Shocking!ಅಮ್ಮನೊಂದಿಗೆ ಸೇರಿ ವರ ಮಾಡಿದ ಈ ಕೆಲಸ!ವಿಷಯ ತಿಳಿದು ಮದುವೆ ಮುರಿದ ವಧು !ಸಾಮಾಜಿಕ ಜಾಲತಾಣದಲ್ಲೂ ಶೇರ್

ವಧು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ಪ್ರಕಾರ ವಧು ಮತ್ತು ವರನ ನಡುವೆ ಐದು ವರ್ಷಗಳಿಂದ ಸಂಬಂಧವಿತ್ತು. ಇಬ್ಬರೂ ನಿಶ್ಚಿತಾರ್ಥ ಕೂಡಾ  ಮಾಡಿಕೊಂಡಿದ್ದರು.

Written by - Ranjitha R K | Last Updated : Mar 17, 2025, 03:46 PM IST
  • ವಧು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು
  • ಇಬ್ಬರೂ ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿದ್ದರು.
  • ಈ ಜೋಡಿ ಮನೆ ಖರೀದಿಸುವ ಯೋಜನೆಯಲ್ಲಿ ಇತ್ತು.
Shocking!ಅಮ್ಮನೊಂದಿಗೆ ಸೇರಿ ವರ ಮಾಡಿದ ಈ ಕೆಲಸ!ವಿಷಯ ತಿಳಿದು ಮದುವೆ ಮುರಿದ ವಧು !ಸಾಮಾಜಿಕ ಜಾಲತಾಣದಲ್ಲೂ ಶೇರ್

28 ವರ್ಷದ ಮಹಿಳೆಯೊಬ್ಬರು ತನ್ನ ಮದುವೆ ಮುರಿದು ಬಿದ್ದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇಲ್ಲಿ ಮದುವೆ ಮುರಿದಿರುವ ಹಿಂದಿನ ಕಾರಣವನ್ನು ಆ ಮಹಿಳೆ ಬಹಿರಂಗಪಡಿಸಿದ್ದಾರೆ. ಮದುವೆ ಮುರಿಯಲು ವರ ತನ್ನ ತಾಯಿಯೊಂದಿಗೆ ಸೇರಿಕೊಂಡು ಮಾಡಿದ ಒಂದು ಕೆಲಸವೇ ಕಾರಣ ಎಂದಿದ್ದಾರೆ. ವರ ಮಾಡಿದ ಈ ಒಂದು ಕೆಲಸದಿಂದ ಬೇಸತ್ತು ವಧು ತಮ್ಮಿಬ್ಬರ ನಡುವಿನ ಐದು ವರ್ಷಗಳ ಸಂಬಂಧವನ್ನು ಮುರಿದಿದ್ದಾರೆ. 

Add Zee News as a Preferred Source

ವಧು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ಪ್ರಕಾರ ವಧು ಮತ್ತು ವರನ ನಡುವೆ ಐದು ವರ್ಷಗಳಿಂದ ಸಂಬಂಧವಿತ್ತು. ಇಬ್ಬರೂ ನಿಶ್ಚಿತಾರ್ಥ ಕೂಡಾ  ಮಾಡಿಕೊಂಡಿದ್ದರು. ಇನ್ನೆನ್ನು ತಮ್ಮ ಭವಿಷ್ಯದ ಬಗ್ಗೆ ಕನಸು ಹೊತ್ತಿದ್ದ ಈ ಜೋಡಿ ಮನೆ ಖರೀದಿಸುವ ಯೋಜನೆಯಲ್ಲಿ ಇತ್ತು. ಆದರೆ, ತಾನು ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿ ತನಗೆ ತಿಳಿಸದೆಯೇ ತನ್ನ ತಾಯಿಯೊಂದಿಗೆ ಸೇರಿ ಮನೆ ಖರೀದಿಸಿದ್ದಾನೆ ಎನ್ನುವ ವಿಚಾರ ವಧುವಿಗೆ ತಿಳಿಯಿತು. ಈ ವಿಚಾರಕ್ಕಾಗಿ ವಧು ಮತ್ತು ವರನ ನಡುವೆ ಜಗಳ ನಡೆದಿದೆ. 

