20 ಸರಣಿಯನ್ನು ಪ್ರಸ್ತಾಪಿಸಲಾಗಿದೆ. ವಿವಾದಗಳ ಮಧ್ಯೆ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಸರಣಿಗೆ ತಂಡವನ್ನು ಘೋಷಿಸಿದೆ. ಆದಾಗ್ಯೂ,  ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಹಿನ್ನಲೆಯಲ್ಲಿ ಇದನ್ನು ಮರುಪರಿಶೀಲಿಸುವುದಾಗಿ ಶ್ರೀಲಂಕಾ ಹೇಳಿದೆ.

ಮುಂಬರುವ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ತನ್ನ ರಾಷ್ಟ್ರೀಯ ತಂಡವು ಭಯೋತ್ಪಾದಕ ದಾಳಿಯ ಗುರಿಯಾಗಬಹುದು ಎಂಬ ಎಚ್ಚರಿಕೆ ಬಂದಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಬುಧವಾರ ತಿಳಿಸಿದೆ. 'ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಲು' ಪ್ರಧಾನ ಮಂತ್ರಿ ಕಚೇರಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಲಹೆ ನೀಡಿದೆ. ಪಾಕಿಸ್ತಾನ ಪ್ರವಾಸದಲ್ಲಿ ಶ್ರೀಲಂಕಾ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ. ಈ ಪ್ರವಾಸದ ಮೊದಲು, ರಾಷ್ಟ್ರೀಯ ತಂಡದ ವಿರುದ್ಧದ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಬಂದಿದೆ ಎಂದು ಹೇಳಲಾಗಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಇನ್ನೂ ಪ್ರವಾಸವನ್ನು ರದ್ದುಗೊಳಿಸಿಲ್ಲ. ಭದ್ರತಾ ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರದೊಂದಿಗೆ ಮರು ಮೌಲ್ಯಮಾಪನ ಮಾಡಲಾಗುವುದು ಅದು ತಿಳಿಸಿದೆ. ಪಾಕಿಸ್ತಾನದಲ್ಲಿ ಮಾತ್ರ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಮಾರ್ಚ್ 2009 ರಲ್ಲಿ ನಡೆದ ಲಾಹೋರ್ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ತಂಡ ಭಯೋತ್ಪಾದಕ ದಾಳಿಗೆ ಬಲಿಯಾಯಿತು. ಶ್ರೀಲಂಕಾ ತಂಡದ ಬಸ್‌ಗೆ ಭಯೋತ್ಪಾದಕರು ಗುಂಡು ಹಾರಿಸಿದ್ದರು, ಈ ಸಂದರ್ಭದಲ್ಲಿ ತಂಡದ ಆರು ಆಟಗಾರರು ಗಾಯಗೊಂಡಿದ್ದಾರೆ.

ಶ್ರೀಲಂಕಾದ ಹಿರಿಯ ಆಟಗಾರರು ಭದ್ರತಾ ಕಾರಣಗಳಿಂದ ಮುಂಬರುವ ಪಾಕಿಸ್ತಾನ ಪ್ರವಾಸದಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಮುಂಬರುವ ಪಾಕಿಸ್ತಾನ ಪ್ರವಾಸಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಏಕದಿನ ಮತ್ತು ಟಿ 20 ತಂಡಗಳನ್ನು ಬುಧವಾರ ಪ್ರಕಟಿಸಿದೆ. ಈ ಪ್ರಕಟಣೆಯ ಕೆಲ ಸಮಯದ ನಂತರ, ಅವರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಪ್ರವಾಸದಿಂದ ಹಿಂದೆ ಸರಿದ 10 ಆಟಗಾರರು: 
ಇದಕ್ಕೂ ಮುನ್ನ ಶ್ರೀಲಂಕಾದ 10 ಹಿರಿಯ ಆಟಗಾರರು ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದ್ದರು. ಇವರಲ್ಲಿ ದಿಮುತ್ ಕರುಣರತ್ನೆ, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಂಡಿಮಾಲ್, ಸುರಂಗ ಲಕ್ಮಲ್, ಥಿಸರಾ ಪೆರೆರಾ, ಅಕಿಲಾ ಧನಂಜಯ, ಧನಂಜಯ್ ಡಿಸಿಲ್ವಾ, ಕುಸಲ್ ಪೆರೆರಾ ಮತ್ತು ನಿರೋಷನ್ ದಿಕ್ವೆಲಾ ಸೇರಿದ್ದಾರೆ. ದಿಮುತ್ ಕರುಣರತ್ನ ಶ್ರೀಲಂಕಾ ತಂಡದ ನಿಯಮಿತ ನಾಯಕ. ಅವರ ಅನುಪಸ್ಥಿತಿಯಿಂದಾಗಿ ಏಕದಿನ ಮತ್ತು ಟಿ 20 ತಂಡ ನಾಯಕತ್ವವನ್ನು ಇತರ ಆಟಗಾರರಿಗೆ ಹಸ್ತಾಂತರಿಸಲಾಗಿದೆ.

ಶ್ರೀಲಂಕಾ ಏಕದಿನ ತಂಡ: ಲಹಿರು ತಿರಿಮನೆ (ಕ್ಯಾಪ್ಟನ್), ದಾನುಷ್ಕಾ ಗುಣತಿಲಕ, ಸದಿರಾ ಸಮರವಿಕ್ರಮ, ಅವಿಷ್ಕಾ ಫರ್ನಾಂಡೊ, ಓಷಾದಾ ಫರ್ನಾಂಡೊ, ಶೆಹನ್ ಜಯಸೂರ್ಯ, ಮಿನೋಡ್ ಬಾನುಕಾ, ಏಂಜೆಲೊ ಪೆರೆರಾ, ವನಿಂದು ಹಸ್ರಂಗಾ, ಲಕ್ಷನ್ ಸಂದಕನ್, ನುವಾನ್ ಉದೀಮಾ.

ಶ್ರೀಲಂಕಾದ ಟಿ 20 ತಂಡ: ದಾಸುನ್ ಶಾನಕಾ (ನಾಯಕ), ದಾನುಷ್ಕಾ ಗುಣತಿಲಕ, ಸದಿರಾ ಸಮರವಿಕ್ರಮ, ಅವಿಷ್ಕಾ ಫರ್ನಾಂಡೊ, ಓಷಾದಾ ಫರ್ನಾಂಡೊ, ಶೆಹನ್ ಜಯಸೂರ್ಯ, ಏಂಜೆಲೊ ಪೆರೆರಾ, ಭನುಕಾ ರಾಜಪಕ್ಸೆ, ಮಿನೋಡ್ ಬಾನುಕಾ, ಲಹಿರು ಮಧುಶಾಂಕಾ, ವನಿಪುನ್ ನವಾನ್ವಾನ್, ಕಸುನ್ ರಜಿತಾ, ಲಹಿರು ಕುಮಾರ.

Trending News