viral farmer story: ಯಾವತ್ಮಾಲ್ ಜಿಲ್ಲೆಯ ರೈತನೊಬ್ಬನನ್ನು ರಾತ್ರೋರಾತ್ರಿ ಒಂದು ಮರ ಕೋಟ್ಯಾಧಿಪತಿಯನ್ನಾಗಿ ಮಾಡಿದೆ, ಇದನ್ನು ಯಾರೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಇದು ಪುಸಾದ್ ತಾಲ್ಲೂಕಿನ ಖುರ್ಷಿಯ ರೈತನ ಸತ್ಯ. ಈ ರೈತನ ಹೆಸರು ಕೇಶವ್ ಶಿಂಧೆ. ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತನ ನಸೀಬ್ ಒಂದೇ ರಾತ್ರಿಯಲ್ಲಿ ಬದಲಾಗಿ ಹೋಗಿದೆ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ ನಂತರ, ಮರದ ಬೆಲೆ 4 ಕೋಟಿ 97 ಲಕ್ಷ ರೂ. ಎಂದು ಅಂದಾಜಿಸಿದಾಗ, ಈ ವಿಚಾರ ಬಹಿರಂಗವಾಗಿ ಒಂದು ದೊಡ್ಡ ಕೋಲಾಹಲವನ್ನೆ ಸೃಷ್ಟಿಸಿಬಿಟ್ಟಿದೆ.
ಕೇಶವ್ ಶಿಂಧೆ ಅವರ 7 ಎಕರೆ ಪೂರ್ವಜರ ಜಮೀನಿನಲ್ಲಿ ಒಂದು ಮರವಿದೆ. 2013-14ರವರೆಗೆ, ಶಿಂಧೆ ಕುಟುಂಬಕ್ಕೆ ಈ ಮರ ಯಾವುದು ಎಂಬ ಸಣ್ಣ ಸುಳಿವು ಸಹ ಇರಲಿಲ್ಲ, ರೈಲ್ವೆ ಇಲಾಖೆ 2013-14 ರಲ್ಲಿ ಒಂದು ಸಮೀಕ್ಷೆ ನಡೆಸಿದೆ, ಆ ಸಮಯದಲ್ಲಿ ಕರ್ನಾಟಕದ ಕೆಲವು ಜನರು ಈ ರೈಲು ಮಾರ್ಗವನ್ನು ನೋಡಲು ಬಂದಿದ್ದರು. ಅವರು ಈ ಮರವನ್ನು ನೋಡಿ ಕೆಂಪು ಶ್ರೀಗಂಧದ ಮರ ಇದು ಕೋಟಿ ಕೋಟಿ ಬೆಲೆ ಬಾಳುತ್ತೆ ಎಂದು ಹೇಳಿದ್ದರು, ಆ ಸಮಯದಲ್ಲಿ ಶಿಂಧೆ ಕುಟುಂಬವು ಸಂಪೂರ್ಣ ಆಘಾತಕ್ಕೊಳಗಾಯಿತು. ಇದಾದ ನಂತರ ರೈಲ್ವೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು, ಆದರೆ ರೈಲ್ವೆ ಇಲಾಖೆ ಮರದ ಬೆಲೆಯನ್ನು ಪಾವತಿಸಲು ಸಿದ್ದವಿರಲಿಲ್ಲ.
