Shriya Saran : ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಶ್ರಿಯಾ ಶರಣ್ ಚಿತ್ರರಂಗಕ್ಕೆ ಕಾಲಿಟ್ಟರು ಇವರು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ನಟಿ ಶ್ರಿಯಾ ಶರಣ್ ಇದೀಗ ಬೋಲ್ಡ್ ಬಟ್ಟೆ ಧರಿಸಿ ಕಣ್ಣುಕುಕ್ಕುವಂತೆ ಪೋಸ್ ಕೊಟ್ಟಿದ್ದಾರೆ.
Sandalwood : ಕಳೆದ ವರ್ಷ ಬಿಡುಗಡೆಗೊಂಡ ಹಲವು ಕನ್ನಡ ಸಿನಿಮಾಗಳಿಂದ ಕನ್ನಡ ಚಲನಚಿತ್ರಗಳ ಗಳಿಕೆಯ ಮಟ್ಟವೇ ಬದಲಾಗುತ್ತಿದೆ. ಈ ಹಿಂದೆ ಹತ್ತು ಕೋಟಿ ದಾಟಿದರೆ ಹೆಚ್ಚು ಎನ್ನಲಾಗುತ್ತಿದ್ದ ಕನ್ನಡ ಚಿತ್ರಗಳು ಕಳೆದ ವರ್ಷ ರಾಜ್ಯದಲ್ಲಿಯೇ ಇಪ್ಪತ್ತು, ಮೂವತ್ತು ಕೋಟಿ ರೂಪಾಯಿಗಳ ಕಲೆಕ್ಷನ್ ಅನ್ನು ಸುಲಭವಾಗಿ ಮಾಡಿದ್ದವು ಹಾಗೂ ವಿಶ್ವದಾದ್ಯಂತ ಕನ್ನಡ ಸಿನಿಮಾ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
Puneeth rajkumar : ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಆಕಾಶದಲ್ಲಿರುವ ತಾರೆಗೆ ಇಡಲಾಗಿದೆ. ʼಬಿಗ್ ಲಿಟ್ಲ್ʼ ಕಂಪನಿ ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಸೇರಿ ವೀಡಿಯೋ ಗೌರವ ಸಲ್ಲಿಸಿದೆ. ಅಲ್ಲದೆ, ಈ ಕುರಿತು ವೀಡಿಯೋ ಬಿಡುಗಡೆ ಒಂದನ್ನು ಬಿಡುಗಡೆ ಮಾಡಲಾಗಿದೆ.
Puneeth rajkumar : ಇಂದು ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ, ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಬಗ್ಗೆ ಕಿಡಗೇಡಿಗಳು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಸ್ಕ್ಯಾಮ್ಸ್ ಎಂಬ ಹ್ಯಾಷ್ ಟ್ಯಾಗ ಬಳಸಿ ದೊಡ್ಮನೆ ಮಗ ಯಾವುದೇ ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ ಎಂದು ದೂರುತ್ತಿದ್ದಾರೆ.
Duniya Vijay on Appu : ಕನ್ನಡ ಪಠ್ಯ ಪುಸ್ತಕದಲ್ಲಿ ʼಅʼ ಎಂದರೆ ʼಅಪ್ಪುʼ ಎಂದಾಗಲಿ ಎಂದು ನಟ ದುನಿಯಾ ವಿಜಯ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿದ ನೆಟ್ಟಿಗರು ಪರ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಿಚ್ಚ ಸುದೀಪ್ ನಟನೆಯಲ್ಲಷ್ಟೇ ಅಲ್ಲದೆ ಹಲವು ಸಮಾಜಮುಖಿ ಕಾರ್ಯಗಳನ್ನುೂ ಮಾಡುತ್ತಾ ಮನಗೆದ್ದವರು. 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ವತಿಯಿಂದ ಇಂದಿಗೂ ಅದೆಷ್ಟೋ ಜೀವಗಳಿಗೆ ಆಶಾಕಿರಣವಾಗಿದ್ದಾರೆ. ಹೌದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಂಡ ಈಗ ಮತ್ತೊಂದು ಕಾರ್ಯದಲ್ಲಿ ತೊಡಗಿ ಕೊಂಡಿದೆ.
ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಟ್ರೇಲರ್ ಶನಿವಾರವಷ್ಟೇ, ಅಮಿತಾಭ್ ಬಚ್ಚನ್ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್ ಆಗಿರೋ ಕ್ರೇಜ್ ಅಷ್ಟಿಷ್ಟಲ್ಲ. ಇಷ್ಟೊಂದು ಎಕ್ಸ್ಪೆಕ್ಟೇಷನ್ ಸುಮ್ ಸುಮ್ಮನೆ ಮೂಡಿದ್ದಲ್ಲ. ಅದರ ಹಿಂದೆ ನಿರ್ದೇಶಕ ಆರ್. ಚಂದ್ರು ಅವರ ಪರಿಶ್ರಮ ಇದೆ. ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ಟೀಮ್ ಇದೆ. ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್. ಚಂದ್ರು ಟೀಮ್ ಸಿಕ್ಕಾಪಟ್ಟೆ ಎಫರ್ಟ್ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿ ಇರುವ ಕಾರುಗಳು ಕಲೆಕ್ಷನ್.
