ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು ಐದನೇ ದಿನಕ್ಕೆಕಾಲಿಟ್ಟಿತ್ತು.ಕಲಾಪದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಕೊಟ್ಟಿಲ್ಲವೆಂದು ಬಿಜೆಪಿಯ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ರು.
ಹೈಕಮಾಂಡ್ ಏನ್ ಗೆರೆ ಹಾಕಿದ್ರೆ, ಆ ಗೆರೆಯನ್ನ ನಾವು ದಾಟಲ್ಲ ಅಂತ ಮತ್ತೆ ಸ್ಪಷ್ಟನೆ ನೀಡಿದ್ದಾರೆ ಸಚಿವ ಜಮೀರ್ ಅಹಮ್ಮದ್ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ.ನಾವಾಗಲಿ ಯತೀಂದ್ರ ಅವರಾಗಲಿ ಬದಲಾವಣೆ ಮಾಡೋಕೆ ಆಗಲ್ಲ,
ರಾಜ್ಯ ಕಾಂಗ್ರೆಸ್ ವಲಯದಲ್ಲಿ ಸಿಎಂ ಪವರ್ ಶೇರಿಂಗ್ ವಿಚಾರಕ್ಕೆ ಫುಲ್ ಸ್ಟಾಪ್ ಬೀಳೊಲ್ಲಾ ಅನ್ನೋದು ಸ್ಪಷ್ಟವಾಗಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ತಂದೆ ಪರವಾಗಿ ನಿಂತಿದ್ದು ಐದು ವರ್ಷಗಳ ಕಾಲ ಅವರೇ ಸಿಎಂ ಆಗಿರ್ತಾರೆ ಎಂದು ಹೇಳಿದ್ದು ಮತ್ತೆ ಕಿಚ್ಚು ಹಚ್ಚಿದಂತಾಗಿದೆ. ಇನ್ನೂ ಈ ಹೇಳಿಕೆ ಕೊಟ್ಟ ಬಳಿಕ ಡಿಸಿಎಂ ಬಣದಲ್ಲಿ ಗುರುತಿಸಿಕೊಂಡಿರುವವರು ಮಾಡಿದ ಆ ಪೋಸ್ಟ್ ಮತ್ತೆ ಬಣ ಬಡಿದಾಟಕ್ಕೆ ವೇದಿಕೆ ಮಾಡಿಕೊಟ್ಟಿದೆ.
Royal Challengers Bengaluru : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬೆಂಗಳೂರು ಯಾವಾಗಲೂ ಪ್ರಮುಖ ಕ್ರಿಕೆಟ್ ಕೇಂದ್ರವಾಗಿರಬೇಕು ಮತ್ತು ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲಿಂದ ಎಲ್ಲಿಯೂ ಹೋಗುವುದಿಲ್ಲ ಎಂದು ಭರವಸೆ ನೀಡಿದರು.. ಇದೀಗ ಡಿಸಿಎಂ ಅವರ ಈ ಮಾತುಗಳು RCB ಅಭಿಮಾನಿಗಳಿಗೆ ಸಂತಸ ತಂದಿದೆ.
ಸಿಎಂ ಸಿದ್ದರಾಮಯ್ಯ ಎದುರಾಗಿದ್ದ ಹ್ಯೂಬ್ಲೋಟ್ ವಾಚ್ ಸಂಕಷ್ಟ ಇದೀಗ ಡಿಸಿಎಂ ಡಿಕೆಶಿಗೆ ಎದುರಾಗಿದೆ.. ಇದೇ ಹ್ಯೂಬ್ಲೋಟ್ ವಾಚ್ ಪ್ರಕರಣ ಅಂದು ಸಿದ್ದರಾಮಯ್ಯನವರ ಇಮೇಜನ್ನೇ ಡ್ಯಾಮೇಜ್ ಮಾಡಿತ್ತು.. ಇದರ ಸಹವಾಸವೇ ಬೇಡ ಅಂತ ವಾಚನ್ನೇ ಬಿಚ್ಚಿಕೊಟ್ಟಿದ್ರು.. ಇದೀಗ ಡಿಕೆಶಿಗೆ ತನ್ನ ಸ್ವಂತ ಹಣದಲ್ಲಿ ತೆಗೆದುಕೊಂಡ ವಾಚ್ ಕೂಡ ಕಷ್ಟಕ್ಕೆ ಗುರಿಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸದನದೊಳಗೆ ವರಾತ ಶುರುವಚ್ಚಿಕೊಳ್ಳಲು ಹೊರಟಿದ್ದಾರೆ.. ಏನು ಎತ್ತ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಸಿಎಂ - ಡಿಸಿಎಂ ಉಪಹಾರ ಕೂಟ ಸೇರಿದ ಬಳಿಕ ಸದ್ದಿಲ್ಲವೇ ಬೆಳವಣಿಗೆ ಗಳು ಶುರುವಾಗಿವೆ.