ಸತತ ಎರಡನೇ ದಿನವೂ ಮುಂಬೈನಲ್ಲಿ ಕರೋನವೈರಸ್ ಪ್ರಕರಣಗಳ ಏರಿಕೆಯನ್ನು ಕಂಡಿದೆ.ನಿನ್ನೆ 2,877 ಪ್ರಕರಣಗಳನ್ನು ದಾಖಲಿಸಿರುವ ಮಹಾರಾಷ್ಟ್ರ ರಾಜಧಾನಿ ಕಳೆದ 24 ಗಂಟೆಗಳಲ್ಲಿ 3,062 ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ, ಇದು ನಗರದ ಒಟ್ಟು ಪ್ರಕರಣಗಳಲ್ಲಿ ಇದುವರೆಗಿನ ಗರಿಷ್ಠ ಏಕದಿನ ಹೆಚ್ಚಳವಾಗಿದೆ.
Electricity Bill: ಸಾಮಾನ್ಯ ಬಳಕೆಯ ಜೊತೆಗೆ, ಎಲೆಕ್ಟ್ರಿಕ್ ಕಾರುಗಳು, ಇ-ಬೈಕ್ಗಳನ್ನು ಉತ್ತೇಜಿಸಲು ಮುಂಬಯಿಯಲ್ಲಿ ವಿದ್ಯುತ್ ದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
Auto-Taxi Fare Hike: ಕನಿಷ್ಠ ಆಟೋರಿಕ್ಷಾ ಶುಲ್ಕ (1.5 ಕಿಲೋಮೀಟರಿಗೆ) ಈಗ ₹ 18 ನಿಂದ ₹ 21 ಗೆ ಏರಿಕೆಯಾಗಿದ್ದರೆ, ಕಪ್ಪು ಮತ್ತು ಹಳದಿ ಟ್ಯಾಕ್ಸಿಗಳಿಗೆ ಶುಲ್ಕ (1.5 ಕಿಲೋಮೀಟರಿಗೆ) ₹ 22 ನಿಂದ ₹ 25ಗೆ ಏರಿಕೆ ಆಗಿದೆ.
ಮಹಾರಾಷ್ಟ್ರದಲ್ಲಿ, ಮೂರು ತಿಂಗಳ ನಂತರ ಮೊದಲ ಬಾರಿಗೆ, ಕೋವಿಡ್ -19 ರ 6,000 ಹೊಸ ಪ್ರಕರಣಗಳು ಶುಕ್ರವಾರ ಬಂದಿದ್ದು, ಸಾಂಕ್ರಾಮಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಸೂಚಿಸುತ್ತದೆ. ರಾಜ್ಯದಲ್ಲಿ 6112 ಹೊಸ ಸೋಂಕು ಪ್ರಕರಣಗಳು ಹೆಚ್ಚಾಗಿ ಅಕೋಲಾ, ಪುಣೆ ಮತ್ತು ಮುಂಬೈ ವಿಭಾಗಗಳಿಂದ ಬಂದಿವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
20 ರೂಪಾಯಿಗಾಗಿ ನಡೆದ ವಾಗ್ವಾದದ ನಂತರ ಥಾಣೆ ಜಿಲ್ಲೆಯ ಮೀರಾ ರಸ್ತೆಯಲ್ಲಿ 26 ವರ್ಷದ ರಸ್ತೆ ಬದಿಯ ಇಡ್ಲಿ ಮಾರಾಟಗಾರನನ್ನು ಮೂವರು ಅಪರಿಚಿತ ಗ್ರಾಹಕರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಶುಕ್ರವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಹಾರಾಷ್ಟ್ರದ 21 ಜಿಲ್ಲೆಗಳ ಸಾವಿರಾರು ರೈತರು ನಿನ್ನೆ ನಾಸಿಕ್ನಲ್ಲಿ ಜಮಾಯಿಸಿ ಬೃಹತ್ ರ್ಯಾಲಿ ಮೂಲಕ ಮುಂಬೈನತ್ತ ಪಾದಯಾತ್ರೆ ಹೊರಟಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಜೈಲು ಸೇರಿದ್ದ ನಟಿ ರಿಯಾ ಚಕ್ರವರ್ತಿ ಕಳೆದ ಸೆಪ್ಟೆಂಬರ್ ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಇಷ್ಟು ದಿನಗಳ ಬಳಿಕ ಇದೇ ಮೊದಲ ಬಾರಿಗೆ ರಿಯಾ ಹೊರಗಡೆ ಕಾಣಿಸಿಕೊಂಡಿದ್ದಾರೆ.
New Year Celebration: ಹೊಸ ವರ್ಷದ ಸಂಭ್ರಮಾಚರಣೆಯ ಮೊದಲು ಮುಂಬೈ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಬೆಳಿಗ್ಗೆ 11 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಬೈ ಮತ್ತು ಪುಣೆಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
ಕೊರೆಯುವ ಚಳಿ ಎಲ್ಲರ ಜೀವನವನ್ನು ಕಷ್ಟಕರವಾಗಿಸಿದೆ. ಚಳಿಯನ್ನು ತಪ್ಪಿಸುವ ಸಲುವಾಗಿ ಬಹಳ ಜನರು ಮನೆಯಿಂದ ಹೊರಹೋಗುವುದನ್ನು ಅವಾಯ್ಡ್ ಮಾಡಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಚಳಿಗಾಲದಲ್ಲೂ ಬೇಸಿಗೆ ಅನುಭವವನ್ನು ನೀಡುವ ಹಲವು ಸ್ಥಳಗಳಿವೆ. ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನೀವು ರಜಾದಿನಗಳನ್ನು ಆನಂದಿಸಬಹುದು.
ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳಿಂದಾಗಿ ಅಹಮದಾಬಾದ್ನಲ್ಲಿ ಕರ್ಫ್ಯೂ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆವರೆಗೆ ಇಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶುಕ್ರವಾರದಿಂದ ಕರ್ಫ್ಯೂ ಜಾರಿಗೆ ಬರಲಿರುವ ರಾಗ್ತ್ರಿ ಕರ್ಫ್ಯೂ ಅನಿರ್ದಿಷ್ಟ ಅವಧಿಯವರೆಗೆ ಮುಂದುವರೆಯಲಿದೆ.
ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ 2013 ರಲ್ಲಿ ದೂರದ ಸಂಬಂಧಿಗಳು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ತಿಳಿಸಿದ್ದರು.ಎರಡು ವರ್ಷಗಳ ನಂತರ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡೆನ್ ಇದನ್ನು ಪುನರುಚ್ಚರಿಸಿ ಮುಂಬೈನಲ್ಲಿ ಐದು ಬಿಡೆನ್ಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.
ಅಕ್ಷತ್ ಉತ್ಕರ್ಶ್ ಎಂಬ ಉದಯೋನ್ಮುಖ ನಟ ಮುಂಬೈನ ಅಂಧೇರಿಯಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ನಂತರ ಅಕ್ಷತ್ ಅವರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.