ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಮೊದಲ ಪತ್ನಿ ಜೆಮಿಮಾ ಗೋಲ್ಡ್ಸ್ಮಿತ್ ಸೇರಿದಂತೆ ಎಲ್ಲರನ್ನೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅನ್ ಫಾಲೋ ಮಾಡಿದ್ದಾರೆ. ಈ ನಡೆ ಈಗ ಎಲ್ಲರನ್ನು ಹುಬ್ಬರೆರಿಸುವಂತೆ ಮಾಡಿದೆ.
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಗಲಭೆಕೋರರು ಮತ್ತೊಮ್ಮೆ ಸಿಂಧ್ ಪ್ರಾಂತ್ಯದ ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಆದರೆ ಒಳ್ಳೆಯ ಸಂಗತಿಯೆಂದರೆ ಸ್ಥಳೀಯ ಮುಸಲ್ಮಾನರ ವಿರೋಧದಿಂದಾಗಿ ಹಿಂದೂ ಕುಟುಂಬಗಳನ್ನು ರಕ್ಷಿಸಲಾಗಿದೆ.
2019ರ ಪುಲ್ವಾಮಾ ದಾಳಿಯನ್ನು (Pulwama Attack) ಮಾಡಿದ್ದು ತಾನೇ ಎಂದು ಪಾಕಿಸ್ತಾನವು ತನ್ನ ಸಂಸತ್ತಿನಲ್ಲೇ ಖುಲ್ಲಂಖುಲ್ಲಾ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಪುಲ್ವಾಮಾ ದಾಳಿಯು ಇಮ್ರಾನ್ ಖಾನ್ ಸರ್ಕಾರದ ಮಹತ್ವದ ಸಾಧನೆ ಎಂದು ಬಣ್ಣಿಸಿದೆ.
"ನಾವು ಕರಾಚಿಯಲ್ಲಿ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಪೊಲೀಸರು ನನ್ನ ಕೋಣೆಯ ಬಾಗಿಲು ಮುರಿದು ಕ್ಯಾಪ್ಟನ್ ಸಫ್ದಾರ್ನನ್ನು ಬಂಧಿಸಿದ್ದಾರೆ" ಎಂದು ಮರಿಯಮ್ ನವಾಜ್ ಷರೀಫ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನವು ವಿಶ್ವದಾದ್ಯಂತದ ಭಯೋತ್ಪಾದನೆಗೆ ಕುಖ್ಯಾತವಾದುದು ಮಾತ್ರವಲ್ಲ, ಭಾರತದ ನೆರೆಯ ದೇಶದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ, ಅದರ ಮೂಲಕ ಅದು ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಮುಳುಗಿದೆ.
ಪಾಕಿಸ್ತಾನದ ಮಾಜಿ ನಾಯಕ ಮತ್ತು ಕ್ರಿಕೆಟ್ ದಂತಕಥೆ ಜಾವೇದ್ ಮಿಯಾಂದಾದ್ ಅವರು ದೇಶದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೆಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಲವಾರು ಪ್ರಮುಖ ಹುದ್ದೆಗಳಿಗೆ ಸ್ವದೇಶಿಯರ ಬದಲು ವಿದೇಶಿಯರ ಪರವಾಗಿ ಇಮ್ರಾನ್ ಖಾನ್ ಮಣೆ ಹಾಕುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್ನ ಕೆಲವು ಭಾಗಗಳು ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಂಡು "ಹೊಸ ರಾಜಕೀಯ ನಕ್ಷೆ" ಬಿಡುಗಡೆ ಮಾಡಿರುವ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ.
ಎಲ್ಲಾ ಪ್ರಮುಖ ಉರ್ದು ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ವಿಶೇಷ ಪುಟಗಳ ಮೂಲಕ ಪ್ರಸಾರ ಪಡೆಯಲು ಪಾಕಿಸ್ತಾನದ ಮಾಹಿತಿ ಪ್ರಸಾರ ಸಚಿವಾಲಯ ಸಿದ್ದತೆ ನಡೆಸಿವೆ. ಇದಲ್ಲದೆ ಆಗಸ್ಟ್ 5 ರಂದು ಎಲ್ಲಾ ಪಾಕಿಸ್ತಾನಿ ಸುದ್ದಿ ವಾಹಿನಿಗಳ ಲೋಗೊವನ್ನು ಕಪ್ಪಾಗಿಸಬೇಕು ಎಂದು ಸಹ ನಿರ್ಧರಿಸಲಾಗಿದೆ.
ಮತ್ತೊಂದು ವಿವಾದದಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಭಯೋತ್ಪಾದಕ ಮತ್ತು 9/11 ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹುತಾತ್ಮರೆಂದು ಕರೆದಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಆರ್ಥಿಕ ನೆರವಿನ ಪ್ರಸ್ತಾಪದ ಟ್ವೀಟ್ ಮಾಡಿದ ಎರಡು ಗಂಟೆಗಳ ನಂತರ, ಅವರ ಸರ್ಕಾರವು ಪಾಕಿಸ್ತಾನದ ಆರ್ಥಿಕತೆಯ ಸ್ಥಿತಿ ಪರಿಶೀಲನೆಯನ್ನು ಮಾಡಿತು.
ಪಾಕ್ ನ ಸರ್ಕಾರಿ ಸ್ವಾಮ್ಯದ ವಾಯುವಾಹಕ, ವಿದ್ಯುತ್ ನಿಯಂತ್ರಕ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅನ್ನು ನಡೆಸುವಂತಹ ಹುದ್ದೆಗಳಲ್ಲಿ ಗಳಲ್ಲಿ ಈಗ ಒಂದು ಡಜನ್ಗಿಂತಲೂ ಹೆಚ್ಚು ಮಾಜಿ ಮತ್ತು ಹಾಲಿ ಮಿಲಿಟರಿ ಅಧಿಕಾರಿಗಳು ಪಾಕ್ ನಲ್ಲಿನ ಸಾಂಕ್ರಾಮಿಕ ರೋಗದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಎಲ್ಲ ನೇಮಕಗಳು ಕಳೆದ ಎರಡು ತಿಂಗಳಲ್ಲಿ ನಡೆದಿವೆ.
ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿರುವ ಎ -320 ವಿಮಾನದಲ್ಲಿ ಒಟ್ಟು 98 ಜನ ಪ್ರಯಾಣಿಕರು ಹಾಗೂ 8 ಜನ ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ವಿಮಾನ ಕೆಳಗೆ ಇಳಿಯುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಲ್ಯಾಂಡಿಂಗ್ ಗೂ ಸ್ವಲ್ಪ ಹೊತ್ತು ಮುಂಚಿತವಾಗಿ ವಸತಿ ಪ್ರದೇಶದಲ್ಲಿ ವಿಮಾನ ಕ್ರಾಶ್ ಲ್ಯಾಂಡಿಂಗ್ ಮಾಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಭಾರತ ಪಿಒಕೆ ಯಿಂದ ಗಿಲ್ಗಿಟ್ ಬಾಲ್ಟಿಸ್ತಾನ್ ವರೆಗಿನ ಹವಾಮಾನ ವರದಿ ಪ್ರಸಾರ ಮಾಡಿತ್ತು. ಇದೆ ಕಾರಣದಿಂದ ಇದೀಗ ರಾಜಾ ಫಾರೂಕ್ ಹೈದರ್ ಉರಿದು ಹೋಗಿದ್ದಾನೆ. ಅಷ್ಟೇ ಅಲ್ಲ ಪಾಕ್ ನಲ್ಲಿಯೂ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾಹಲವೇ ಸೃಷ್ಟಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.