ಫ್ರಾನ್ಸ್ ಮತ್ತು ಭಾರತ ಸರ್ಕಾರಗಳ ನಡುವೆ ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಪೂರೈಕೆ ಸಮಯದ ಕುರಿತು ಮಾತುಕತೆಗಳು ನಡೆಯುತ್ತಿವೆ. 2024ರ ಆರಂಭದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಆಡಳಿತಕ್ಕೆ ಬರುವ ನೂತನ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿವೆ.
ಭಾರತದ ಮನವಿಗೆ ಫ್ರಾನ್ಸ್ ಲೆಟರ್ ಆಫ್ ಅಕ್ಸೆಪ್ಟೆನ್ಸ್ (ಅನುಮತಿ ಪತ್ರ) ನೀಡುವ ಮೂಲಕ ಪ್ರತಿಕ್ರಿಯಿಸಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ಎರಡು ವಿಮಾನ ವಾಹಕ ನೌಕೆಗಳಲ್ಲಿ ಬಳಸುವ ಸಲುವಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗುವ 26 ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಇತರ ಮಾಹಿತಿಗಳನ್ನು ಒಳಗೊಂಡಿದೆ. ಇದರೊಡನೆ, ಎಂಡಿಎಲ್ ಭಾರತೀಯ ನೌಕಾಪಡೆಗೆ ಹೆಚ್ಚುವರಿ ಮೂರು ಸ್ಕಾರ್ಪೀನ್ ವರ್ಗದ ಸಬ್ಮರೀನ್ ನಿರ್ಮಿಸಲು ವಾಣಿಜ್ಯಿಕ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಜೂನ್ ತಿಂಗಳಲ್ಲಿ ಭಾರತ ಮತ್ತು ಫಿಲಿಪೈನ್ಸ್ ದೇಶಗಳ ರಾಜತಾಂತ್ರಿಕರ ಮಟ್ಟರ ಮಾತುಕತೆ ನಡೆದಿದ್ದು, ಅದರಲ್ಲಿ ಭಾರತ ದಕ್ಷಿಣ ಚೀನಾ ಸಮುದ್ರದ ಮಧ್ಯಸ್ಥಿಕೆ 2016 ಒಪ್ಪಂದಲ್ಲಿ ತನ್ನ ಪಾತ್ರವನ್ನು ತಿದ್ದುಪಡಿ ಮಾಡಿದ್ದು, ಚೀನಾದೆದುರು ಫಿಲಿಪೈನ್ಸ್ ಪ್ರಾದೇಶಿಕ ಹಕ್ಕುಗಳನ್ನು ಬೆಂಬಲಿಸುತ್ತದೆ. ಭಾರತ ಪ್ರಸ್ತುತ ಸಮಯದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ತನ್ನ ಭದ್ರತಾ ಸಹಯೋಗವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಒಪ್ಪಂದದ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ.
ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳು ಇದರ ಸದಸ್ಯರಾಗಿವೆ.
ಭಾರತೀಯ ವಾಯುಪಡೆ (ಐಎಎಫ್) ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಸಮರ್ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷಾ ಪ್ರಯೋಗಗಳನ್ನು ಇತ್ತೀಚೆಗೆ ಆಂಧ್ರಪ್ರದೇಶದ ಸೂರ್ಯಲಂಕ ವಾಯುನೆಲೆಯಲ್ಲಿ ನಡೆದ ಅಸ್ತ್ರಶಕ್ತಿ 2023 ಅಭ್ಯಾಸದಲ್ಲಿ ನಡೆಸಿತು.
ಇದೇ ಮೊದಲ ಬಾರಿಗೆ ಅಭ್ಯಾಸದಲ್ಲಿ ಭಾಗಿಯಾದ ಈ ಕ್ಷಿಪಣಿ ವ್ಯವಸ್ಥೆ ತನ್ನ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು.
Weird News: ನಿಮ್ಮ ಬ್ಯಾಂಕ್ ಖಾತೆಯಲ್ಲಿ 35 ಸಾವಿರ ರೂಪಾಯಿ ಇದ್ದರೆ, ಒಂದು ದೇಶಕ್ಕೆ ಹೋಗುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಅಂದರೆ ಇಷ್ಟು ಹಣದಿಂದ ಭಾರತದಲ್ಲಿ ಬಡವ ಎಂದು ಕರೆಯಲ್ಪಡುವವರೂ ಕೂಡ ಈ ದೇಶದಲ್ಲಿ ಶ್ರೀಮಂತರಾಗಬಹುದು. Business News In Kananda
Fuel Price: ಭಾರತದಲ್ಲಿ ಡಿಸೆಂಬರ್ 9ರಂದು ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ನಿಮ್ಮ ನಗರಗಳಲ್ಲಿ ಬೆಲೆ ಎಷ್ಟಾಗಿದೆಂದು ತಿಳಿಯಬೇಕೆ. ಕೆಚ್ಚಾ ತೈಲದ ಬೆಲೆ ಎಷ್ಟಾಗಿದೆಂದು ಗೊತ್ತಾಗಬೇಕೆ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ವಿವರ.
