Modi Government: ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ಪರವಾಗಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.(Business News In Kannada) ಸದ್ಯಕ್ಕೆ ಪಿಂಚಣಿದಾರರು ಕನಿಷ್ಠ ಪಿಂಚಣಿ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
Tomato Price: ಮುಂಗಾರು ಆರಂಭವಾದಾಗಿನಿಂದ ಹಣದುಬ್ಬರ ಶ್ರೀಸಾಮಾನ್ಯರ ಜೇಬಿಗೆ ದುಬಾರಿ ಪರಿಣಮಿಸಿದೆ. ಸೊಂಟ ಮುರಿಯುತ್ತಿರುವ ಹಣದುಬ್ಬರದ ನಡುವೆ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಜನರ ಕಣ್ಣು ಕೆಂಪಾಗಿಸಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಮೂರಂಕಿ ತಲುಪಿದೆ.
ನೀವೂ ಒಂದು ವೇಳೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ಹೌದು, ಭಾರತೀಯ ರೈಲ್ವೇ (Indian Railways) ಪ್ರಯಾಣ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಈ ಕಡಿತವು ಎಲ್ಲಾ ರೈಲುಗಳ AC ಚೇರ್ ಕಾರ್ ಮತ್ತು ಕಾರ್ಯನಿರ್ವಾಹಕ ವರ್ಗಕ್ಕೆ ಅನ್ವಯಿಸುತ್ತದೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಿಂದ ಅಧಿಕಾರಕ್ಕೆ ಬಂದಾಗಿನಿಂದ 263 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ 9 ವರ್ಷಗಳ ಮತ್ತು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಕಾರ್ಯಗಳ ಕುರಿತು ಸಂಶೋಧನಾ ಪ್ರಬಂಧವನ್ನು ಇದೇ ವೇಳೆ ಬಿಡುಗಡೆ ಮಾಡಿದರು.
Tomato Rate: ಮುಂಬರುವ 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಲಿದೆ ಮತ್ತು ಉತ್ಪಾದಕ ಕೇಂದ್ರಗಳಿಂದ ಹೆಚ್ಚಿನ ಪೂರೈಕೆಯೊಂದಿಗೆ ಒಂದು ತಿಂಗಳಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.
PPF-SSY-NSC Interest Rates: ಹಣಕಾಸು ಸಚಿವಾಲಯದ ಪರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಈ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಬಾರಿ ಸರ್ಕಾರವು ಆರ್ಡಿ ಬಡ್ಡಿದರಗಳನ್ನು ಶೇಕಡಾ 0.3 ರಷ್ಟು ಹೆಚ್ಚಿಸಿದೆ. ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಏರಿಕೆಯ ನಡುವೆಯೇ ಸರ್ಕಾರ ಈ ಕ್ರಮ ಕೈಗೊಂಡಿದೆ.
Law Minister On UCC: ಏಕರೂಪ ನಾಗರಿಕ ಸಂಹಿತೆ ಕುರಿತು ದೇಶದಲ್ಲಿ ಮತ್ತೊಮ್ಮೆ ಚರ್ಚೆಗಳು ಆರಂಭಗೊಂಡಿವೆ. ಆಡಳಿತ ಪಕ್ಷದ ಜನರು ಇದನ್ನು ಜಾರಿಗೆ ತರಲು ಬಯಸುತ್ತಿದ್ದರೆ, ಪ್ರತಿಪಕ್ಷಗಳು ಅದರ ವಿರುದ್ಧ ನಿಂತಿವೆ. ಇದೇ ವೇಳೆ ಜುಲೈ 13ರವರೆಗೆ ನಿರೀಕ್ಷೆ ಮಾಡುವಂತೆ ಕಾನೂನು ಸಚಿವರು ತಿಳಿಸಿದ್ದಾರೆ.
Uniform Civil Code: ಈ ಕುರಿತು ಮಾತನಾಡಿದ್ದ ಕಾಂಗ್ರೆಸ್ ಹಿರಿಯ ಮುಖಂಡಚಿದಂಬರಂ, “ಪ್ರಧಾನಿ ಯುಸಿಸಿ ಒಂದು ಸರಳ ಪ್ರಕ್ರಿಯೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಈ ಹಿಂದೆ ಇದ್ದ ಕಾನೂನು ಆಯೋಗದ ವರದಿಯನ್ನು ಪ್ರಧಾನಿಗಳು ಒಮ್ಮೆ ಓದಬೇಕು. ಅದು ಈ ಸಮಯದಲ್ಲಿ ಪ್ರಸ್ತುತವಲ್ಲ ಎಂದು ಹೇಳುತ್ತದೆ ಎಂದಿದ್ದರು. ಬಿಜೆಪಿಯವರ ಮಾತು ಮತ್ತು ನಡೆಗಳಿಂದಾಗಿ ಇಂದು ದೇಶ ಇಬ್ಭಾಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರ ಮೇಲೆ ಹೇರಿದ ಯುಸಿಸಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಜೆಂಡಾ ಆಧಾರಿತ ಬಹುಮತದ ಸರ್ಕಾರ ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ" ಎಂಬುದು ಅವರ ಅಭಿಪ್ರಾಯವಾಗಿದೆ.
