Viral Video: ಅಂತ್ಯಕ್ರಿಯೆ ಸಂದರ್ಭದಲ್ಲೇ ಚಿತೆಯಿಂದ ಎದ್ದುಕುಳಿತ ವೃದ್ಧೆ! ಸ್ವಲ್ಪ ಲೇಟ್‌ ಆಗಿದ್ರೆ ಶಿವನ ಪಾದ ಸೇರ್ತಿದ್ಯಲ್ಲಮ್ಮ..

bid farewell Video: ವೃದ್ಧೆಯೊಬ್ಬಳು ತಾನು ಸಾಯುತ್ತೇನೆ ಎಂದು ಭಾವಿಸಿ ಕೀಟನಾಶಕ ಸೇವಿಸಿದ್ದಾಳೆ. ಪರಿಸ್ಥಿತಿ ಕೈ ಮೀರಿದಾಗ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದ ಏನೂ ಮಾಡಲಾಗದೆ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಆದರೆ ಆಗ ಇದ್ದಕ್ಕಿದ್ದಂತೆ ಒಂದು ಅನಿರೀಕ್ಷಿತ ಪವಾಡ ಸಂಭವಿಸಿತು.  

Written by - Savita M B | Last Updated : Mar 18, 2025, 01:39 PM IST
  • ಅನಾರೋಗ್ಯದಿಂದ ಸಾವನ್ನಪ್ಪಿದ ವೃದ್ಧೆಯ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ವ್ಯವಸ್ಥೆ ಮಾಡುತ್ತಿದ್ದಾರೆ
  • ಸುತ್ತಮುತ್ತ ನೆರೆದಿದ್ದವರು, ಸಂಬಂಧಿಕರು ಅಜ್ಜಿಯನ್ನು ಕೊನೆಯ ಬಾರಿಗೆ ನೋಡುತ್ತಾ ರೋದಿಸುತ್ತಿದ್ದಾರೆ.
Viral Video: ಅಂತ್ಯಕ್ರಿಯೆ ಸಂದರ್ಭದಲ್ಲೇ ಚಿತೆಯಿಂದ ಎದ್ದುಕುಳಿತ ವೃದ್ಧೆ! ಸ್ವಲ್ಪ ಲೇಟ್‌ ಆಗಿದ್ರೆ ಶಿವನ ಪಾದ ಸೇರ್ತಿದ್ಯಲ್ಲಮ್ಮ..

Viral Video: ಅನಾರೋಗ್ಯದಿಂದ ಸಾವನ್ನಪ್ಪಿದ ವೃದ್ಧೆಯ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ವ್ಯವಸ್ಥೆ ಮಾಡುತ್ತಿದ್ದಾರೆ. ಸುತ್ತಮುತ್ತ ನೆರೆದಿದ್ದವರು, ಸಂಬಂಧಿಕರು ಅಜ್ಜಿಯನ್ನು ಕೊನೆಯ ಬಾರಿಗೆ ನೋಡುತ್ತಾ ರೋದಿಸುತ್ತಿದ್ದಾರೆ. ಇದರ ಮಧ್ಯೆ ಅವರ ಕಣ್ಣುಗಳನ್ನು ನಂಬಲು ಸಾಧ್ಯವಾಗದ ಪವಾಡ ಸಂಭವಿಸಿತು. ಚಿತೆಯ ಮೇಲೆ ನಿಶ್ಚಲವಾಗಿ ಮಲಗಿದ್ದ ಅಜ್ಜಿ ಕಣ್ಣು ತೆರೆದು ಎದ್ದು ಕುಳಿತಳು. ಗಾಬರಿಗೊಂಡ ಸಂಬಂಧಿಕರು ಆರಂಭದಲ್ಲಿ ಆಕೆಯ ಬಳಿಗೆ ಹೋಗಲು ಹಿಂದೇಟು ಹಾಕಿದರು, ಆದರೆ ಅಂತಿಮವಾಗಿ ಅವಳು ಬದುಕಿದ್ದಾಳೆ ಎಂದು ದೃಢಪಡಿಸಿಕೊಂಡು.. ಆಸ್ಪತ್ರೆಗೆ ಸಾಗಿಸಿದರು. ತಮಿಳುನಾಡಿನ ತಿರುಚ್ಚಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಇದನ್ನೂ ಓದಿ: ನೀವು ಕೂಡ ಉದ್ದ ಗಡ್ಡ ಬಿಟ್ಟಿದ್ದರೆ, ಹುಷಾರಾಗಿರಿ..! ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ತಕ್ಷಣ ಈ ವಿಚಾರ ತಿಳಿದುಕೊಳ್ಳಿ

