Russia School Firing: ಘಟನೆಯ ಕುರಿತು ಹೇಳಿಕೆ ನೀಡಿರುವ ಉದ್ಮೂರ್ತಿಯಾ ಗಣರಾಜ್ಯದ ಗವರ್ನರ್ ಅಲೆಕ್ಸಾಂಡರ್ ಬುರ್ಚಾಲೋವ್, ಸಂತ್ರಸ್ತರಲ್ಲಿ ಒಬ್ಬನನ್ನು ಶಾಲೆಯ ಭದ್ರತಾ ಸಿಬ್ಬಂದಿ ಎಂದು ಗುರುತಿಸಲಾಗಿದೆ ಎಂದಿದ್ದು, "ಇಂದು ಉದ್ಮೂರ್ತಿಯಾದಲ್ಲಿ ದುರಂತ ಸಂಭವಿಸಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿದಿದ್ದಾರೆ.
ಈ ವಾರ ಉಕ್ರೇನ್ ಯುದ್ಧವು ವಿಶ್ವದ ಉನ್ನತ ರಾಜತಾಂತ್ರಿಕ ಹಂತದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಂತೆ, ಭಾರತವು ರಾಜತಾಂತ್ರಿಕತೆಯ ಮೂಲಕ ಯುದ್ಧವನ್ನು ಕೊನೆಗೊಳಿಸುವ ವಿಚಾರವನ್ನು ಬಲವಾಗಿ ಹೇಳಿದೆ. ಅಷ್ಟೇ ಅಲ್ಲದೆ ಮೊದಲ ಬಾರಿಗೆ ಭಾರತ ದೇಶವು ಕೈವ್-ಮಾಸ್ಕೋ ಸಂಘರ್ಷದ ಬಗ್ಗೆ ತನ್ನ ನಿಲುವನ್ನು ಬಹಿರಂಗವಾಗಿ ತಿಳಿಸಿತು.
NRI News: ಉಜ್ಬೇಕಿಸ್ತಾನದ ಸಿಲ್ಕ್ ರೋಡ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ವಾರ್ಷಿಕ ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಮತ್ತು ಪುಟಿನ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, ರಷ್ಯಾದ ಅಧ್ಯಕ್ಷರು ಭಾರತದ ಶ್ರೀಮಂತ ಇತಿಹಾಸ ಮತ್ತು ಪ್ರಾಚೀನ ಸಂಸ್ಕೃತಿ, ಸಂಪ್ರದಾಯದಲ್ಲಿ ರಷ್ಯಾ ಜನರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.
ವೈರಲ್ ವಿಡಿಯೋವೊಂದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಇಯರ್ಫೋನ್ ಹಾಕಿಕೊಳ್ಳಲು ಪರದಾಡುತ್ತಿರುವುದನ್ನು ಕಾಣಬಹುದು. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ನೋಡುತ್ತಾ ನಗುತ್ತಿದ್ದಾರೆ.
Pak PM Shehbaz Video : ಗುರುವಾರ ಉಜ್ಬೇಕಿಸ್ತಾನ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆದ ಸಭೆಯಲ್ಲಿ ಇಯರ್ಫೋನ್ ಹಾಕಿಕೊಳ್ಳಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಫಲ ಪ್ರಯತ್ನವು ಪಾಕಿಸ್ತಾನಕ್ಕೆ ಗಮನಾರ್ಹ ಮುಖಭಂಗದಂತಾಗಿದೆ.
Bomb Blast outside Russian Embassy: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ರಷ್ಯಾದ ಇಬ್ಬರು ರಾಜತಾಂತ್ರಿಕರೂ ಸೇರಿದ್ದಾರೆ.
