India Pakistan war: ಭಾರತ ಸೈಲೆಂಟ್ ಆಗಿಯೇ ಮತ್ತೊಂದು ಯುದ್ಧಗೆ ತಯಾರಿ ನಡೆಸ್ತಿದೆ ಅಂತಾ ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಆರೋಪಿಸಿದ್ದಾರೆ.ಪಾಕಿಸ್ತಾನದ ಪಾರ್ಲಿಮೆಂಟ್ನ ಜಂಟಿ ಅಧಿವೇಶನದಲ್ಲಿ ಭಾರತದ ಮೇಲೆ ಸಾಲು ಸಾಲು ಆರೋಪಗಳ ಸುರಿ ಮಳೆಗೈಯಲಾಗಿದೆ..
ಭಾರತದ ದೀರ್ಘಕಾಲೀನ ಮಿತ್ರ ರಷ್ಯಾ, ಪಾಕಿಸ್ತಾನದೊಂದಿಗೆ 2015ರಲ್ಲಿ ಮುಚ್ಚಿದ ಪಾಕಿಸ್ತಾನ ಸ್ಟೀಲ್ ಮಿಲ್ಸ್ (ಪಿಎಸ್ಎಂ) ಅನ್ನು ಪುನರುಜ್ಜೀವನಗೊಳಿಸಲು ಒಪ್ಪಂದ ಮಾಡಿಕೊಂಡಿದೆ. ಈ ಕ್ರಮ ಭಾರತ-ರಷ್ಯಾ ಸಂಬಂಧಗಳಲ್ಲಿ ಒಡಕು ಉಂಟುಮಾಡಬಹುದು.
ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತದ ಗಡಿ ಭದ್ರತಾ ಪಡೆ (BSF) ತಿರುಗೇಟು ನೀಡಿ, ಲಷ್ಕರ್-ಎ-ತೊಯ್ಬಾ (LeT) ಉಗ್ರರ ಉಡಾವಣಾ ಕೇಂದ್ರವನ್ನು ಗಡಿಯಿಂದ 3 ಕಿಮೀ ದೂರದಲ್ಲಿ ಧ್ವಂಸಗೊಳಿಸಿದೆ. ಮೇ 9-10 ರ ರಾತ್ರಿ ನಡೆದ ಈ ದಾಳಿಯಲ್ಲಿ ಪಾಕ್ ಚೌಕಿಗಳು ನಾಶವಾದವು, BSFಗೆ ಯಾವುದೇ ಹಾನಿಯಾಗಲಿಲ್ಲ.
ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯ ನಂತರ, ಮೇ 7ರಂದು ಭಾರತವು ಆಪರೇಷನ್ ಸಿಂದೂರ್ ಆರಂಭಿಸಿ, ಹಿಜ್ಬುಲ್ ಮುಜಾಹಿದ್ದೀನ್, ಎಲ್ಇಟಿ ಮತ್ತು ಜೈಶ್-ಎ-ಮೊಹಮ್ಮದ್ಗೆ ಸಂಬಂಧಿಸಿದ ಒಂಬತ್ತು ತಾಣಗಳನ್ನು ಗುರಿಯಾಗಿಸಿತು.
ಪಹಲಗಾಮ್ ದಾಳಿಯನ್ನು ಕೇವಲ ಭಯೋತ್ಪಾದಕ ಕೃತ್ಯವಾಗಿ ಅಲ್ಲ, ಭಾರತದ ಆತ್ಮದ ಮೇಲಿನ ದಾಳಿಯಾಗಿ, ನಾಗರಿಕರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿ ದೇಶದ ಏಕತೆಯನ್ನು ಒಡೆಯುವ ಪ್ರಯತ್ನವಾಗಿ ಚಿತ್ರಿಸಿದರು.
India Pakistan Tension: ಭಾರತ ಪಾಕಿಸ್ತಾನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ಹೆಜ್ಜೆಗೆ ಶ್ಲಾಘನೆ ವ್ಯಕ್ತಪಡಿಸಿದರು.
India Pakistan Conflict: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಭಾರತ ಖಡಕ್ ವಾರ್ನಿಂಗ್ ಮಾಡಿದೆ.