Aadhaar card: ಜೂನ್ 27 ರಂದು ಪ್ರಕಟವಾದ ಅಧಿಸೂಚನೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನನ ಮತ್ತು ಮರಣಗಳ ನೋಂದಣಿ ಸಮಯದಲ್ಲಿ ಒದಗಿಸಲಾದ ಗುರುತಿನ ವಿವರಗಳನ್ನು ದೃಢೀಕರಿಸಲು ಆಧಾರ್ ಡೇಟಾಬೇಸ್ ಅನ್ನು ಬಳಸಲು RGI ಕಚೇರಿಗೆ ಅನುಮತಿ ನೀಡಿದೆ
ಪ್ರಧಾನಿ ಮೋದಿ ಸರ್ಕಾರದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಉತ್ತಮ ಆಡಳಿತದಿಂದಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಪಾರದರ್ಶಕ ಮತ್ತು ಸಮಯಕ್ಕೆ ಬದ್ಧವಾಗಿದೆ. ಬಡತನ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆ ಹೋಗಲಾಡಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಮೋದಿ ಸರ್ಕಾರದ ಅಂತ್ಯೋದಯ ಯೋಜನೆಗಳಿಂದ ಸಮಾಜದ ಬಡ ವರ್ಗದವರು ಪ್ರಯೋಜನ ಪಡೆದಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.
Modi Government Plan: ಭಾರತದಲ್ಲಿ ತಯಾರಾದ ಮೊದಲ ಸೆಮಿಕಂಡಕ್ಟರ್ ಚಿಪ್ ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಸಿದ್ಧಗೊಳ್ಳಲಿದೆ ಎಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.
New Rules On Electricity: ಗ್ರಾಹಕರ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದ್ದು, ಇದರಿಂದ ನಿಮ್ಮ ವಿದ್ಯುತ್ ಬಿಲ್ ಗಣನೀಯವಾಗಿ ಕಡಿಮೆಯಾಗಲಿದೆ. ವಿದ್ಯುತ್ ದರ ನಿಗದಿಪಡಿಸಲು ‘ದಿನದ ಸಮಯ’ (ಟಿಒಡಿ) ನಿಯಮವನ್ನು ಸರ್ಕಾರ ಜಾರಿಗೆ ತರಲು ಹೊರಟಿದೆ.
Yoga At Work Place: ಇನ್ನು ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ತಾವು ಕುಳಿತ ಕುರ್ಚಿಯಿಂದಲೇ ಅಲ್ಪಾವಧಿಯ ಯೋಗಾಭ್ಯಾಸ ಮಾಡಬಹುದಾಗಿದ್ದು, ಅದಕ್ಕೆ 'ವೈ-ಬ್ರೇಕ್ ಅಟ್ ವರ್ಕ್ಪ್ಲೇಸ್ ಯೋಗ' ಎಂದು ಹೆಸರಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉದ್ಯೋಗಿಗಳು ಒತ್ತಡ ಮುಕ್ತ ಮತ್ತು ಉಲ್ಲಾಸವನ್ನು ಅನುಭವಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ, ಇದರಿಂದ ಅವರು ಉತ್ತಮ ರೀತಿಯಲ್ಲಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬಹುದು ಎಂದು ಹೇಳಲಾಗಿದೆ.
PM Modi: ಈ ಹಿಂದೆ ನೇಮಕಾತಿ ಪ್ರಕ್ರಿಯೆ ನಡೆಸಲು ಸಂಪೂರ್ಣ ಒಂದರಿಂದ ಒಂದೂವರೆ ವರ್ಷ ಬೇಕಾಗುತ್ತಿತ್ತು, ಆದರೆ ಇಂದು ಕೆಲವೇ ತಿಂಗಳಲ್ಲಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಪೂರ್ಣಗೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Wheat Price Latest Update: ಗೋಧಿ ಬೆಲೆಯ ಕುರಿತು ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ನಿಯಂತ್ರಣದಲ್ಲಿಡಲು, ಸರ್ಕಾರವು OMSS ಮೂಲಕ ಗೋಧಿಯನ್ನು ಮಾರಾಟ ನಡೆಸಲಿದೆ. ಇದಲ್ಲದೇ ಸರ್ಕಾರ ಗೋಧಿಯ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ.
New Guidelines for OTT Platforms: OTT ಪ್ಲಾಟ್ಫಾರ್ಮ್ಗಳಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೋದಿ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ ಈಗ ನೆಟ್ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್ಸ್ಟಾರ್ನಂತಹ ಕಂಪನಿಗಳ ಒತ್ತಡ ಹೆಚ್ಚಾಗಿದೆ.
ಲೀವ್ ಎನ್ಕ್ಯಾಶ್ಮೆಂಟ್: ಇದುವರೆಗೆ ಸರ್ಕಾರೇತರ ಉದ್ಯೋಗಿಗಳಿಗೆ ರಜೆ ಎನ್ಕ್ಯಾಶ್ಮೆಂಟ್ನಲ್ಲಿ ತೆರಿಗೆ ವಿನಾಯಿತಿಯ ಮಿತಿ, ಅಂದರೆ ರಜಾದಿನಗಳ ಬದಲಿಗೆ ಸ್ವೀಕರಿಸಿದ ನಗದು ಕೇವಲ 3 ಲಕ್ಷ ರೂ. ಇತ್ತು. ಈ ಮಿತಿಯನ್ನು 2002ರಲ್ಲಿ ನಿಗದಿಪಡಿಸಲಾಗಿತ್ತು, ಆಗ ಸರ್ಕಾರಿ ವಲಯದಲ್ಲಿ ಅತ್ಯಧಿಕ ಮೂಲ ವೇತನವು ತಿಂಗಳಿಗೆ 30,000 ರೂ. ಇತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.