ಭಾರತದ ಸ್ಟಾರ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ 37 ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ.ಸುಮಾರು 14 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಿದ್ದರು, ಆದರೆ ಟೀಮ್ ಇಂಡಿಯಾ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು.
IPL 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಮೂವರು ಸ್ಟಾರ್ ಆಟಗಾರರಿಗಾಗಿ IPL ಫ್ರಾಂಚೈಸಿಗಳು ಭಾರೀ ಬಿಡ್ಗಳಿಗೆ ತಯಾರಿ ನಡೆಸುತ್ತಿವೆ. 1,355 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರೆ, ಒಟ್ಟು 77 ಸ್ಲಾಟ್ಗಳು ಲಭ್ಯವಿದೆ. ಇವುಗಳಲ್ಲಿ 31 ವಿದೇಶಿ ಆಟಗಾರರಿಗೆ ಲಭ್ಯವಿದೆ.
ಇಂದು ಇಂಡಿಯನ್ ಪ್ರಿಮಿಯರ್ ಲೀಗ್ (IPL) ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಿಸಿಸಿಐ ಕೇವಲ ಪ್ರಸಾರದ ಹಕ್ಕುಗಳಿಂದಲೇ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ನಿಮಗೆ ಗೊತ್ತಾ ಐಪಿಎಲ್ ಪಂದ್ಯಾವಳಿಗೂ ಮುನ್ನವೇ ಐಸಿಎಲ್ ಅಂದರೆ ಇಂಡಿಯನ್ ಕ್ರಿಕೆಟ್ ಲೀಗ್ (ICL) ಜನ್ಮ ತಾಳಿತ್ತು. ಇದರ ಹಿಂದಿನ ರೂವಾರಿಯೇ ಎಸ್ಸೆಲ್ ಗ್ರೂಪ್ನ ಅಧ್ಯಕ್ಷ ಡಾ.ಸುಭಾಷ್ ಚಂದ್ರ ಗೋಯೆಂಕಾ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ರಾಯಲ್ಸ್ ತಂಡವು ರಾಯಲ್ ಮಲ್ಟಿಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ, ಮನೋಜ್ ಬಡಾಲೆ ಮುಖ್ಯ ಷೇರುದಾರರಾಗಿದ್ದಾರೆ. ಇಲ್ಲಿಯವರೆಗೆ, ಫ್ರಾಂಚೈಸಿ ಮಾರಾಟದ ಬಗ್ಗೆ ಮಾಲೀಕರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ
Two IPL Teams for Sale: ಮುಂದಿನ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಎರಡು ದೊಡ್ಡ ತಂಡಗಳು ಮಾರಾಟವಾಗಲಿವೆ ಎಂಬ ಸುದ್ದಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಆರ್ಸಿಬಿಯ ನಂತರ ಈಗ ಮತ್ತೊಂದು ತಂಡ ಕೂಡ ಹರಾಜಿಗೆ ಸಿದ್ಧವಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.
ಚೆನ್ನೈ ಸೂಪರ್ ಕಿಂಗ್ಸ್ (CSK) IPL 2026ರ ಮಿನಿ ಹರಾಜಿನಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ತಂಡವು ರಸೆಲ್, ಮ್ಯಾಕ್ಸ್ವೆಲ್, ಲಿವಿಂಗ್ಸ್ಟೋನ್ ಮತ್ತು ಗ್ರೀನ್ ಅವರ ಮೇಲೆ ಕಣ್ಣಿಟ್ಟಿದೆ. ಸ್ಯಾಮ್ ಕರನ್ ಬದಲಿ ಆಟಗಾರನನ್ನೂ ಸಹ ಹುಡುಕುತ್ತಿದೆ.
RCB: 2025ರಲ್ಲಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಋತುವಿಗೆ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಮಿನಿ ಹರಾಜಿಗೂ ಮುನ್ನ ಹಲವಾರು ಆಟಗಾರರನ್ನ ಬಿಡುಗಡೆ ಮಾಡುವ ಅವಕಾಶವಿದೆ ಎಂದು ತೋರುತ್ತದೆ.
ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಹೆಚ್ಚಾಗಿ ಸುದ್ದಿಯಿಂದ ದೂರವಿರುತ್ತಾರೆ. ಅವರು ಸಾಮಾಜಿಕ ಮಾಧ್ಯಮವನ್ನ ಸಹ ವಿರಳವಾಗಿ ಬಳಸುತ್ತಾರೆ. ಆದರೆ ಧೋನಿಯ ಫೋಟೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕಳವಳವನ್ನ ಹೆಚ್ಚಿಸಿದೆ.
ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವ ಅಭಿಮಾನಿಗಳಿಗೆ ಇನ್ಮುಂದೆ ಹೆಚ್ಚು ಖರ್ಚು ಮಾಡಬೇಕಾಗಲಿದೆ. ಕೇಂದ್ರ ಸರ್ಕಾರವು ಐಪಿಎಲ್ ಟಿಕೆಟ್ಗಳ ಮೇಲಿನ ಜಿಎಸ್ಟಿ ತೆರಿಗೆಯನ್ನು ಶೇ.28 ರಿಂದ ಶೇ.40 ಕ್ಕೆ ಏರಿಸಿದೆ.
ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಸರ್ಕಾರವು ಬೆಂಗಳೂರು ಕಮೀಷನರ್ ಆಗಿದ್ದ ಬಿ.ದಯಾನಂದ್ರನ್ನು ಸಸ್ಪೆಂಡ್ ಮಾಡಿತ್ತು. ಅಲ್ಲದೇ ಕೆಲವು ಪೊಲೀಸ್ಅಧಿಕಾರಿಗಳಿಗೂ ಅಮಾನತು ಶಿಕ್ಷೆ ವಿಧಿಸಿತ್ತು. ಇದೀಗ ಸರ್ಕಾರದ ವಿರುದ್ಧವೇ ಜನಾಕ್ರೋಶ ವ್ಯಕ್ತವಾಗಿದೆ.
Royal Challengers Bengaluru: ಐಪಿಎಲ್ 2025ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಋತುವಿನಲ್ಲಿ ಪಂದ್ಯಾವಳಿ ಗೆದ್ದು ಬೀಗಿದೆ. ಇದೀಗ ತಾನು ಅಂದು ತಂಡವನ್ನು ಯಾವ ಕಾರಣಕ್ಕೆ ಖರೀದಿಸಿದ್ದೆ ಎನ್ನುವ ಸತ್ಯವನ್ನು ಅಂದಿನ ತಂಡದ ಮಾಲೀಕ ವಿಜಯ ಮಲ್ಯ ಹೇಳಿದ್ದಾರೆ.
ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 65ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ 42 ರನ್ಗಳಿಂದ ಗೆದ್ದಿತು. ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿತು.
ಇಂಡಿಯನ್ ಪ್ರೀಮಿಯರ್ ಲೀಗ್(IPL)ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(MI) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್(DC) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಪ್ಲೇಆಫ್ಗೆ ಹತ್ತಿರವಾಗಿದೆ. ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್, ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಅರ್ಧಶತಕ(73)ದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 180 ರನ್ ಕಲೆ ಹಾಕಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.