ಪಾಕ್ ಕದನ ವಿರಾಮ ಉಲ್ಲಂಘಿಸಿದ ಬಳಿಕ ಅಮೆರಿಕದ ಉಪಾಧ್ಯಕ್ಷರಿಗೆ ಕರೆ ಮಾಡುವ ಮೂಲಕ ಮೋದಿ ಮಾತನಾಡಿದ್ದಾರೆ. ʼಒಂದು ವೇಳೆ ಅಲ್ಲಿಂದ (ಪಾಕಿಸ್ತಾನ) ಗುಂಡು ಹಾರಿಸಿದ್ರೆ, ಇಲ್ಲಿಂದಲೂ (ಭಾರತ) ಗುಂಡು ಸಿಡಿಯಲಿದೆ. ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲವೆಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಭಾರತ ಸರ್ಕಾರವು ಕದನ ವಿರಾಮದಲ್ಲಿ ಅಮೆರಿಕದ ಯಾವುದೇ ಪಾತ್ರವನ್ನು ನಿರಾಕರಿಸಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಸಾಧಿತವಾಯಿತು ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನಿ ವಾಯುಪಡೆಯ ಅಧಿಕಾರಿ ಔರಂಗಜೇಬ್ ಅಹ್ಮದ್ ಅವರು ಪುಲ್ವಾಮಾ ಬಾಂಬ್ ದಾಳಿಯನ್ನು "ಯುದ್ಧತಂತ್ರದ ಪ್ರತಿಭೆ"ಯ ಕೃತ್ಯ ಎಂದು ಕರೆದಿದ್ದಾರೆ. ಅವರ ಈ ಹೇಳಿಕೆಯಿಂದ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವಿಲ್ಲವೆಂದು ಪದೇ ಪದೇ ಹೇಳುತ್ತಿದ್ದ ಪಾಕಿಸ್ತಾನದ ಮತ್ತೊಂದು ನೀಚ ಕೃತ್ಯ ಬಹಿರಂಗವಾಗಿದೆ.
India Pakistan Conflict: ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತಣಿಸಲು ರಾಜಿ ಸಂಧಾನ ನಡೆಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಡೋ-ಪಾಕ್ ಕದನ ವಿರಾಮದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
India Pakistan Tensions: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ನಡುವೆ ಸುಳ್ಳು ಸುದ್ದಿಯನ್ನು ಹರಡದಂತೆ ಸರ್ಕಾರ ಸೂಚಿಸಿದೆ.
India Pakistan Conflict: ಭಾರತ ಪಾಕಿಸ್ತಾನದ ನಡುವೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ನಿನ್ನೆ (ಮೇ 09) ಪಾಕಿಸ್ತಾನ ಗಡಿ ಭಾಗಗಳಲ್ಲಿ ಡ್ರೋನ್, ಕ್ಷಿಪಣಿ ಹಾಗೂ ಶೆಲ್ ದಾಳಿಗಳನ್ನು ಪ್ರಯತ್ನಿಸಿದ ಬಳಿಕ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
India Pakistan War: ಭಾರತ ಪಾಕಿಸ್ತಾನದ ಉದ್ವಿಗ್ನತೆ ನಡುವೆ ಕಾರ್ಗಿಲ್ ಯುದ್ದ, 26/11 ದಾಳಿ ಮತ್ತು ಕಂದಹಾರ್ ಅಪಹರಣಗಳನ್ನು ಉಲ್ಲೇಖಿಸಿರುವ ರಕ್ಷಣಾ ಸಚಿವಾಲ ಮಾಧ್ಯಮಗಳಿಗೆ ವಿಶೇಷ ಸೂಚನೆ ನೀಡಿದೆ.
India Pakistan War: ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೂರಿರುವ ಯುದ್ಧದಂತ ಪರಿಸ್ಥಿತಿಯ ನಡುವೆ ಭಾರತ ಸರ್ಕಾರ ಎಲ್ಲಾ ಭಾರತೀಯ ಟೆಲಿಕಾಂ ಸಂಸ್ಥೆಗಳಿಗೆ ಯಾವುದೇ ಪರಿಸ್ಥಿತಿಗೂ ಸಿದ್ದರಾಗಿರುವಂತೆ ಸೂಚನೆ ನೀಡಿದೆ.
Operation Sindoor: ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿರುವ ಭಾರತೀಯ ಸೇನೆಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.
Operation Sindoor: ದೇಶವೇ ಹೆಮ್ಮೆ ಪಡುವಂಥ ಆಪರೇಷನ್ ಸಿಂಧೂರ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದವರು ಕರ್ನಲ್ ಸೋಫೀಯಾ ಖುರೇಷಿಯಾರು ಎನ್ನುವ ಕುತೂಹಲ ಹುಟ್ಟುಕೊಂಡಿತ್ತು. ಇದೀಗ ಅವರು ಬೆಳಗಾವಿ ಜಿಲ್ಲೆಯ ಸೊಸೆ ಎಂದು ಗೊತ್ತಾಗಿದೆ.
Operation Sindoor: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಆಳವಾದ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಲು ಭಾರತೀಯ ಸಶಸ್ತ್ರ ಪಡೆಗಳು ʻಸ್ಯೂಸೈಡ್ ಡ್ರೋನ್ʼಗಳನ್ನು ಬಳಸಿತ್ತು.