Sunil Gavaskar: ಪಾಕ್ ವಿರುದ್ಧ ಗೆದ್ದರೂ ರೋಹಿತ್-ಕೊಹ್ಲಿ ಮೇಲೆ ಗರಂ ಆದ ಗವಾಸ್ಕರ್!

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಆರಂಭವನ್ನು ಪಡೆದಿದ್ದಾರೆ, ಆದ್ದರಿಂದ ಅವರು ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಕೊಹ್ಲಿ ಕನಿಷ್ಠ 60 ರಿಂದ 70 ರನ್ ಗಳಿಸಬೇಕಾಗಿತ್ತು,

Written by - Bhavishya Shetty | Last Updated : Aug 30, 2022, 11:43 AM IST
    • ಭಾರತ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದರೂ ಸಹ ಕೋಪಗೊಂಡ ಗವಾಸ್ಕರ್
    • ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಗರಂ ಆಗಲು ಬ್ಯಾಟ್ಸ್ ಮನ್ ಗಳ ಆಟ ಕಾರಣ
    • ರೋಹಿತ್-ಕೊಹ್ಲಿ ಮೇಲೆ ಕೋಪಗೊಂಡ ಟೀಂ ಇಂಡಿಯಾದ ಲೆಜೆಂಡ್ ಆಟಗಾರ
Sunil Gavaskar:  ಪಾಕ್ ವಿರುದ್ಧ ಗೆದ್ದರೂ ರೋಹಿತ್-ಕೊಹ್ಲಿ ಮೇಲೆ ಗರಂ ಆದ ಗವಾಸ್ಕರ್! title=
Sunil Gavaskar

ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು. ಟೀಂ ಇಂಡಿಯಾದಿಂದ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅದ್ಭುತ ಆಟ ಪ್ರದರ್ಶಿಸಿದರು. ಆದರೆ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಗರಂ ಆಗಿ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಈ ದಿನಾಂಕಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು, ನೀವು ಎಷ್ಟು Lucky ಇಲ್ಲಿ ತಿಳಿಯಿರಿ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಆರಂಭವನ್ನು ಪಡೆದಿದ್ದಾರೆ, ಆದ್ದರಿಂದ ಅವರು ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಕೊಹ್ಲಿ ಕನಿಷ್ಠ 60 ರಿಂದ 70 ರನ್ ಗಳಿಸಬೇಕಾಗಿತ್ತು, ಆದರೆ ಅವರು ತಪ್ಪಾಗಿ ಬ್ಯಾಟಿಂಗ್ ಮಾಡಿದ ಪರಿಣಾಮ ಔಟಾದರು. ಆ ಸಮಯದಲ್ಲಿ ನೀವು ಸಿಕ್ಸರ್ ಬಾರಿಸುವ ಅಗತ್ಯವಿರಲಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ಕೆಎಲ್ ರಾಹುಲ್ ಕೇವಲ ಒಂದು ಬಾಲ್ ನ್ನು ಎದುರಿಸಿದ್ದಾರೆ, ಆದ್ದರಿಂದ ಅವರನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದರು. ಆದರೆ ರೋಹಿತ್ ಶರ್ಮಾಗೆ ದೊಡ್ಡ ಇನ್ನಿಂಗ್ಸ್ ಆಡುವ ಅವಕಾಶ ಸಿಕ್ಕಿತ್ತು. ರೋಹಿತ್‌ಗೆ ಅದೃಷ್ಟ ಬೇಕು. ಕೊಹ್ಲಿ ಕೂಡ ಹಲವು ಕ್ಯಾಚ್‌ಗಳನ್ನು ಮಿಸ್ ಮಾಡಿಕೊಂಡಿದ್ದರು. ಚೆಂಡು ಬ್ಯಾಟ್‌ನ ಒಳ ಅಂಚಿಗೆ ಬಡಿದು ಫೀಲ್ಡರ್‌ನ ಹಿಂದೆಯಿಂದ ಹೋಗಿದೆ. ಕೊಹ್ಲಿ ಮತ್ತು ರೋಹಿತ್ ಸ್ವಲ್ಪ ಸಮಯ ವಿಕೆಟ್‌ನಲ್ಲಿ ಉಳಿಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: 100kmplಗಿಂತ ಹೆಚ್ಚು ಮೈಲೇಜ್ ನೀಡುತ್ತೆ ಈ ಸ್ಕೂಟರ್: ಬೆಲೆ ಇಷ್ಟೊಂದು ಕಡಿಮೆಯೇ!

ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟ ಪ್ರದರ್ಶಿಸಿದರು. ಭಾರತವನ್ನು ಗೆಲ್ಲಲು ಪಾಕಿಸ್ತಾನ 148 ರನ್‌ಗಳ ಗುರಿಯನ್ನು ನೀಡಿತು, ಅದನ್ನು ಭಾರತ 5 ವಿಕೆಟ್ ಕಳೆದುಕೊಂಡು ಸಾಧಿಸಿತು. ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು. ಇದೇ ವೇಳೆ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದು ಒಂದು ವಿಕೆಟ್ ಅವೇಶ್ ಖಾನ್ ಖಾತೆಗೆ ಹೋಯಿತು. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 35-35 ರನ್ ಗಳಿಸಿದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News