Shri Ram Jai Hanuman Poster: ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಲಿರುವ "ಶ್ರೀ ರಾಮ್, ಜೈ ಹನುಮಾನ್" ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Dhruva Sarja: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಂದು ಧ್ರುವ ಸರ್ಜಾ ದಂಪತಿ ತಮ್ಮ ಮಕ್ಕಳ ನಾಮಕರಣವನ್ನು ಮಾಡಲು ನಿರ್ಧಾರ ಮಾಡಿದ್ದಾರೆ. ಈ ಕಾರ್ಯಕ್ರಮ ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಯೋಧ್ಯೆ ಶ್ರೀರಾಮನಿಗಿಂದು ಪ್ರಾಣಪ್ರತಿಷ್ಠಾಪನೆ ಕೌಂಟ್ಡೌನ್
1100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಂದಿರ ಉದ್ಘಾಟನೆ
ಮ12.30ರ ಮುಹೂರ್ತದಲ್ಲಿ ಬಾಲರಾಮ ಮೂರ್ತಿಗೆ ಪ್ರಾಣಪ್ರತಿಷ್ಠೆ
ರಾಮನ ವಿಗ್ರಹಕ್ಕೆ ವೇದಾಗಮ ಪಂಡಿತರಿಂದ ಪೂಜೆ ಕೈಂಕರ್ಯಗಳು
ಮಧ್ಯಾಹ್ನ 3.30ರ ವೇಳೆಗೆ ಎಲ್ಲ ಕಾರ್ಯಕ್ರಮಗಳು ಮುಕ್ತಾಯ
ಐದು ಶತಮಾನಗಳ ಕೋಟಿ ಕೋಟಿ ರಾಮ ಭಕ್ತರ ಅಪೂರ್ವ ಕ್ಷಣ
ಅಯೋಧ್ಯೆಯಲ್ಲಿಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ಶ್ರೀ ರಾಮನ ತವರಿನಲ್ಲಿ ಮತ್ತೆ ಮರುಕಳಿಸುತ್ತಿದೆ ʻರಾಮಯುಗʼ
ಮನೆ ಮನೆಯಲ್ಲೂ ಸಂಭ್ರಮ.. ದೇಶದೆಲ್ಲೆಡೆ ಹಬ್ಬದ ವಾತಾವರಣ
ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತರ
ಅಯೋಧೈಯಲ್ಲಿ ಭವ್ಯವಾದರಾಮಮಂದಿರ ಕಾಣುವ ಕೋಟ್ಯಂತರ ಭಕ್ತರ ನೂರಾರು ವರ್ಷಗಳ ತಪಸ್ಸು ಕೊನೆಗೂ ಫಲಕೊಡುವ ಸಮಯ ಸನ್ನಿಹಿತವಾಗಿದೆ. ಸುಪ್ರೀಂಕೋರ್ಟ್ ಅನು ಮತಿ ಮತ್ತು ಕೋಟ್ಯಂತರ ಭಾರತೀಯರ ತನು ಮನ ಧನದಿಂದ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ವೈಭವೋಪೇತ ಸಮಾರಂಭದಲ್ಲಿ ಜರುಗಲಿದೆ.
ರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ
ರಾಮನಗರಿಗೆ ಹರಿದು ಬಂತು ಗಣ್ಯಾತಿಗಣ್ಯರ ದಂಡು
ರಾಜಕೀಯ ಗಣ್ಯರು, ತಾರೆಯರು, ಸಾಧು ಸಂತರು,
ಸ್ವಾಮೀಜಿಗಳು ಸೇರಿ ಗಣ್ಯಾತಿ ಗಣ್ಯರು ಆಗಮನ
ಏಳು ಸುತ್ತಿನ ಕೋಟೆಯಾಗಿ ಬದಲಾದ ಅಯೋಧ್ಯಾ
Nikhil Kumarswamy: ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಆಮಂತ್ರಣ ಪತ್ರ ನೀಡಲಾಗಿದ್ದು, ಇದರ ಅಂಗವಾಗಿ ನಿಖಿಲ್ ಕುಮಾರ್ ತಾತಾ, ಅಜ್ಜಿ ಹಾಗೂ ತಂದೆಯ ಜೊತೆ ಅಯೋಧ್ಯೆಗೆ ಪಯಣ ಬೆಳೆಸಿದ್ದಾರೆ.
