)
ರಸ್ತೆ ಬದಿಗಳಲ್ಲಿ ಕಷ್ಟಪಟ್ಟು ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವವರನ್ನು ನಾವು ದಿನನಿತ್ಯ ಕಾಣುತ್ತೇವೆ. ಆದರೆ, ಇಂತಹವರಿಗೆ ಕೆಲವೊಮ್ಮೆ ಎದುರಾಗುವ ಕಿರುಕುಳ ಮತ್ತು ದೌರ್ಜನ್ಯದ ಘಟನೆಗಳು ಮನಸ್ಸನ್ನು ಕಲಕುತ್ತವೆ. ಇಂತಹದೊಂದು ಹೃದಯವಿದ್ರಾವಕ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನೊಬ್ಬ ಗುಲಾಬಿ ಮಾರಾಟ ಮಾಡುವ ಬಾಲಕಿಗೆ ಕಪಾಳಮೋಕ್ಷ ಮಾಡಿ ಕ್ರೂರವಾಗಿ ವರ್ತಿಸಿರುವ ಘಟನೆ ಎಲ್ಲರ ಗಮನ ಸೆಳೆದಿದೆ.ಕಂಟೆಂಟ್ ಕ್ರಿಯೇಟರ್ ಶಿಖರ್ (@ride_with_shikhar) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಆರಂಭದಲ್ಲಿ, ರಸ್ತೆಯ ಡಿವೈಡರ್ ಬಳಿ ಕುಳಿತು ಗುಲಾಬಿ ಮಾರಾಟ ಮಾಡುವ ಬಾಲಕಿಯೊಬ್ಬಳು ಅಳುತ್ತಿರುವ ದೃಶ್ಯ ಕಾಣುತ್ತದೆ. ಆಕೆಯ ಗೋಳಾಟವನ್ನು ಗಮನಿಸಿದ ಶಿಖರ್, ಆಕೆಯ ಬಳಿ ಏನಾಯಿತು ಎಂದು ವಿಚಾರಿಸಿದ್ದಾರೆ. ಆದರೆ, ಭಯಭೀತಳಾದ ಆ ಬಾಲಕಿ ಯಾವುದಕ್ಕೂ ಉತ್ತರಿಸದೆ ಕೇವಲ ಅಳುತ್ತಲೇ ಇದ್ದಳು. ವಿಡಿಯೋದಲ್ಲಿ, ಶಿಖರ್ರ ಬೈಕ್ ಮುಂದೆ ಇದ್ದ ಆಟೋ ಚಾಲಕನೊಬ್ಬ ಈ ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸಿಗ್ನಲ್ ಬಿಟ್ಟ ತಕ್ಷಣ ಆ ಆಟೋ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ದೃಶ್ಯವನ್ನು ಕಂಡು ಭಾವುಕರಾದ ಶಿಖರ್, ಬಾಲಕಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆಕೆಯಿಂದ ಗುಲಾಬಿಗಳನ್ನು ಖರೀದಿಸಲು ಮುಂದಾಗಿ, ಹಣವನ್ನೂ ನೀಡಿದ್ದಾರೆ. ಆದರೆ, ಆಕೆ ಭಯ ಮತ್ತು ಆಘಾತದಿಂದ ಆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ.ಶಿಖರ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, “ಆ ಸಮಯದಲ್ಲಿ ಆಕೆಗೆ ಹೇಗೆ ಸಹಾಯ ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಗುಲಾಬಿಗಳನ್ನು ಖರೀದಿಸುವ ಬದಲು ನಾನು ಆಕೆಗೆ ಹಣ ನೀಡಿದೆ, ಆದರೆ ಆಕೆ ಅದನ್ನು ತೆಗೆದುಕೊಳ್ಳದೆ ಅಳುತ್ತಲೇ ಇದ್ದಳು. ನಾನು ಆಕೆಯ ತಲೆಯ ಮೇಲೆ ಕೈಯಿಟ್ಟು ಸಮಾಧಾನಪಡಿಸಿದೆ. ಜತೆಗೆ, ಇಂತಹ ವಾಹನಗಳ ಹಿಂದೆ ಓಡಬಾರದೆಂದು ಸಲಹೆ ನೀಡಿದೆ. ಆದರೂ ಆಕೆ ನನ್ನ ಸಹಾಯವನ್ನು ಸ್ವೀಕರಿಸಲಿಲ್ಲ. ಆಕೆ ಹಣ ಸಿಗದೇ ಅಳಲಿಲ್ಲ; ಕಷ್ಟಪಟ್ಟು ದುಡಿಯುವವರ ಮೇಲೆ ಈ ಜಗತ್ತು ದಬ್ಬಾಳಿಕೆ ಮಾಡುತ್ತದೆ ಎಂಬುದೇ ಆಕೆಯ ನೋವು,” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಈ ವಿಡಿಯೋ 42 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕ ಬಳಕೆದಾರರು ಆಟೋ ಚಾಲಕನ ಕ್ರೂರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಬ್ಬ ಬಳಕೆದಾರ, “ಆಕೆ ಹಣ ತೆಗೆದುಕೊಳ್ಳದೇ ಇದ್ದದ್ದು ಈ ಘಟನೆ ಆಕೆಗೆ ಎಷ್ಟು ನೋವುಂಟುಮಾಡಿದೆ ಎಂಬುದನ್ನು ತೋರಿಸುತ್ತದೆ,” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಆಟೋ ಚಾಲಕ ಆಕೆಗೆ ಯಾಕೆ ಹೊಡೆದ? ಇಂತಹ ಕಿರುಕುಳ ಸರಿಯಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು, “ಈ ಬಾಲಕಿ ಬೀದಿಗಳಲ್ಲಿ ಇರಬಾರದು. ಯಾವುದಾದರೂ ಎನ್ಜಿಒ ಮುಂದೆ ಬಂದು ಆಕೆಯನ್ನು ರಕ್ಷಿಸಬೇಕು. ಆಕೆಯನ್ನು ಈ ಕೆಲಸಕ್ಕೆ ಕಳುಹಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಸಲಹೆ ನೀಡಿದ್ದಾರೆ.
ಈ ಘಟನೆಯು ಸಮಾಜದಲ್ಲಿ ದಿನನಿತ್ಯ ಕಷ್ಟಪಡುವವರಿಗೆ ಎದುರಾಗುವ ಸವಾಲುಗಳನ್ನು ಮತ್ತು ಅವರ ಮೇಲಿನ ದೌರ್ಜನ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಇಂತಹ ಘಟನೆಗಳು ಸಮಾಜದಲ್ಲಿ ಸಹಾನುಭೂತಿ ಮತ್ತು ಮಾನವೀಯತೆಯನ್ನು ಮೂಡಿಸುವ ಜತೆಗೆ, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