ಒಟ್ಟಾರೆ ಸ್ವಲ್ಪ ದಿನಗಳಿಂದ ಯಾವುದೇ ಕೇಸ್ ಅನ್ನದೆ ಬಹಳ ಕೂಲಾಗಿದ್ದ ಡಿಸಿಎಂ ಗೆ ಇದೀಗ ನ್ಯಾಷನಲ್ ಹೆರಾಲ್ಡ್ ಪ್ರಕರಣ ತೊಂದರೆ ನೀಡುವ ಸೂಚನೆ ನೀಡಿದೆ.ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಗದ್ದುಗೆ ಏರುವ ಸಂದರ್ಭದಲ್ಲಿ ಈ ಪ್ರಕರಣ ಮತ್ತೆ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಸಾಕ್ಷಿಯಾಗಿದೆ..
ಸಿಎಂ - ಡಿಸಿಎಂ ಉಪಹಾರ ಕೂಟ ಸೇರಿದ ಬಳಿಕ ಸದ್ದಿಲ್ಲವೇ ಬೆಳವಣಿಗೆ ಗಳು ಶುರುವಾಗಿವೆ.ಸಿಎಂ ಆಪ್ತರ ವಿಶ್ವಾಸಗಳಿಸುವ ಪ್ರಯತ್ನಕ್ಕೆ ಡಿಕೆಶಿ ಕೈ ಹಾಕಿದ್ರು. ಸಿಎಂ ಪರಮಾಪ್ತ ಸತೀಶ್ ಜಾರಕಿಹೊಳಿ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ.ಇತ್ತ ಸಿಎಂ ಪರವಾಗಿ ಹರಿಪ್ರಸಾದ್ ಹೈಕಮಾಂಡ್ ಲೆವೆಲ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಪರಮೇಶ್ವರ್ ತಮ್ಮದೇ ಆದ ಬಣದ ಮೂಲಕ ದಲಿತ ಸಿಎಂ ದಾಳ ಉರುಳಿಸ್ತಿದ್ದಾರೆ.
ಜಾತಿ,ಧರ್ಮ, ಭಾಷೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಧ್ವೇಷ ಭಾವನೆ ಬಿತ್ತುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಹೊರಟಿದೆ.ಹೇಟ್ ಸ್ಪೀಚ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅದಕ್ಕಾಗಿಯೇ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನ ಜಾರಿಗೆ ತರಲು ಮುಂದಾಗಿದೆ.ಇಂದು ನಡೆದ ಕ್ಯಾಬಿನೆಟ್ ಸಭೆ ಯಲ್ಲಿ ಆ ವಿಧೇಯಕ್ಕೆ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರಕ್ಕೆ ಎರೂಡುವರೆ ವರ್ಷ ಪೂರೈಸ್ತಿರೋದು ಒಂದು ಕಡೆಯಾದ್ರೆ, ಸಿಎಂ ಮತ್ತು ಡಿಸಿಎಂ ಡಿಕೆಶಿ ನಡುವಿನ ಕಿತ್ತಾಟ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಇದರ ನಡುವೆ ಸರ್ಕಾರ ಚಳಿಗಾಲದ ಅಧಿವೇಶನಕ್ಕೆ ರೆಡಿಯಾಗ್ತಿದೆ. ಡಿಸೆಂಬರ್ 8ರಿಂದ ಆರಂಭ ವಾಗುವ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಇಂದು ಸಚಿವರ ಜೊತೆಗೆ ಸಭೆ ನಡೆಸಿ, ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸನ್ನದ್ಧರಾಗುವಂತೆ ಸಲಹೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಪಟ್ಟಕ್ಕಾಗಿ ಕದನ ವಿರಾಮ ಆಗ್ತಿದ್ದಂತೆ ಇಂದು ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಇದೇ ಬೆನ್ನಲ್ಲೇ ಇಡೀ ದಿನ ರಾಜಕೀಯ ಬೆಳವಣಿಗೆ ನಡೀತು. ಏನೇನೆಲ್ಲಾ ನಡೀತು? ಇಲ್ಲಿದೆ ಫುಲ್ ಡಿಟೈಲ್ಸ್..
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಸಿಎಂ ಕುರ್ಚಿ ಕದನಕ್ಕೆ ವಿರಾಮ ಹೇಳಿ, ಒಂದಾಗಿ ಹೋಗುತ್ತೇವೆ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ತಂತ್ರಗಾರಿಕೆ ಮೇಲೆ ತಂತ್ರಗಾರಿ ಮಾಡುತ್ತಲೇ ಇದ್ದಾರೆ. ಸದ್ಯ ಹೈಕಮಾಂಡ್ ಬುಲಾವ್ ಗೆ ಕಾಯುತ್ತಿರೋ ಡಿಕೆಗೆ ತನ್ನ ಸಮುದಾಯ ಸಹ ಇದೀಗ ಬೆನ್ನಿಗೆ ನಿಂತಿದ್ದು ಸಾಕಷ್ಟು ಶಕ್ತಿ ಬಂದಿದೆ. ನಿನ್ನೆ ನಿರ್ಮಲಾನಂದ ಶ್ರೀ, ಇಂದು ನಂಜಾವಧೂತ ಶ್ರೀ ಬ್ಯಾಟಿಂಗ್
ಸಿಎಮ್ ಡಿಸಿಮ್ ಬಣ ರಾಜಕಾರಣ ಹಾಗು ಸ್ವಯಂಪ್ರತಿಷ್ಠೆಯಿಂದ ದೂರವಾಗಿದ್ದಾರೆ.ಬೆಂಗಳೂರು ಅಭಿವೃದ್ದಿಯಲ್ಲಿ ಸಿಎಮ್-ಡಿಸಿಎಮ್ ಜುಗಲ್ ಬಂಧೀ ವರ್ಕ್ ಔಟ್ ಆಗ್ತಾ ಇಲ್ಲ.ಡಿಕೆಶಿ ಹಾಗು ಸಿದ್ದರಾಮಯ್ಯ ನಡುವೆ ಕೋ ಆರ್ಡಿನೇಷನ್ ಕೊರತೆ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಸಿಎಂ ಕುರ್ಚಿ ಜಟಾಪಟಿ ಜೋರಾಗಿದ್ದು.., ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣ ಅಧಿಕಾರ ಹಸ್ತಾಂತರ ಮಾಡ್ಬಾರದು ಎಂದು ಒತ್ತಾಯಿಸಿ ಇಂದುಬಕುರುಬ ಸಮುದಾಯದ ಮುಖಂಡರು ಸಭೆ ನಡೆಸಿದ್ರು.ಹಾಗಾದ್ರೆ ಈ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಅನ್ನೋದರ ವರದಿ ಇಲ್ಲಿದೆ.