ಸಿಎಂ ಆಪ್ತರ ವಿಶ್ವಾಸಗಳಿಸುವ ಪ್ರಯತ್ನಕ್ಕೆ ಡಿಕೆಶಿ ಕೈ ಹಾಕಿದ್ರು. ಸಿಎಂ ಪರಮಾಪ್ತ ಸತೀಶ್ ಜಾರಕಿಹೊಳಿ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ.ಇತ್ತ ಸಿಎಂ ಪರವಾಗಿ ಹರಿಪ್ರಸಾದ್ ಹೈಕಮಾಂಡ್ ಲೆವೆಲ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಪರಮೇಶ್ವರ್ ತಮ್ಮದೇ ಆದ ಬಣದ ಮೂಲಕ ದಲಿತ ಸಿಎಂ ದಾಳ ಉರುಳಿಸ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎರೂಡುವರೆ ವರ್ಷ ಪೂರೈಸ್ತಿರೋದು ಒಂದು ಕಡೆಯಾದ್ರೆ, ಸಿಎಂ ಮತ್ತು ಡಿಸಿಎಂ ಡಿಕೆಶಿ ನಡುವಿನ ಕಿತ್ತಾಟ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಇದರ ನಡುವೆ ಸರ್ಕಾರ ಚಳಿಗಾಲದ ಅಧಿವೇಶನಕ್ಕೆ ರೆಡಿಯಾಗ್ತಿದೆ. ಡಿಸೆಂಬರ್ 8ರಿಂದ ಆರಂಭ ವಾಗುವ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಇಂದು ಸಚಿವರ ಜೊತೆಗೆ ಸಭೆ ನಡೆಸಿ, ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸನ್ನದ್ಧರಾಗುವಂತೆ ಸಲಹೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಪಟ್ಟಕ್ಕಾಗಿ ಕದನ ವಿರಾಮ ಆಗ್ತಿದ್ದಂತೆ ಇಂದು ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಇದೇ ಬೆನ್ನಲ್ಲೇ ಇಡೀ ದಿನ ರಾಜಕೀಯ ಬೆಳವಣಿಗೆ ನಡೀತು. ಏನೇನೆಲ್ಲಾ ನಡೀತು? ಇಲ್ಲಿದೆ ಫುಲ್ ಡಿಟೈಲ್ಸ್..
ಡಿಕೆ ಶಿವಕುಮಾರ್ ತಂತ್ರಗಾರಿಕೆ ಮೇಲೆ ತಂತ್ರಗಾರಿ ಮಾಡುತ್ತಲೇ ಇದ್ದಾರೆ. ಸದ್ಯ ಹೈಕಮಾಂಡ್ ಬುಲಾವ್ ಗೆ ಕಾಯುತ್ತಿರೋ ಡಿಕೆಗೆ ತನ್ನ ಸಮುದಾಯ ಸಹ ಇದೀಗ ಬೆನ್ನಿಗೆ ನಿಂತಿದ್ದು ಸಾಕಷ್ಟು ಶಕ್ತಿ ಬಂದಿದೆ. ನಿನ್ನೆ ನಿರ್ಮಲಾನಂದ ಶ್ರೀ, ಇಂದು ನಂಜಾವಧೂತ ಶ್ರೀ ಬ್ಯಾಟಿಂಗ್
ಸಿಎಮ್ ಡಿಸಿಮ್ ಬಣ ರಾಜಕಾರಣ ಹಾಗು ಸ್ವಯಂಪ್ರತಿಷ್ಠೆಯಿಂದ ದೂರವಾಗಿದ್ದಾರೆ.ಬೆಂಗಳೂರು ಅಭಿವೃದ್ದಿಯಲ್ಲಿ ಸಿಎಮ್-ಡಿಸಿಎಮ್ ಜುಗಲ್ ಬಂಧೀ ವರ್ಕ್ ಔಟ್ ಆಗ್ತಾ ಇಲ್ಲ.ಡಿಕೆಶಿ ಹಾಗು ಸಿದ್ದರಾಮಯ್ಯ ನಡುವೆ ಕೋ ಆರ್ಡಿನೇಷನ್ ಕೊರತೆ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲೀಗ ಅದೊಂದೇ ಚರ್ಚೆ. ಅದೊಂದೇ ಮಾತು. ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟ ನಿರ್ಧಾರ ಯಾವಾಗ ಅನ್ನೋದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆ. ಸಿದ್ದರಾಮಯ್ಯ ಸಿಎಂ ಪಟ್ಟ ಬಿಟ್ಟುಕೊಡಲು ಸಿದ್ಧವಿಲ್ಲ. ಆದ್ರೆ ಡಿಸಿಎಂ ಡಿಕೆಶಿ ಪಟ್ಟ ಪಡೆದುಕೊಳ್ಳಲೇಬೇಕು ಅನ್ನೋ ಹಠ ಬಿಡ್ತಿಲ್ಲ. ಹೀಗಾಗೇ ಕಳೆದ ಮೂರು ದಿನಗಳಿಂದ ಖರ್ಗೆ ನಿವಾಸ ಪವರ್ ಹೌಸ್ ಆಗಿ ಮಾರ್ಪಟ್ಟಿದೆ ನೋಡಿ. ಪವರ್ ಶೇರಿಂಗ್ ವಿಚಾರವಾಗಿ ಯಾರು ಯಾರನೆಲ್ಲಾ ಭೇಟಿ ಮಾಡಿ ಚರ್ಚೆ ಮಾಡಿದ್ರು ಅನ್ನೋದನ್ನ ನೋಡೋಣ ಬನ್ನಿ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಸದ್ದು ಮಾಡ್ತಿದ್ದಂತೆ ಸಿಎಂ ಆಪ್ತ ಬಣ ಫುಲ್ ಆಕ್ಟೀವ್ ಆಗಿದ್ದಾರೆ.ಡಿಸಿಎಂ ಆಪ್ತರು ಹೈಕಮಾಂಡ್ ನಾಯಕರ ಭೇಟಿಗೆ ಪ್ಲಾನ್ ಮಾಡ್ತಿದ್ರೆ ಇತ್ತ ಸಿಎಂ ಆಪ್ತ ಸಚಿವರು ತಮ್ಮದೇ ಆದ ದಾಳವನ್ನು ಉರುಳಿಸೋಕೆ ಪ್ಲಾನ್ ಮಾಡ್ತಿದ್ದಾರೆ.ಸಿಎಂ ಪವರ್ ಶೇರಿಂಗ್ ವಿಚಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪಟ್ಟು ಹಿಡಿದಿರೋದಕ್ಕೆ ಮತ್ತೊಂದು ಅಸ್ತ್ರ ಬಿಡುವುದಕ್ಕೆ ಮುಂದಾಗಿ ದ್ದಾರೆ ಸಿಎಂ ಆಪ್ತರು. ಹಾಗಾದ್ರೆ ಆ ಅಸ್ತ್ರ ಯಾವುದು ಅಂತಿರಾ ಈ ಬಗ್ಗೆ ಇಲ್ಲಿದೆ.
Karnataka political crisis : ಸಿಎಂ ಬದಲಾವಣೆಯ ಚರ್ಚೆ ತಾರಕಕ್ಕೇರ್ತಿದೆ.ಸಿಎಂ ಆಗಲೇಬೇಕೆಂಬ ಡಿಕೆಶಿ ತಂತ್ರವೂ ಮುಂದುವರಿದಿದೆ. ಶಾಸಕರನ್ನ ಒಟ್ಟುಗೂಡಿಸಿ ದೆಹಲಿಗೆ ಕಳಿಸಲು ಸಿದ್ಧತೆ ನಡೆದಿದೆ. ಹೈಕಮಾಂಡ್ ಮುಂದೆ ಪರೇಡ್ ಮಾಡಿಸಿ ತಮ್ಮ ಶಕ್ತಿ ಸಾಮರ್ಥ್ಯ ಸಾಬೀತಿಗೆ ಡಿಸಿಎಂ ಪ್ರಯತ್ನ ಮುಂದುವರಿಸಿದ್ದಾರೆ.
Karnataka political crisis : ರಾಜ್ಯ ಕಾಂಗ್ರೆಸ್ ನಲ್ಲಿನ ಬಣಬಡಿದಾಟಕ್ಕೆ ಬ್ರೇಕ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂಟ್ರಿ ಕೊಟ್ಟಿದ್ದಾರೆ. ದೆಹಲಿಯಿಂದ ಬಂದಮೇಲೆ ಸದಾಶಿವನಗರದಲ್ಲಿರುವ ದೊಡ್ಡ ಖರ್ಗೆ ಮನೆ, ಪವರ್ ಹೌಸ್ ಆಗಿ ಮಾರ್ಪಟ್ಟಿದೆ. ನಿನ್ನೆಯಿಂದ ನಿನ್ನೆಯಿಂದ ಸಾಲು ಸಾಲು ಶಾಸಕರು, ಸಚಿವರು ಆಗಮಿಸಿ ಖರ್ಗೆ ಜೊತೆ ಮಾತನಾಡ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಶೇರಿಂಗ್ ವಿಚಾರ ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಇದು ಯಾವ ಹಂತಕ್ಕೆ ಮುಟ್ಟತ್ತೋ ಕಾದು ನೋಡಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.