ಒಂದು ಕಡೆ ಉಕ್ರೇನ್ ನೆಲದಲ್ಲಿ ರಷ್ಯಾ ಭೀಕರ ದಾಳಿ ನಡೆಸುತ್ತಿದೆ. ದಾಳಿಗೆ ಉಕ್ರೇನ್ ಕೂಡ ಪ್ರತ್ಯುತ್ತರ ನೀಡುತ್ತಿದ್ದರೂ, ಪ್ರಬಲ ರಷ್ಯಾ ದಾಳಿಗೆ ಉಕ್ರೇನ್ ಧೂಳಿಪಟವಾಗಿದೆ. ಇಷ್ಟೆಲ್ಲಾ ನಡೆದರೂ ಉಕ್ರೇನ್ ಇನ್ನೂ ಸಂಪೂರ್ಣವಾಗಿ ಶರಣಾಗಿಲ್ಲ. ಹಾಗಾದರೆ ಉಕ್ರೇನ್ಗೆ ಶಕ್ತಿ ತುಂಬುತ್ತಿರುವ ಆ ಕಾಣದ ಕೈಗಳು ಯಾವುವು..? ಎಂಬ ಪ್ರಶ್ನೆ ಸಹಜವಾಗಿ ಕುತೂಹಲ ಕೆರಳಿಸುತ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಭಾರತ ಬೇರೆ ಅಲ್ಲ, ರಷ್ಯಾ ಬೇರೆಯಲ್ಲ. ಎರಡೂ ದೇಶಗಳು ಅಣ್ಣ-ತಮ್ಮನ ಥರ. ಭಾರತಕ್ಕೆ ಸ್ವತಂತ್ರ ಬಂದ ದಿನದಿಂದಲೂ ರಷ್ಯಾ ಉತ್ತಮ ಸಂಬಂಧ ಉಳಿಸಿಕೊಂಡಿದೆ. ಭಾರತ ಕೂಡ ರಷ್ಯಾ ಜೊತೆಗಿನ ನಂಟು ಬಿಟ್ಟುಕೊಡಲು ಸಿದ್ಧವಿಲ್ಲ. ಆದರೂ ಇದೇ ಮೊಟ್ಟ ಮೊದಲ ಬಾರಿಗೆ ರಷ್ಯಾ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತ ಹಾಕಿದ್ದೇಕೆ..? ಈ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಹಾಗಾದರೆ ಇದು ಕೂಡ ಭಾರತದ ಚಾಣಾಕ್ಷನ ನಡೆ ಯಾಕಾಗಿರಬಾರದು..? ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಒಂದು ಡೀಟೇಲ್ಸ್ ಓದೋಣ ಬನ್ನಿ.
ಕೋಳಿ ಜಗಳದಂತೆ ಆರಂಭವಾಗಿ, ಭೀಕರ ಯುದ್ಧಕ್ಕೆ ತಿರುಗಿದ ಉಕ್ರೇನ್ VS ರಷ್ಯಾ ನಡುವಿನ ಸಮರಕ್ಕೆ ಇಂದಿಗೆ ಭರ್ತಿ 6 ತಿಂಗಳು. ಮಾತುಕತೆ ಮೂಲಕವೇ ಮುಗಿದು ಹೋಗಬೇಕಿದ್ದ ಯುದ್ಧ ಸಾವಿರಾರು ಅಮಾಯಕರ ಪ್ರಾಣತ್ಯಾಗಕ್ಕೆ ಕಾರಣವಾಗಿದೆ.
ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವಾಲಯದ ಪ್ರಕಾರ, “ಐಸಿಸ್ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್ಸ್ಪೇಸ್ ಅನ್ನು ಸಂಬಂಧಪಟ್ಟ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ತಿಳಿಸಿದೆ.
Islamic State suicide bomber arrest : ಭಾರತೀಯ ನಾಯಕರೊಬ್ಬರ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಸದಸ್ಯನಾದ ಆತ್ಮಹತ್ಯಾ ಬಾಂಬರ್ ಅನ್ನು ತನ್ನ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್ಎಸ್ಬಿ) ಸೋಮವಾರ ಹೇಳಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.
ದೇಶದಲ್ಲಿ ಜನಸಂಖ್ಯೆಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಸ್ಟ್ 15 ರಂದು 10 ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಿಗೆ 13 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
Russia Warns USA: "ಯುನೈಟೆಡ್ ಸ್ಟೇಟ್ಸ್ ಇತರ ದೇಶಗಳ ಭದ್ರತೆ ಮತ್ತು ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ, ಇದು ಹೆಚ್ಚಿದ ಪರಮಾಣು ಅಪಾಯಕ್ಕೆ ಕೊಡುಗೆ ನೀಡುತ್ತದೆ" ಎಂದು ರಷ್ಯಾದ ರಾಯಭಾರ ಕಚೇರಿ ತನ್ನ ಟೆಲಿಗ್ರಾಮ್ ಚಾನೆಲ್ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಉಕ್ರೇನ್ನೊಂದಿಗೆ ಯುದ್ಧ ಪ್ರಾರಂಭವಾದಾಗ, ಅಮೆರಿಕದ ಹಸ್ತಕ್ಷೇಪದ ಜೊತೆ ಪರಮಾಣು ದಾಳಿ ಮಾಡುವ ಬೆದರಿಕೆಯನ್ನು ರಷ್ಯಾ ಹಾಕಿತು. ಮತ್ತೊಂದೆಡೆ, ಚೀನಾ ಕೂಡ ಪರಮಾಣು ಹೊಂದಿರುವ ರಾಷ್ಟ್ರವಾಗಿದ್ದು, ತೈವಾನ್ನಿಂದಾಗಿ ಅದು ಅಮೆರಿಕದೊಂದಿಗೆ ಹೋರಾಡುತ್ತಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಐದು ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಭಾರತ, ಜರ್ಮನಿ, ಜೆಕ್ ಗಣರಾಜ್ಯ, ನಾರ್ವೆ ಮತ್ತು ಹಂಗೇರಿ ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.