Jawaharlal Nehru: ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಕೆಲವು ತಪ್ಪು ನಿರ್ಧಾರಗಳಿಂದಾಗಿ ಭಾರತವು ಜೀವನ, ಹಣಕಾಸು ಮತ್ತು ಖ್ಯಾತಿಯ ವಿಷಯದಲ್ಲಿ ಗಣನೀಯವಾಗಿ ನಷ್ಟ-ಕಷ್ಟವನ್ನು ಅನುಭವಿಸಿದೆ. ಆದರೆ, ಇವುಗಳಿಗೆಲ್ಲ ನೆಹರು ಒಬ್ಬರೇ ಹೊಣೆ ಎನ್ನಲಾಗದು. ಅವರ ಗುರುಗಳು ಮತ್ತು ಮೆಂಟರ್ಗಳು (ಮಾರ್ಗದರ್ಶಕರ) ಅವರ ಮೇಲೆ ಬೀರಿದ ಪ್ರಭಾವ, ಪರಿಣಾಮಗಳು ಕೂಡ ಕಾರಣಗಳಾಗಿವೆ. ಹಾಗಿದ್ದರೆ ನೆಹರು ಅವರ ಗುರುಗಳು, ಮೆಂಟರ್ಗಳು ಅವರ ಮೇಲೆ ಬೀರಿ ಪ್ರಭಾವವೇನು? ನೆಹರು ಮೇಲೆ ಪ್ರಭಾವ ಬೀರಿದವರು ಯಾರೆಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.
Anushka Sharma At Narendra Modi Stadium: ಐಸಿಸಿ ಕ್ರಿಕೆಟ್ ವಿಶ್ವಕಪ್ನ ಅಂಗವಾಗಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಅನುಷ್ಕಾ ಶರ್ಮಾ ನರೇಂದ್ರ ಮೋದಿ ಸ್ಟೋಡಿಯಂನಲ್ಲಿ ವಿರಾಟ್ ಕೊಹ್ಲಿಗೆ ಚೀರ್ಲೀಡರ್ ಆಗಿದ್ದಾರೆ.
Ind Vs NZ Semifinal: ನಮ್ಮ ಹೆಚ್ಚಿನ ಆಟಗಾರರು ಈ ಕ್ರೀಡಾಂಗಣದಲ್ಲಿ ಮತ್ತು ಅಂತಹ ದೊಡ್ಡ ಸಂದರ್ಭದಲ್ಲಿ ಪಂದ್ಯವನ್ನು ಆಡಿಲ್ಲ ಎಂದು ವಿಲಿಯಮ್ಸನ್ ಒಪ್ಪಿಕೊಂಡಿದ್ದಾರೆ. ಇದು ನಮಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ. ಭಾರತ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. (ICC World Cup 2023 News In Kannada)
Puneeth Rajkumar Fan: ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿ ಸೈಕ್ಲಿಂಗ್ ಮಾಡುತ್ತಾ 34,300 ಕಿಲೋಮೀಟರ್ ಮುಗಿಸಿ ತಮ್ಮ ಆರಾಧ್ಯ ದೈವಗೆ ಗೌರವವನ್ನು ಸಲ್ಲಿಸಿದ್ದಾರೆ.
Apple Company: ಆಪಲ್ ಕಂಪನಿಯ ಭಾರತದ ದೊಟ್ಟ ಮಾರುಕಟ್ಟೆಯಲ್ಲಿ ದೊಡ್ಡ ಕಡಿಮೆ ಶೇರ್ ಹೊಂದಿದ್ದರು, ನಿರೀಕ್ಷತಗಿಂತ ಹೆಚ್ಚು ಲಾಭ ಮಾಡಿದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಆಪಲ್ನ Q4 2023 ಗಳಿಕೆಗಳ ಕಾನ್ಫರೆನ್ಸ್ ಕರೆಯಲ್ಲಿ ಹೇಳಿದ್ದಾರೆ.
World Cup: ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಅದ್ಭುತ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಅವರನ್ನೇ ಹಿಂದಿಕ್ಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.