ಇದನ್ನೂ ಓದಿ : Viral Video: ಬಿಸಿಲಿನ ಬೇಗೆ ತಾಳಲಾರದೇ ಬೋರ್‌ ಕೆಳಗೆ ತಲೆಇಟ್ಟು ನಿಂತ ದೈತ್ಯ ಹಾವು! ಮೈ ಜುಮ್ಮೆನಿಸುವ ವಿಡಿಯೋ ವೈರಲ್..‌

ಮದುವೆ ನಿಶ್ಚಯವಾದಾಗಿನಿಂದ ನಾವಿಬ್ಬರೂ ಮನೆ ಖರೀದಿಗೆ ಹಣ ಸಂಗ್ರಹ ಮಾಡಿಕೊಂಡು ಬರುತ್ತಿದ್ದೆವು. ಆದರೆ, ಇದ್ದಕ್ಕಿದ್ದಂತೆ ತನಗೆ ಹೇಳದೆ ಆ ಹಣದಿಂದ ತಾಯಿಯ ಜೊತೆ ಸೇರಿಕೊಂಡು ಮನೆ ಖರೀದಿ ಮಾಡಿರುವುದೇ ವಧುವಿನ ಬೇಸರಕ್ಕೆ ಕಾರಣ. ತನ್ನ ತಾಯಿ ಆಯ್ಕೆ ಮಾಡಿಕೊಂಡಿದ್ದ, ಭಾಗಶಃ ಒಡೆತನದ ಮತ್ತು ತಾನು ಪೂರ್ಣ ಸಮಯ ವಾಸಿಸುವ ಮನೆಗೆ ತೆರಳುವ ಕಲ್ಪನೆಯಿಂದ ತನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. 

ಅಲ್ಲದೆ ಇಷ್ಟು ದೊಡ್ಡ ವಿಷಯವಾದರೂ ಇದು ಸಾಮಾನ್ಯವೆಂದು ಪರಿಗಣಿಸುವ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ತನ್ನ ನಿರ್ಧಾರ ಹೇಳಿದ್ದಾರೆ. ಆದರೆ ವಧುವಿನ ನಿರ್ಧಾರವನ್ನು ಕುಟುಂಬದವರು ಮೊದಲು ವಿರೋಧಿಸಿದರು. ವಧು ತಮಾಷೆ ಮಾಡುತ್ತಿರುವುದಾಗಿ ಅಂದುಕೊಂಡಿದ್ದರು. ಆದರೆ ಮದುವೆ ರದ್ದಾದ ವಿಷಯ ತನ್ನ ಹೆತ್ತವರಿಗೂ ಆಘಾತ ತಂದಿದೆ ಎಂದು ಮಹಿಳೆ ಹೇಳಿದ್ದಾರೆ. 

ಇದನ್ನೂ ಓದಿ : ಹೊಟ್ಟೆಯಲ್ಲಿ ಸಿಕ್ತು ವಜ್ರದ ಕಿವಿಯೋಲೆ: ಇದರ ಹಿಂದಿನ ಕಥೆಯೇ ರೋಚಕ... ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ :
ಈ ಪೋಸ್ಟ್ ಬೇಗನೆ ಬಹಳ ಕಡಿಮೆ ಸಮಯದಲ್ಲಿ ಎಲ್ಲರ ಗಮನ ಸೆಳೆದಿದೆ. ಅನೇಕರು ಮಹಿಳೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇದು ಕೇವಲ ಮನೆ ಖರೀದಿಯ ವಿಷಯ ಅಲ್ಲ. ಮುಂದಿನ ಇಡೀ ಜೀವನದ ಪ್ರಶ್ನೆ ಎಂದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News