ಆದ್ದರಿಂದ, ಕುಟುಂಬವು ಖಾಸಗಿ ಸಂಸ್ಥೆಯಿಂದ ಮರವನ್ನು ಮೌಲ್ಯಮಾಪನ ಮಾಡಿಸಿತು. ಆಗ ಅದರ ಬೆಲೆ 4 ಕೋಟಿ 97 ಲಕ್ಷ ರೂಪಾಯಿ ಎಂದು ತಿಳಿದು ಬಂದಿತ್ತು. ಆದರೆ ರೈಲ್ವೆ ಇಲಾಖೆ ಅಷ್ಟು ದೊಡ್ಡ ಮೊತ್ತದ ಹಣವನ್ನು ನೀಡಲು ನಿರಾಕರಿಸಿತ್ತು. ಆದ್ದರಿಂದ ಶಿಂಧೆ ಕುಟುಂಬವು ನ್ಯಾಯಾಲಯದ ಮೊರೆ ಹೋಯಿತು. ಮರದ ಮೌಲ್ಯಮಾಪನಕ್ಕೆ ಪರಿಹಾರವಾಗಿ 1 ಕೋಟಿ ರೂಪಾಯಿಗಳನ್ನು ಠೇವಣಿ ಇಡಲು ನ್ಯಾಯಾಲಯ ಆದೇಶಿಸಿತ್ತು. ಈಗ ರೈತರ ಖಾತೆಗಳಿಗೆ 50 ಲಕ್ಷ ರೂ. ಜಮಾ ಮಾಡಲು ಆದೇಶ ನೀಡಲಾಗಿದೆ. ಶಿಂಧೆ ಕುಟುಂಬಕ್ಕೆ ಆ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ. ಆರಂಭದಲ್ಲಿ, ಶಿಂಧೆ ಕುಟುಂಬವು ಖಾಸಗಿ ಎಂಜಿನಿಯರ್ನಿಂದ ಕೆಂಪು ಶ್ರೀಗಂಧದ ಮರವನ್ನು ಮೌಲ್ಯಮಾಪನ ಮಾಡಿಸಿತ್ತು. ಆದರೆ, ಆಗ ರೈಲ್ವೆ ಇಲಾಖೆ ಅದನ್ನು ನಿರ್ಲಕ್ಷಿಸಿತ್ತು. ಅದು ತುಂಬಾ ಹೆಚ್ಚಾಗಿದ್ದರಿಂದ, ಶಿಂಧೆ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: Viral video: ಮುಳ್ಳುಹಂದಿಯನ್ನೇ ನುಂಗಿದ ದೈತ್ಯ ಹಾವು... ಮುಂದೇನಾಯ್ತು? ವಿಡಿಯೋ ನೋಡಿ
ನೂರು ವರ್ಷ ಹಳೆಯದಾದ ಶ್ರೀಗಂಧದ ಮರಕ್ಕೆ ಪರಿಹಾರವಾಗಿ, ಕೇಂದ್ರ ರೈಲ್ವೆ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ 1 ಕೋಟಿ ರೂ. ಠೇವಣಿ ಇಟ್ಟಿದ್ದು, ಅದರಲ್ಲಿ ನಾಗ್ಪುರ ಪೀಠವು ಬ್ಯಾಂಕಿನಿಂದ 50 ಲಕ್ಷ ರೂ. ಹಿಂಪಡೆಯಲು ಅನುಮತಿ ನೀಡಿದೆ. ಶಿಂಧೆಗೆ ಸಂಪೂರ್ಣ ಪರಿಹಾರ ನೀಡುವ ಉದ್ದೇಶದಿಂದ ಮರದ ಮೌಲ್ಯಮಾಪನ ಮಾಡುವಂತೆಯೂ ಪೀಠ ಆದೇಶಿಸಿದೆ.
ವಾರ್ಧಾ-ಯವತ್ಮಾಲ್-ನಾಂದೇಡ್ ರೈಲ್ವೆ ಯೋಜನೆಗಾಗಿ ಪಂಜಾಬ್ ಶಿಂಧೆ ಅವರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮೌಲ್ಯಮಾಪನದ ನಂತರ ರೈತನಿಗೆ ಉಳಿದ ಮೊತ್ತ ಸಿಗುತ್ತದೆ. ನ್ಯಾಯಮೂರ್ತಿ ಅವಿನಾಶ್ ಖರೋಟೆ ಮತ್ತು ನ್ಯಾಯಮೂರ್ತಿ ಅಭಯ್ ಮಂತ್ರಿ ಅವರ ಮುಂದೆ ಅರ್ಜಿಯ ವಿಚಾರಣೆ ನಡೆಯಿತು. ಪರಿಹಾರಕ್ಕೆ ಸಂಬಂಧಿಸಿದ ಆದೇಶವನ್ನು ಫೆಬ್ರವರಿ 8, 2018 ರಂದು ಅಂಗೀಕರಿಸಲಾಯಿತು ಮತ್ತು ಕೆಂಪು ಶ್ರೀಗಂಧ ಮತ್ತು ಇತರ ಮರಗಳಿಗೆ ಸಂಬಂಧಿಸಿದ ಆದೇಶವನ್ನು ಕೊನೆಯ ವಿಚಾರಣೆಯಲ್ಲಿ ನೀಡಲಾಯಿತು. ಇದಾದ ನಂತರ, ರೈಲ್ವೆ ಇಲಾಖೆಯು 200 ಕೋಟಿ ರೂಪಾಯಿಗಳ ಮೊತ್ತವನ್ನು ಪಾವತಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಾಲಯದಲ್ಲಿ 1 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ.
ಇದನ್ನೂ ಓದಿ: Viral Video: ಫ್ಯಾನ್ ರಿಪೇರ್ ಮಾಡಲು ಬಂದವನೊಂದಿಗೆ ಲವ್ನಲ್ಲಿ ಬಿದ್ದ ಯುವತಿ! ಅಣ್ಣಾ ಏನ್ ಅದೃಷ್ಟ ಮಾಡಿದ್ದೋ ನೀನು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









