ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಇರಾನಿನ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿ ಅವರೊಂದಿಗೆ ಮಾತುಕತೆ ಬಹಳ ಫಲಪ್ರದವಾಗಿದೆ ಮತ್ತು ಅಫ್ಘಾನಿಸ್ತಾನ ಸೇರಿದಂತೆ ದ್ವಿಪಕ್ಷೀಯ ಸಹಕಾರ ಮತ್ತು ಪ್ರಾದೇಶಿಕ ಭದ್ರತಾ ಸಮಸ್ಯೆಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯಿದ್ ಅಲಿ ಖಮೇನಿ ಅವರು ಹಿಂದಿಯಲ್ಲಿ ಅಧಿಕೃತ ಟ್ವಿಟರ್ ಖಾತೆಯನ್ನು ತೆರೆದಿದ್ದಾರೆ. ದೇವನಾಗರಿಯಲ್ಲಿರುವ ಅವರ ಖಾತೆ, ಟ್ವೀಟ್ ಗಳನ್ನು ಸಹಿತ ಹಿಂದಿಯಲ್ಲಿ ಬರೆಯಲಾಗಿದೆ.
ಭಾರತದಲ್ಲಿ ಪೆಟ್ರೋಲ್ ಅಬಕಾರಿ ಸುಂಕವನ್ನು 10 ರೂ. ಮತ್ತು ಡೀಸೆಲ್ ಅಬಕಾರಿ ಸುಂಕವನ್ನು 13 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 71.26 ರೂ. ಮತ್ತು ಡೀಸೆಲ್ ಬೆಲೆ 69.39 ರೂ. ಆಗಿದೆ.
ಇರಾನ್ನಲ್ಲಿ ಸಿಲುಕಿರುವ ಕನಿಷ್ಠ 22 ಭಾರತೀಯರು ಭಾನುವಾರ (ಮಾರ್ಚ್ 8) ಕೇಂದ್ರ ಸರ್ಕಾರದಿಂದ ಸಹಾಯ ಕೋರಿ, ತಕ್ಷಣದ ಸ್ಥಳಾಂತರಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ವರದಿಯ ಪ್ರಕಾರ, ಎಲ್ಲಾ 22 ಭಾರತೀಯ ನಾಗರಿಕರು ಇರಾನ್ನ ಬುಶರ್ ಹೋಟೆಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅವರೆಲ್ಲರೂ ಹಡಗು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಎರಡು ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾದ ಒಂದು ದಿನದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರದಂದು ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ಪ್ರಜೆಗಳಿಗೆ ಮಾರ್ಚ್ 3 ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಎಲ್ಲಾ ನಿಯಮಿತ ವೀಸಾ / ಇ-ವೀಸಾಗಳನ್ನು ಅಮಾನತುಗೊಳಿಸುವ ಪ್ರಯಾಣ ಸಲಹೆಯನ್ನು ನೀಡಿತು.
ಇರಾಕ್, ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಗುಪ್ತಚರ ವಿಭಾಗದ ಮುಖ್ಯಸ್ಥರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮೂಲವನ್ನು ಉಲ್ಲೇಖಿಸಿ ಇರಾನಿನ ಮಾಧ್ಯಮ ಹೇಳಿದೆ.
ಇರಾಕ್ನ ಯುಎಸ್ ಮಿಲಿಟರಿ ನೆಲೆಯ ಮೇಲೆ ಇರಾನ್ನ ಖಂಡಾಂತರ ಕ್ಷಿಪಣಿ ದಾಳಿ ನಡೆದ 24 ಗಂಟೆಗಳ ಒಳಗೆ ರಾಜಧಾನಿ ಬಾಗ್ದಾದ್ನ ಸುರಕ್ಷಿತ ಪ್ರದೇಶವಾದ ಹಸಿರು ವಲಯಕ್ಕೆ ಎರಡು ರಾಕೆಟ್ಗಳನ್ನು ಹಾರಿಸಲಾಗಿದೆ.
ಅಮೇರಿಕಾ- ಇರಾನ್ ನಡುವಿನ ಉದ್ವಿಗ್ನತೆ ಹಿನ್ನಲೆಯಲ್ಲಿ ಶ್ವೇತ ಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶದ ಮೇಲೆ ಹೆಚ್ಚುವರಿ ದಿಗ್ಬಂಧನ ಹಾಕುವುದಾಗಿ ಘೋಷಿಸಿದ್ದಾರೆ.
ಇರಾಕ್ನ ಯುಎಸ್ ನೆಲೆಯ ಮೇಲೆ ಇರಾನ್ ನಡೆಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯು ಅಮೆರಿಕಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ ಎಂದು ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಾಮನೆಯಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.