ಯಾರ್‌ ಗುರು ಈ ಮಹಾ ಕುಡುಕ..! ಬಾಯಿಯಿಂದಲ್ಲ.. ಮೂಗಿನಿಂದ ಫುಲ್‌ ಬಾಟ್‌ ಖಾಲಿ.. ವಿಡಿಯೋ ನೋಡಿ

Viral Video : ಸಾಮಾಜಿಕ ಮಾಧ್ಯಮಗಳಲ್ಲಿ ಖ್ಯಾತಿ ಗಳಿಸಲು ವ್ಯಕ್ತಿಯೊಬ್ಬ ಮೂಗಿನ ಮೂಲಕ ಬಿಯರ್ ಕುಡಿದಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ, ಇದನ್ನು ನೋಡಿ ವೈದ್ಯರೇ ಶಾಕ್‌ ಆಗಿದ್ದಾರೆ. ಅಸಲಿಗೆ ಮುಂದೆನಾಯ್ತು..? ಆ ವ್ಯಕ್ತಿ ಸತ್ತನೇ.. ಅಥವಾ ಆರೋಗ್ಯವಾಗಿ ಬದುಕುಳಿದನೇ..? ಬನ್ನಿ ನೋಡೋಣ..

Written by - Krishna N K | Last Updated : Jan 23, 2026, 07:20 PM IST
    • ವ್ಯಕ್ತಿಯೊಬ್ಬ ಮೂಗಿನ ಮೂಲಕ ಬಿಯರ್ ಕುಡಿದಿದ್ದಾನೆ.
    • ಇದನ್ನು ನೋಡಿ ವೈದ್ಯರೇ ಶಾಕ್‌ ಆಗಿದ್ದಾರೆ.
    • ಆ ವ್ಯಕ್ತಿ ಸತ್ತನೇ.. ಅಥವಾ ಆರೋಗ್ಯವಾಗಿ ಬದುಕುಳಿದನೇ..?
ಯಾರ್‌ ಗುರು ಈ ಮಹಾ ಕುಡುಕ..! ಬಾಯಿಯಿಂದಲ್ಲ.. ಮೂಗಿನಿಂದ ಫುಲ್‌ ಬಾಟ್‌ ಖಾಲಿ.. ವಿಡಿಯೋ ನೋಡಿ

Shocking incident : ಇಂದಿನ ಡಿಜಿಟಲ್ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು, ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆಯಲು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಅಪಾಯಕಾರಿ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ.

Add Zee News as a Preferred Source

ಹೌದು.. ಪ್ರಸ್ತುತ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ. ಚೀನಾದ ವ್ಯಕ್ತಿಯೊಬ್ಬರು ಮೂಗಿನ ಮೂಲಕ ಬಿಯರ್ ಕುಡಿದಿದ್ದಾರೆ. ತನ್ನ ಮೂಗಿನ ಹೊಳ್ಳೆಯ ಮೂಲಕ ಮದ್ಯ ಸೇವನೆ ಮಾಡಿದ್ದಾರೆ.  ಈ ದೃಶ್ಯವನ್ನು ಕಂಡ ನೆಟ್ಟಿಗರು "ವಿಚಿತ್ರ ಪ್ರತಿಭೆ" ಎಂದು ಟೀಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು "ಮೂರ್ಖತನದ ಪರಮಾವಧಿ" ಎಂದು ವ್ಯಕ್ತಿಗೆ ಜೀವದ ಪಾಠ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಹಾವಿನ ಬಾಯಿಂದ ಮಾತ್ರವಲ್ಲ, ಬಾಲದಿಂದಲೂ ಸಾಯ್ತಾನೆ ಮನುಷ್ಯ.! "ಕಾರ್ಕೋಟಕ ವಿಷದ ಗೂಡು"

ವೈದ್ಯರ ಎಚ್ಚರಿಕೆ : ಈ ರೀತಿಯ ಹುಚ್ಚು ಕೆಲಸಗಳನ್ನು ಮಾಡದಂತೆ ವೈದ್ಯರು ಎಚ್ಚರಿಸುತ್ತಾರೆ. ಹಾಗಿದ್ರೆ, ಮೂಗಿನ ಮೂಲಕ ಮದ್ಯ ಸೇವಿಸಿದರೆ ಏನಾಗುತ್ತದೆ.? ಬನ್ನಿ ನೋಡೋಣ..

ನ್ಯುಮೋನಿಯಾ: ಆಲ್ಕೋಹಾಲ್ ಆಕಸ್ಮಿಕವಾಗಿ ಶ್ವಾಸನಾಳದ ಮೂಲಕ ಶ್ವಾಸಕೋಶಕ್ಕೆ ಪ್ರವೇಶಿಸಿದರೆ, ಅದು ಗಂಭೀರ ಸೋಂಕನ್ನು ಉಂಟುಮಾಡಬಹುದು, ಇದು ಉಸಿರಾಟದ ತೊಂದರೆ ಅಥವಾ ಸಾವಿಗೆ ಕಾರಣವಾಗಬಹುದು.

ಗಂಭೀರ ಕಿರಿಕಿರಿ: ಮೂಗಿನ ಒಳಗಿನ ಲೋಳೆಯ ಪೊರೆಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಬಿಯರ್‌ನಲ್ಲಿರುವ ಆಲ್ಕೋಹಾಲ್ ಮತ್ತು ಕಾರ್ಬನ್ ಡೈಆಕ್ಸೈಡ್ ಮೂಗಿನ ಒಳಪದರಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ: ಮದುವೆ ನಂತರ ನವವಧು ಗಂಡನ ಬಿಟ್ಟು ಬೇರೊಬ್ಬರ ಮನೆಯಲ್ಲಿ ರಾತ್ರಿ ಕಳೆಯಬೇಕು.. ಆ ದಿನ ಅದನ್ನು ಆಕೆ ನೋಡಲೇಬಾರದಂತೆ, ಯಾಕೆ?

ಮೆದುಳಿನ ಮೇಲೆ ಪರಿಣಾಮ: ಮೂಗಿನ ಮೂಲಕ ಮದ್ಯ ಸೇವಿಸಿದ ನಂತರ, ಅದು ರಕ್ತದಲ್ಲಿ ಬೇಗನೆ ಹೀರಲ್ಪಡುತ್ತದೆ, ಇದರಿಂದಾಗಿ ವ್ಯಕ್ತಿಯು ಪ್ರಜ್ಞಾಹೀನನಾಗಬಹುದು.

ಸೂಚನೆ : ತಾತ್ಕಾಲಿಕ ಖ್ಯಾತಿಗಾಗಿ ಇಂತಹ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ. ಇಂತಹ ವೀಡಿಯೊಗಳು ಯುವಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಸಾಮಾಜಿಕ ಮಾಧ್ಯಮವನ್ನು ಮನರಂಜನೆ ಅಥವಾ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲು ಮಾತ್ರ ಬಳಸಬೇಕು.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News