Hanumangarhi Temple : ಹನುಮಾನ್ಗರ್ಹಿ ದೇವಸ್ಥಾನವು ಹನುಮಂತನಿಗೆ ಸಮರ್ಪಿತವಾಗಿದೆ. ಶ್ರೀರಾಮನ ಭಕ್ತನಾದ ಆಂಜನೇಯಸ್ವಾಮಿಯ ದೇಗುಲವಾದ ಅಯೋಧ್ಯೆಯಲ್ಲಿ ಹನುಮಂತನಗರಿಗೆ ವಿಶೇಷ ಮಹತ್ವವಿದೆ. ಇದನ್ನು ಅಯೋಧ್ಯೆಯ ಹತ್ತು ಪ್ರಮುಖ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇವಾಲಯವನ್ನು ಅಯೋಧ್ಯಾ ನಗರದ ಹೃದಯಭಾಗದಲ್ಲಿ ನಿರ್ಮಿಸಲಾಗಿದೆ. ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡದೆ ರಾಮ್ ಲಲ್ಲಾಗೆ ಭೇಟಿ ನೀಡುವುದು ಅಪೂರ್ಣ ಎಂದು ನಂಬಲಾಗಿದೆ.
Kangana Ranaut: ಬಾಲಿವುಡ್ ನಟಿ ಕಂಗನಾ ರನೌತ್ ನಿನ್ನೆ ಅಯೋಧ್ಯೆ ತಲುಪಿ ಅಲ್ಲಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ, ರಾಮ ಮಂದಿರದಲ್ಲಿ ರೇಷ್ಮನೆ ಸೀರೆಯಲ್ಲಿ ಸನ್ಗ್ಲಾಸ್ ಧರಿಸಿ ಪೊರಕೆ ಹಿಡಿದು ನೆಲ ಸ್ವಚ್ಚಗೊಳಿಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Ayodhya,Ram Mandir: ರಾಮಲಾಲಾ ಪ್ರಾಣಪ್ರತಿಷ್ಠೆಗೆ 7,000 ಜನರನ್ನು ಆಹ್ವಾನಿಸಲಾಯಿತು. ಅತಿಥಿಗಳಲ್ಲಿ 4 ಸಾವಿರ ಸ್ವಾಮೀಜಿಗಳು ಮತ್ತು 50 ವಿದೇಶಿಗರು ಇದ್ದರು. ವಿಐಪಿಗಳ ಆಗಮನದಿಂದ ನೂರಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳು, 12 ಸಾವಿರ ಪೊಲೀಸರು, 10 ಸಾವಿರ ಸಿಸಿ ಕ್ಯಾಮೆರಾಗಳು ಮತ್ತು ಎಐ ಅನ್ನು ಬಲವಾದ ಕಣ್ಗಾವಲು ಸ್ಥಾಪಿಸಲಾಗಿದೆ.
Ayodhya Ram Mandir Free Prasad: ಕೋಟ್ಯಾಂತರ ಹಿಂದೂ ಜನರ ಬಹಳ ವರ್ಷಗಳ ಕನಸು ಇಂದು ನನಸಾಗುತ್ತಿದೆ. ಇಂದು ಅಂದರೆ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಾಲ ಪ್ರತಿಷ್ಠಾಪನೆ ನಡೆಯಲಿದೆ. ನೀವು ಕುಳಿತಿರುವಲ್ಲಿಯೇ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಪೂಜೆಯ ಪ್ರಸಾದವನ್ನು ಆರ್ಡರ್ ಮಾಡಬಹುದು.
ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನಟ ಅರ್ಜುನ್ ಸರ್ಜಾ ಮತ್ತು ಅವರ ಮಗಳು ಐಶ್ವರ್ಯಾ ಸರ್ಜಾ ಭೇಟಿ ಮಾಡಿದರು. ಈ ವೇಳೆ ಮೋದಿಯವರಿಗೆ ನಟ ಅಂಜನಾಸುತ ಶ್ರೀ ಯೋಗಾಂಜನೇಯ ಮಂದಿರಂ ದೇವಸ್ಥಾನದ ಭಾವಚಿತ್ರವನ್ನು ಉಡುಗೂರೆಯಾಗಿ ನೀಡಿದರು.
Ayodhya Flight Ticket Rate: ಇತರ ದಿನಗಳಿಗಿಂತ ಜನವರಿ 20 ರಿಂದ ಅಯೋಧ್ಯೆಗೆ ಟಿಕೆಟ್ ದರಗಳು ಹೆಚ್ಚಿವೆ. ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ ಅನೇಕ ಜನರು ಅಯೋಧ್ಯೆಗೆ ತಲುಪುವ ಸಾಧ್ಯತೆಯಿರುವುದರಿಂದ ವಿಮಾನ ಟಿಕೆಟ್ ದರದ ಬಿಸಿ ಹೆಚ್ಚಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.