ಬಾಗಲಕೋಟೆಯಲ್ಲಿ ರೈತರ ಹೋರಾಟ ಮುಂದುವರಿದೆ. 3ನೇ ದಿನವೂ ಮುಧೋಳ ಬಂದ್ ಮಾಡಿ ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ. ಇಂದು ಮುಧೋಳ ತಹಶೀಲ್ದಾರ್ ಕಚೇರಿ ಮುತ್ತಿಗೆಗೆ ಸಿದ್ಧತೆ ನಡೆಸಲಾಗಿದೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸೈದಾಪುರ ಗ್ರಾಮದ ಸಮೀರವಾಡಿ ಕಾರ್ಖಾನೆ ಮುಂದೆ ರೈತರು ಧರಣಿ ಮಾಡಿದ್ರು.. ಪ್ರತಿಭಟನೆ ವೇಳೆ ರೈತನೊಬ್ಬ ಮರವೇರಿದ್ದು, ಬಾಯಿ ಬಡಿದುಕೊಂಡು ಕೆಳಗೆ ಬೀಳೋದಾಗಿ ಹೈಡ್ರಾಮಾ ನಡೆಸಿದ್ದಾನೆ..
ಜಂತರ್ ಮಂತರ್ನಲ್ಲಿ ಆಯೋಜಿಸಿದ್ದ ಕಿಸಾನ್ ಮಹಾಪಂಚಾಯತ್ಗೂ ಮುನ್ನ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್ಕೆಎಂ) ವಿಭಜನೆಯ ಸುದ್ದಿ ಬರಲಾರಂಭಿಸಿದೆ. ಮಹಾಪಂಚಾಯತ್ ಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದ ರೈತಮುಖಂಡ ಬಡಗಲಪುರ ನಾಗೇಂದ್ರ, ಕೇಂದ್ರ ಸರ್ಕಾರ (Central Govt) ರೈತ ಹೋರಾಟದ ಹಿನ್ನಲೆ ಮಸೂದೆ ವಾಪಾಸ್ ಪಡೆದಿದ್ದರೂ ರಾಜ್ಯ ಸರ್ಕಾರದಲ್ಲಿ (State Govt) ಮುಂದುವರಿಯುತ್ತಿದೆ ಎಂದು ಹೇಳಿದರು.
ಮಹತ್ವದ ಬೆಳವಣಿಗೆಯಲ್ಲಿ, ಕೇಂದ್ರ ಸರ್ಕಾರವು ರೈತರ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಗುರುವಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ತಮ್ಮ ವರ್ಷಾವಧಿಯ ಆಂದೋಲನವನ್ನು ಕೊನೆಗೊಳಿಸಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರದಂದು (ಡಿಸೆಂಬರ್ 9) ಘೋಷಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.