ಕಬ್ಜ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ. ಈ ಹಿಂದೆ ಕೇವಲ ಕನ್ನಡದಲ್ಲಿ ಮಾತ್ರ ಚಿತ್ರಗಳನ್ನು ಮಾಡಿದ್ದ ಈ ಜೋಡಿ ಈ ಬಾರಿ ದೊಡ್ಡ ಮಟ್ಟದ ಯೋಜನೆಯೊಂದಿಗೆ ಅಖಾಡಕ್ಕೆ ಇಳಿದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತಯಾರಿಸಲಾಗಿದ್ದು, ರಿಚ್ ಆಗಿಯೇ ಚಿತ್ರವನ್ನು ನಿರ್ಮಿಸಲಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ʼಕಬ್ಜʼ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯದ ಘೋಷಣೆ, ರಕ್ತದ ಹರಿವು, ಹೆಪ್ಪುಗಟ್ಟಿದ ಕತ್ತಿ, ಸಾಮ್ರಾಜ್ಯವಾಳುವ ಧ್ವನಿ.. ಘೋರಾತಿ ಘೋರ ಶತ್ರುಗಳ ಆರ್ಭಟ, ಒಟ್ಟಾರೆಯಾಗಿ ʼಕಬ್ಜʼ ಟ್ರೈಲರ್ ಹೇಗಿದೆ ಅಂದ್ರೆ.. ಪಿಚ್ಚರ್ ಅಭಿ ಬಾಕಿ ಹೈ ಬಾಸ್ ಎಂದು ಭಾರತೀಯ ಸಿನಿರಂಗಕ್ಕೆ ಘರ್ಜಿಸಿ ಕನ್ನಡದ ಮತ್ತೊಂದು ಸಿನಿಮಾ ದಾಖಲೆ ಬರೆಯಲು ಬರುತ್ತಿದೆ ಎಂದು ಹೇಳುವಂತಿದೆ.
Kabza Rrailer Release Date : ತಮ್ಮ ಅಮೋಘ ಅಭಿನಯದಿಂದ ಜನಮನಸೂರೆಗೊಂಡಿರುವ ಭಾರತದ ಖ್ಯಾತ ನಟ ʼಅಮಿತಾಭ್ ಬಚ್ಚನ್ʼ ಇಂದು (ಮಾರ್ಚ್ 4) ಸಂಜೆ 5 ಗಂಟೆ 2 ನಿಮಿಷಕ್ಕೆ ಮುಂಬೈನಲ್ಲಿ ಕಬ್ಜ ಸಿನಿಮಾದ ಟ್ರೈಲರ್ ಬಿಡಗಡೆ ಮಾಡಲಿದ್ದಾರೆ. ಪ್ರಪಂಚದಾದ್ಯಂತ ಬಿಡುಗಡೆಗೂ ಮುಂಚೆಯೇ ಗಮನ ಸೆಳೆದಿರುವ "ಕಬ್ಜ" ಟ್ರೇಲರ್ ನೋಡಿ ಖುಷಿಪಟ್ಟಿರುವ ಬಿಗ್ ಬಿ ನಿರ್ದೇಶಕ ಆರ್. ಚಂದ್ರು ಅವರನ್ನು ಮುಂಬೈಗೆ ಕರೆಸಿಕೊಂಡು ಎಲ್ಲಾ ಭಾಷೆಗಳ ಟ್ರೇಲರನ್ನು ಬಿಡುಗಡೆ ಮಾಡುತ್ತಿದ್ದಾರೆ.
Upendra Daughter:ಉಪ್ಪಿ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಜೊತೆಗೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರ ಸ್ನೇಹ ಹಲವು ವರ್ಷಗಳದ್ದು. ಉಪ್ಪಿ ನಟನೆಯ ‘ಕಬ್ಜ’ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ ಬಳಿಕ ಶಿವಣ್ಣ ಇಡೀ ತಂಡಕ್ಕೆ ಶುಭ ಹಾರೈಸಿದರು. ಉಪೇಂದ್ರ ಮತ್ತು ಆರ್. ಚಂದ್ರು ಜೊತೆ ತಮಗೆ ಇರುವ ಸ್ನೇಹದ ಬಗ್ಗೆ ಶಿವಣ್ಣ ಮಾತನಾಡಿದರು.
ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಕಬ್ಜ ಸಿನಿಮಾಗೆ ಇಡೀ ಎಲ್ಲಾ ಇಂಡಸ್ಟ್ರಿ ಮತ್ತು ಸ್ಟಾರ್ ನಟನಟಿಯರು ಕೂಡ ಕಾದುಕುಳಿತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.
ಕಲೆ ಅನ್ನೋದು ಯಾರ ಸ್ವತ್ತು ಕೂಡ ಅಲ್ಲ.. ಯಾಕೆ ಈ ಮಾತು ಅಂದ್ರೆ ನಿಮ್ಗೆ ಗೊತ್ತೇ ಇದೆ. ಡೈರೆಕ್ಟರ್ ಆರ್.ಚಂದ್ರು ಎಂಥಹ ದೊಡ್ಡ ಸಾಹಸಕ್ಕೆ ಇಳಿದಿದ್ದಾರೆ ಅನ್ನೋದು. ‘ಕಬ್ಜ’ ಅನ್ನೋ ದೊಡ್ಡ ಬಜೆಟ್ ಸಿನಿಮಾದ ಕಂಪ್ಲೀಟ್ ಜವಾಬ್ದಾರಿ ಡೈರೆಕ್ಟರ್ ಆರ್.ಚಂದ್ರು ಹೊತ್ತಿದ್ದಾರೆ ಅಂದಾಗ ಇವರಿಗೆ ಯಾಕಪ್ಪ ಬೇಕು ಇವೆಲ್ಲಾ? ಗ್ಯಾರಂಟಿ ಕೈಸುಟ್ಟು ಕೊಳ್ಳುತ್ತಾರೆ ಅಂತಾ ಅನೇಕರು ಅವರನ್ನು ಹೀಯಾಳಿಸಿದ್ದೆ ಹೆಚ್ಚು ಅನ್ನೋ ಮಾತು ಈಗ ಅವರ ಆಪ್ತ ಬಳಗ ಹೇಳಿಕೊಳ್ಳುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.