ಸಿಎಂ ಸ್ಥಾನದ ಮೇಲೆ ಕಣ್ಣು ಇಟ್ಟಿರುವ ಡಿಕೆ ಶಿವಕುಮಾರ್ ಮೊದಲು ಹಿರಿಯ ನಾಯಕರ ಸಹಾಯ ಪಡೆಯಲು ಮುಂದಾಗಿದ್ದಾರೆ.ಹೀಗಾಗಿ ಕೆಲ ಪ್ರಮುಖ ನಾಯಕರನ್ನು ಭೇಟಿ ಮಾಡಿ ನನ್ನ ಪರ ಕೈಎತ್ತುವಂತೆಯೂ ಸಹ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಜೆಡಿಎಸ್ಗೆ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆಯನ್ನು ಜೆ.ಪಿ. ಭವನದಲ್ಲಿ ಮಾಜಿ ಪ್ರಧಾನಿಗಳು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದೇವೇಗೌಡ ಅವರು ಹಾಗೂ ಕೇಂದ್ರ ಸಚಿವರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಮೈಸೂರು ರಾಜ್ಯದ ಅವಧಿಯೂ ಸೇರಿದಂತೆ ಮರುನಾಮಕರಣಗೊಂಡ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ದೇವರಾಜ ಅರಸು ಅವರು ಎರಡು ಅವಧಿಗೆ 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದರು.ಈಗ ಈ ದಾಖಲೆಯನ್ನು ಮುರಿಯುವ ಅವಕಾಶ ಸಿಎಂ ಸಿದ್ದರಾಮಯ್ಯನವರಿಗೆ ಬಂದಿದೆ.
ಸಾಲು ಮರದ ತಿಮ್ಮಕ್ಕ ಅವರು ಬಹಳಷ್ಟು ಮರಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಪ್ರತಿಯೊಬ್ಬರೂ ಸಾಲಮರದ ತಿಮ್ಮಕ್ಕನವರಂತೆ ಆಗಬೇಕು ಎನ್ನುವ ಆಶಯ ನಮ್ಮದು
ಬಿಹಾರ ವಿಧಾನ ಸಭೆ ಚುನಾವಣೆ ಫಲಿತಾಂಶ ಇಂಡಿಯಾ ಮೈತ್ರಿಕೂಟಕ್ಕೆ ಆಘತವನ್ನುಂಟು ಮಾಡಿದೆ. ನಿತೀಶ್ಕುಮಾರ್ ಅವರ ಸುದೀರ್ಘ ಅಧಿಕಾರ, ಆಡಳಿತ ವಿರೋಧಿ ಅಲೆ ಸೃಷ್ಟಿ ಈ ಬಾರಿ ಬದಲಾವಣೆ ಆಗಬಹುದು ಎಂದು ಬಹುಸಂಖ್ಯಾತ ವಿಶ್ಲೇಷಕರು ವಿಮರ್ಶೆ ಮಾಡಿದ್ದುಂಟು. ಆದರೆ ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರವೇ ಬೇರೆಯದ್ದೇ ಆಗಿತ್ತು. ಅದರಂತೆ ಇಂದು ನಡೆದ ಮತ ಎಣಿಕೆಯಲ್ಲಿ ಎನ್ಡಿಎ ಪೂರ್ಣ ಬಹುಮತದೊಂದಿಗೆ ಬಿಹಾರದಲ್ಲಿ ಮತ್ತೆ ನಿತೀಶ್ಕುಮಾರ್ಗೆ ಮತದಾರ ಪ್ರಭು ಜೈ ಎಂದಿದ್ದಾನೆ. ಇನ್ನೂ ಬಿಹಾರದ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರನ್ನು ಪುಲ್ ಸೈಲೆಂಟ್ ಆಗುವಂತೆ ಮಾಡಿದೆ.
ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ವನ್ಯಜೀವಿಗಳ ಸಂಖ್ಯೆ ಕಡಿಮೆ ಇದ್ದರೂ ಜೀವಹಾನಿಯ ಸಂಖ್ಯೆ ಅಧಿಕವಾಗಿದೆ ಎಂದು ಸಭೆಗೆ ವಿವರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.