ತಿರುಚ್ಚಿ ಜಿಲ್ಲೆಯ ಮನಪ್ಪಾರೈ ಸಮೀಪದ ಮರುಂಗಾಪುರಿ ಸಮೀಪದ ಕರುಮಲೈ ಸುರಂಗಂಪಟ್ಟಿ ಗ್ರಾಮದ ಪಂಪಯ್ಯನ್ (72) ಮತ್ತು ಅವರ ಪತ್ನಿ ಚಿನ್ನಮ್ಮಾಳ್ (62) ದಂಪತಿಗಳು. ಏನಾಯಿತೋ ಗೊತ್ತಿಲ್ಲ, ನವೆಂಬರ್ 16ರಂದು ಚಿನ್ನಮ್ಮಾಳ್ ವಿಷ ಸೇವಿಸಿದ್ದಳು.. ಇದನ್ನು ಕಂಡ ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಕುಟುಂಬ ಸದಸ್ಯರು ಅವಳನ್ನು ಮನೆಗೆ ಕರೆದೊಯ್ದರು. ರಸ್ತೆ ಮಧ್ಯದಲ್ಲಿಯೇ ಚಿನ್ನಮ್ಮಾಳ್ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಅಂತ್ಯಕ್ರಿಯೆಗಾಗಿ ಸಂಬಂಧಿಕರು ಮತ್ತು ನೆರೆಹೊರೆಯವರು ಜಮಾಯಿಸಿದರು. ಸ್ಮಶಾನದಲ್ಲಿ ಚಿನ್ನಮ್ಮಳ ಅಂತ್ಯಸಂಸ್ಕಾರಕ್ಕೆ ನೂರಾರು ಸಂಬಂಧಿಕರು ಮತ್ತು ಗ್ರಾಮದ ಜನರು ಸೇರಿದರು.. 

ಇದನ್ನೂ ಓದಿ: ನೀವು ಕೂಡ ಉದ್ದ ಗಡ್ಡ ಬಿಟ್ಟಿದ್ದರೆ, ಹುಷಾರಾಗಿರಿ..! ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ತಕ್ಷಣ ಈ ವಿಚಾರ ತಿಳಿದುಕೊಳ್ಳಿ

ಚಿಣ್ಣಮ್ಮಳ ಶವವನ್ನು ಚಿತೆಯ ಮೇಲೆ ಇಟ್ಟು ಇನ್ನೇನು ಅಂತ್ಯ ಸಂಸ್ಕಾರ ಮಾಡುಬೇಕೆನ್ನುವಷ್ಟರಲ್ಲೇ ಅಜ್ಜಿ ಏನು ಆಗೇ ಇಲ್ಲ ಎಂಬಂತೆ ಎದ್ದು ಕುಳಿತಿದ್ದಾರೆ.. ನಂತರ ಕಣ್ಣು ತೆರೆದು ಅಳುತ್ತಿದ್ದ ಸಂಬಂಧಿಕರೊಬ್ಬರ ಕೈ ಹಿಡಿದು ಕುಡಿಯಲು ನೀರು ಕೇಳಿದದ್ದಾಳೆ... ಅಲ್ಲಿದ್ದ ಜನರೆಲ್ಲ ಗಾಬರಿಗೊಂಡರು.. ಬಳಿಕ ಆಕೆ ಬದುಕಿರುವುದು ದೃಢಪಟ್ಟಿದ್ದರಿಂದ ಆಂಬ್ಯುಲೆನ್ಸ್ ಕರೆಸಿ ಚಿನ್ನಮ್ಮಳನ್ನು ಚಿಕಿತ್ಸೆಗಾಗಿ ತಿರುಚ್ಚಿಯ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ (ಎಂಜಿಎಂಜಿಎಚ್) ಸಾಗಿಸಲಾಯಿತು. ಸದ್ಯ ಆಕೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಯಾರೂ ದೂರು ನೀಡಲು ಮುಂದಾಗದ ಕಾರಣ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿರುಚ್ಚಿ ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News